ಗುತ್ತಿಗಾರು ಭಜನಾ ಮಂದಿರದಲ್ಲಿ ಶ್ರಮದಾನ

ಗುತ್ತಿಗಾರು ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ಹಾಗೂ ಶ್ರೀ ಕೃಷ್ಣ ಭಜನಾ ಮಂಡಳಿಯ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯ ಸದಸ್ಯರಿಂದ ಗುತ್ತಿಗಾರು ಶ್ರೀ ಕೃಷ್ಣಾ ಭಜನಾ ಮಂದಿರದಲ್ಲಿ ಶ್ರಮದಾನ ಜ.10 ರಂದು ನಡೆಯಿತು.

ಬೆಳ್ಳಾರೆ ಅಂಚೆ ಕಚೇರಿಯಲ್ಲಿ ಪರ್ಸ್ ಬಿದ್ದು ಸಿಕ್ಕಿರುತ್ತದೆ

ಜನವರಿ 07 ರಂದು ಬೆಳ್ಳಾರೆಯ ಅಂಚೆಕಚೇರಿಯಲ್ಲಿ ಅಮೂಲ್ಯ ದಾಖಲೆಗಳುಳ್ಳ ಪರ್ಸ್ ಬಿದ್ದು ಸಿಕ್ಕಿರುತ್ತದೆ. ಸಂಬಂಧಪಟ್ಟವರು ಬೆಳ್ಳಾರೆ ಅಂಚೆಕಚೇರಿಗೆ ಬಂದು ಗುರುತು ಹೇಳಿ ಪರ್ಸ್ ಪಡೆದುಕೊಳ್ಳಬಹುದು ಎಂದು ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸಂಪರ್ಕ ಸಂಖ್ಯೆ 9482251184.
Ad Widget

ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಸ್ವಾತಿ.ಕೆ ಉತ್ತೀರ್ಣ

ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ನ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ವಾತಿ.ಕೆ ರವರು ಉತ್ತೀರ್ಣರಾಗಿದ್ದಾರೆ.ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದು, ಪ್ರಸ್ತುತ ಸುಬ್ರಹ್ಮಣ್ಯದ ಕುಕ್ಕೇ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುದುರೆಮಜಲ್ ಸೀತಾರಾಮ ಗೌಡ ಮತ್ತು ಚೆನ್ನಮ್ಮ ದಂಪತಿಗಳ ಪುತ್ರಿ....

ಶ್ರುತಿ ಬಿ ಎಚ್ ಉಪನ್ಯಾಸಕರ ಆರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣ

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಶ್ರುತಿ ಬಿ ಎಚ್ ಅವರು‌ ಕರ್ನಾಟಕ ರಾಜ್ಯ ಉಪನ್ಯಾಸಕರ ಆರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೊಲ್ಲಮೊಗ್ರು ಗ್ರಾಮ ಪಂಚಾಯತಿ ಸದಸ್ಯ ಅಶ್ವಥ್ ಯಾಲದಾಳು ಅವರ ಪತ್ನಿ.

ಎಡಮಂಗಲ : ಕೊಲ್ಲರ್ನೂಜಿ ಕುಟುಂಬಸ್ಥರ ಧರ್ಮ ನಡಾವಳಿ

ಎಡಮಂಗಲ ಜಾಲ್ತಾರು ತರವಾಡು ಮನೆಯಲ್ಲಿ ಕೊಲ್ಲರ್ನೂಜಿ ಕುಟುಂಬದ ಧರ್ಮದೈವ ಹಾಗೂ ಉಪದೈವಗಳಿಗೆ ಧರ್ಮ ನಡಾವಳಿ ಕಾರ್ಯಕ್ರಮವು ಜ.08 ಹಾಗೂ ಜ.09 ರಂದು ಜರುಗಿತು.ಬೆಳಗ್ಗೆ ಗಣಹೋಮ ನೆರವೇರಿತು. ತದನಂತರ ರಾತ್ರಿಯಿಂದ ಸತ್ಯದೇವತೆ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ರುದ್ರಚಾಮುಂಡಿ, ಗುಳಿಗ ಹಾಗೂ ಉಪದೈವಗಳಿಗೆ ನೇಮ ನಡಾವಳಿ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಬಂಧು - ಮಿತ್ರರು ಹಾಗೂ ಊರವರು...

ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ ಸುಳ್ಯ ಫೈನಾನ್ಸ್ ಕಂಪನಿಯ ಸಿಬ್ಬಂದಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಸುಳ್ಯ ಕೊಶಮಟ್ಟಂ ಫೈನಾನ್ಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಪ್ರಮೋದ್ ಕುಂಟುಕಾನ ಎಂಬ ಯುವಕ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದರು. ಯುವಕನ ಮನೆಯವರು ಕಾಣೆಯಾದ ದಿನದಂದು ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತದನಂತರ ಮನೆಯವರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದರೂ ಎಲ್ಲಿಯೂ ಕೂಡ ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ ಅವರ ಮನೆಯ ಸಮೀಪ ಕಾಡಿನಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ...

