- Sunday
- May 3rd, 2026
ಸುಳ್ಯ ಪೈಚಾರಿನಲ್ಲಿ ಸುಮಾರು 20 ವರ್ಷಗಳಿಂದ ಕಾರ್ಯಚರಿಸುತ್ತಿರುವ ಕೆಪಿ ಮೈದೀನ್ ರವರ ಮಾಲಕತ್ವದ ಫೈವ್ ಸ್ಟಾರ್ ಕಟ್ಲೇರಿ ಮಳಿಗೆ ನವೀಕೃತ ಗೊಂಡು ವಿಶಾಲಗೊಳಿಸಿ ನೂತನ ಮಾದರಿಯಲ್ಲಿ ಕಾರ್ಯಾರಂಭ ಗೊಂಡಿದೆ. ಇದೀಗ ಬೇಕರಿ ಹಾಗೂ ಸ್ವೀಟ್ಸ್ ಪದಾರ್ಥಗಳು ಸಂಸ್ಥೆಯಲ್ಲಿ ಲಭ್ಯವಿದ್ದು ಗ್ರಾಹಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿರುವ ಘಟನೆ ಸೆ.20ರಂದು ನಡೆದಿದೆ. ಇವರಿಬ್ಬರಿಗೂ ಇಂದು ಜಾಮೀನು ದೊರೆತಿದೆ ಎಂದು ತಿಳಿದುಬಂದಿದೆ. ಲಾರಿ ಚಾಲಕ ಬೆಳ್ಳಾರೆ ಗ್ರಾಮ ಕಾವಿನಮೂಲೆ ಅಬ್ದುಲ್ ಖಾದರ್ರವರ ಪುತ್ರ ಖಲಂದರ್(31.ವ) ಹಾಗೂ ಸವಣೂರು ಗ್ರಾಮದ...
ಸವಣೂರು : ಎಸ್ಕೆ ಎಸ್ ಎಸ್ ಎಫ್ ತ್ವಲಬ ವಿಂಗ್ ಸವಣೂರು ಕ್ಲಸ್ಟರ್ ಪ್ರತಿನಿಧಿ ಸಂಗಮ ಪರಣೆ ಮದ್ರಸ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಣೆ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಕುಂಬಮೂಲೆ ರವರು ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಚಾಪಲ್ಲ ದರ್ಸ್ ವಿದ್ಯಾರ್ಥಿ ಮನ್ಸೂರ್ ಖಿರಾಅತ್ ಪಠಿಸಿದರು. ಸ್ಥಳೀಯ ಖತೀಬ್ ಬಶೀರ್ ದಾರಿಮಿ ದುಆ ನೆರವೇರಿಸಿದರು....
ಆಲೆಟ್ಟಿ ಗ್ರಾಮ ಯುವ ಕಾಂಗ್ರೆಸ್ ಘಟಕ ರಚನಾ ಸಭೆ ಸೆ. 20 ರಂದು ಅಲೆಟ್ಟಿ ಸೊಸೈಟಿ ಯ ಸಭಾಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ನೂತನ ಗ್ರಾಮ ಯುವ ಕಾಂಗ್ರೆಸ್ ಘಟಕಕ್ಕೆ ಬ್ಲಾಕ್ ಕಾಂಗ್ರೆಸ್ ಸೂಚನೆಯಂತೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ನಿತಿನ್ ಗುಂಡ್ಯ , ಉಪಾಧಕ್ಷರಾಗಿ ಲತೀಫ್ ಅರಂಬೂರು , ಕಾರ್ಯದರ್ಶಿಯಾಗಿ ಪ್ರಸಾದ್...