ಸುಬ್ರಹ್ಮಣ್ಯ : ಹೋಮಿಯೋಪತಿ ಕ್ಲಿನಿಕ್ “ಹೋಮಿಯೋ ಕೇರ್” ಶುಭಾರಂಭ

ಪ್ರಸಿದ್ಧ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಉತ್ತಮ ವೈದ್ಯರ ಅವಶ್ಯಕತೆ ಅತೀ ಹೆಚ್ಚಾಗಿದ್ದು ,ಇದೀಗ ಸುಬ್ರಹ್ಮಣ್ಯದ ಕಾರ್ತಿಕೆಯ ವಸತಿಗೃಹ ಕಟ್ಟಡದಲ್ಲಿ ಡಾ. ಆದಿತ್ಯ ಚನಿಲ ರವರು ಹೋಮಿಯೋಪತಿ ಕ್ಲಿನಿಕ್ ಆರಂಭಿಸಿದ್ದಾರೆ. ಡಾ. ಆದಿತ್ಯ ರವರು ಪ್ರಾಥಮಿಕ ಶಿಕ್ಷಣವನ್ನು ಗುತ್ತಿಗಾರು ಶಾಲೆಯಲ್ಲಿ ಹಾಗೂ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಸುಬ್ರಹ್ಮಣ್ಯದಲ್ಲಿ ಮುಗಿಸಿ, ಐದುವರೆ ವರ್ಷ ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜ್...

ಭೂಸೇನಾ ಯೋಧ ಜಯಪ್ರಕಾಶ್ ಬಳ್ಳಡ್ಕ ನಿವೃತ್ತಿ

ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಮೋನಪ್ಪ ಗೌಡ ಮತ್ತು ಚಂದ್ರಾವತಿ ದಂಪತಿಯ ಪುತ್ರ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಯಪ್ರಕಾಶ ಬಿ.ಎಂ. ಬಳ್ಳಡ್ಕ ಡಿಸೆಂಬರ್ ನಲ್ಲಿ ಸೇನಾ ನಿವೃತ್ತಿ ಹೊಂದಿದ್ದಾರೆ. ಇವರು ಡಿಸೆಂಬರ್ 2003 ರಲ್ಲಿ ಭಾರತೀಯ ಸೇನೆಯ ಎಂಜಿನಿಯರ್ ವಿಭಾಗದಲ್ಲಿ ಸರ್ವೆ ಟೆಕ್ನಿಷಿಯನ್ ಆಗಿ ಸೇರ್ಪಡೆಯಾಗಿ 17 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ...

ಮತ್ತೆ ಸುಳ್ಯಕ್ಕೆ ಬಂದ ತಹಶೀಲ್ದಾರ್ ಅನಿತಾಲಕ್ಷ್ಮೀ

ಸುಳ್ಯಕ್ಕೆ ತಹಶೀಲ್ದಾರ್ ಆಗಿ ಬಂದಿದ್ದ ಕು.ಅನಿತಾಲಕ್ಷ್ಮೀ ಯವರು ಬಂದು ಕೆಲವೇ ದಿನದಲ್ಲಿ ಗ್ರಾ.ಪಂ.ಚುನಾವಣೆಯ ಹಿನ್ನೆಲೆಯಲ್ಲಿ ಬಂಟ್ವಾಳಕ್ಕೆ ನಿಯೋಜನೆಗೊಂಡಿದ್ದರು. ಇದೀಗ ಸುಳ್ಯ ತಹಶೀಲ್ದಾರ್ ಆಗಿ ಅನಿತಾಲಕ್ಷ್ಮಿಯವರು ಮತ್ತೆ ಸುಳ್ಯಕ್ಕೆ ಮರಳಿದ್ದಾರೆ. ಸುಳ್ಯಕ್ಕೆ ತಹಶೀಲ್ದಾರ್‌ ಬೆಂಗಳೂರಿನಿಂದ ಆಗಮಿಸಿದ್ದ ವೇದವ್ಯಾಸ್ ಮುತಾಲಿಕ್ ಮತ್ತೆ ಸ್ವಕ್ಷೇತ್ರಕ್ಕೆ ಮರಳಿದ್ದಾರೆ.

ಲತಾಶ್ರೀ ಸುಪ್ರೀತ್ ಮೋಂಟಡ್ಕ ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆ

ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಿರಿಯೂರು, ಚಿತ್ರದುರ್ಗದವರು ಆಯೋಜಿಸಿದ್ದ 2020-2021ನೇ ಸಾಲಿನ ದ್ವಿತೀಯ ವಿಶ್ವ ಕನ್ನಡ ಸಾಹಿತ್ಯೋತ್ಸವ ಸಮಾರಂಭದ ವೇದಿಕೆ ಕವಿಗೋಷ್ಠಿಗೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರು ಆಯ್ಕೆಯಾಗಿದ್ದಾರೆ. ಕಾರ್ಯಕ್ರಮವು ಜ.10 ರಂದು ಬೆಂಗಳೂರಿನ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಜರುಗಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಂಗೀತ ಸಂಯೋಜಕರು ಮತ್ತು ಸಾಹಿತಿಗಳಾದ ಡಾ....
Loading posts...

All posts loaded

No more posts

error: Content is protected !!