ಕರ್ನಾಟಕ ರಾಜ್ಯದಾದ್ಯಂತ ರೈತ ಸಂಘ ಹಾಗೂ ಪ್ರಗತಿಪರ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯ ಅಂಗವಾಗಿ ಸೆಪ್ಟೆಂಬರ್ 21 ರಂದು ಸುಳ್ಯದ ತಾಲೂಕು ಕಛೇರಿ ವಠಾರದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ವತಿಯಿಂದ ನಡೆಯಿತು. ಜೂನ್ 3 ರಂದು ಕೇಂದ್ರ ಸರಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ರೈತ, ಕಾರ್ಮಿಕ,...
ಸುಳ್ಯ ಪೊಲೀಸ್ ಠಾಣೆ ಮುಂಬಾಗ ಗೋಲ್ಡನ್ ಟವರ್ ನಲ್ಲಿ ರಫೀಕ್ ಬಿಎಸ್ ರವರ ಮಾಲಕತ್ವದ ಬೇಕ್ ಮಾರ್ಟ್ ಸೆ. 21ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಮಾಜಿ ಲಯನ್ಸ್ ಗವರ್ನರ್ ಎಂಬಿ ಸದಾಶಿವ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಳ್ಯ ಪೊಲೀಸ್ ಠಾಣಾ ಎಎಸ್ಐ ಭಾಸ್ಕರ್...
ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ, ಗುಳಿಗನ ಕಟ್ಟೆಯ ಬಳಿ ನಿರ್ಮಿಸಲಾದ ನೂತನ ಅಗೇಲು ಸೇವಾ ಕಟ್ಟಡದ ಉದ್ಘಾಟನೆ ಹಾಗೂ ದೇವಾಲಯಕ್ಕೆ ಭೂಮಿ ಖರೀದಿ ಕಾರ್ಯಕ್ರಮಗಳು ಸೆ.21 ರಂದು ಜರುಗಿತು. ಅಗೇಲು ಸೇವಾ ಕಟ್ಟಡದ ಉದ್ಘಾಟನೆಯ ಅಂಗವಾಗಿ ಗಣಹವನ ಹಾಗೂ ದೈವಿಕ ಕಾರ್ಯಗಳು ನೆರವೇರಿತು. ಇದೇ ಸಂದರ್ಭದಲ್ಲಿ ದೇವಾಲಯಕ್ಕೆ ಭೂಮಿ ಖರೀದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ದೇವಾಲಯದ...
ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ನಗರದ ವಿವಿಧ ಭಾಗಗಳಲ್ಲಿ ತಡೆ ಗೋಡೆಗಳು ಕುಸಿದು ಅಪಾರ ನಷ್ಟ ಉಂಟಾಗಿದೆ. ಕಲ್ಲುಮುಟ್ಲು ಅಂಗನವಾಡಿಯ ಬಳಿ , ಬೂಡು ಪರಿಸರದಲ್ಲಿ ಸುಮಾರು 20ಕ್ಕೂ ಹೆಚ್ಚು ಅಡಿಗಳ ಬೃಹತ್ ತಡೆಗೋಡೆಗಳು ಕುಸಿದು ಮನೆಗಳು ಅಪಾಯದ ಅಂಚಿನಲ್ಲಿ ಇದೆ. ಎಲ್ಲ ಪ್ರದೇಶಗಳಿಗೆ ಸೆಪ್ಟೆಂಬರ್ 21ರಂದು ಸುಳ್ಯ ತಹಶೀಲ್ದಾರ್ ಅನಂತ್...
ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ತ್ವಲಬಾ ವಿಂಗ್ ವಿಧ್ಯಾರ್ಥಿ ಸಂಘಟನೆ ವತಿಯಿಂದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ ಸೆ.20 ರಂದು ಸುಳ್ಯ ಸುಪ್ರೀಂ ಹಾಲ್ ನಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಮುಶಾವರ ಸದಸ್ಯ ಶೈಖನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ರವರು ನೆರವೇರಿಸಿದರು.ಅಧ್ಯಕ್ಷತೆಯನ್ನು ಸುಳ್ಯ ವಲಯ ಎಸ್ ಕೆ...
Loading posts...
All posts loaded
No more posts
