ಚೊಕ್ಕಾಡಿ : ಮಯೂರಿ ಯುವತಿ ಮಂಡಲದ ವತಿಯಿಂದ ಮ್ಯಾಟ್ ಮತ್ತು ಪಿಲ್ಲೋ ರಚನೆ ಬಗ್ಗೆ ತರಬೇತಿ

ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ ಇದರ ವತಯಿಂದ ಮ್ಯಾಟ್ ಮತ್ತು ಪಿಲ್ಲೋ ತಯಾರಿ ತರಬೇತಿ ಕಾರ್ಯಕ್ರಮ ವು ಇತ್ತೀಚೆಗೆ ಜರಗಿತು. ಕಾರ್ಯಕ್ರಮದಲ್ಲಿ ಯುವತಿ ಮಂಡಲ ದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯೆಯರು ಉಪಸ್ಥಿತರಿದ್ದರು. ಅನೇಕ ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡರು.

ಚಂದ್ರ ಕೋಲ್ಚಾರ್ ಗೆ ಸಹಕಾರಿ ರತ್ನ ಪ್ರಶಸ್ತಿ

ಕರ್ನಾಟಕ ರಾಜ್ಯ ಸರಕಾರದಿಂದ ಕೊಡಲ್ಪಡುವ "ಸಹಕಾರಿ ರತ್ನ " ಪ್ರಶಸ್ತಿಗೆ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಚಂದ್ರ ಕೋಲ್ಚಾರ್ ಭಾಜನರಾಗಿದ್ದಾರೆ.‌ ಇವರು ಐವರ್ನಾಡು ಪ್ರಾ.ಕೃ.ಪ.ಸ.ಸಂಘ ಗೌರವಾಧ್ಯಕ್ಷರಾಗಿದ್ದಾರೆ. ಹಾಗೂ ವೆಂಕಟರಮಣ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿ ಇದರ ನಿರ್ದೇಶಕರಾಗಿದ್ದಾರೆ.
Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಾಸಕ ಎಸ್. ಅಂಗಾರ ಅಧಿಕಾರ ಸ್ವೀಕಾರ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡ ಶಾಸಕ ಎಸ್. ಅಂಗಾರ ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಧಿಕಾರ ಸ್ವೀಕರಿಸಿದರು. ಕೃಷ್ಣ ಶೆಟ್ಟಿ ಕಡಬ ಅವರ ಬದಲಾಗಿ ಮನೋಹರ ರೈ ಅವರನ್ನು ಸರಕಾರ ನೇಮಕಗೊಳಿಸಿತ್ತು. ಅಧಿಕಾರ ಸ್ವೀಕಾರ ವೇಳೆ ಸಮಿತಿ ಸದಸ್ಯರುಗಳಾದ ಮೋಹನ ರಾಮ್ ಸುಳ್ಳಿ, ಪಿ.ಜಿ.ಎಸ್...

ಸುಳ್ಯ ನ.ಪಂ ಅಧ್ಯಕ್ಷ ಉಪಾಧ್ಯಕ್ಷರುಗಳ ಅಧಿಕಾರ ಸ್ವೀಕಾರ

ಚುನಾವಣೆ ಕಳೆದು ಒಂದೂವರೆ ವರ್ಷಗಳ ಬಳಿಕ ಸುಳ್ಯದ ಜನತೆಯ ಬಹಳ ನಿರೀಕ್ಷೆಯಲ್ಲಿದ್ದ ನಗರ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರುಗಳ ಅಧಿಕಾರ ಸ್ವೀಕಾರ ಇಂದು ನಡೆಯಿತು. ಈಗಾಗಲೇ ಅವಿರೋಧವಾಗಿ ಆಯ್ಕೆಗೊಂಡಿರುವ ಅಧ್ಯಕ್ಷ ವಿನಯ್‌ಕುಮಾರ್ ಕಂದಡ್ಕ ಹಾಗೂ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕರವರು ಇಂದು ಬೆಳಗ್ಗೆ ೧೦.೩೫ ಸಮಯ ನಿಗದಿಪಡಿಸಿ ಪಕ್ಷದ ಮುಖಂಡರು ಹಾಗೂ ನಗರ ಪಂಚಾಯತ್‌ನ ಎಲ್ಲಾ ಸದಸ್ಯರ ಸಮ್ಮುಖದಲ್ಲಿ...

ಖಾಸಗಿ ಬಸ್ ನಿಲ್ದಾಣದ ಎದುರು ಕುಸಿತಗೊಂಡಿದ್ದ ಫುಟ್ ಪಾತ್ ದುರಸ್ತಿಗೊಳಿಸಿದ ಕರವೇ

ಖಾಸಗಿ ಬಸ್ ನಿಲ್ದಾಣದ ಎದುರು ಫುಟ್ ಪಾತ್ ಕುಸಿತಗೊಂಡು ಹಲವು ಸಮಯ ಕಳೆದರೂ ದುರಸ್ತಿ ಪಡಿಸಿರಲಿಲ್ಲ. ಇದಕ್ಕೆ ಬಿದ್ದು ಕೆಲವರು ಗಾಯಗೊಂಡ ಘಟನೆ ಕೂಡ ನಡೆದಿತ್ತು. ಇದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಫುಟ್ ಪಾತ್ ದುರಸ್ತಿಗೊಳಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಕರವೇ ಅಧ್ಯಕ್ಷ ಅಶೋಕ್ ಕುಮಾರ್,ರುಕ್ಮಯ್ಯ ಕುರುಂಜಿ,ನಾರಾಯಣ, ಗಣೇಶ ಪಲ್ಲತಡ್ಕ,ವಿಜಯ ಕುರುಂಜಿ,ಚಿದಾನಂದ ಕಲ್ಲಗುಡ್ಡೆ,ಯೋಗೀಶ್...

ಭೂಕುಸಿತದಿಂದ ತೊಂದರೆಗೊಳಗಾಗಿದ್ದ ಜಯರಾಮ ನಾಯರ್ ಗೆ ತಹಶೀಲ್ದಾರ್ ಪರಿಹಾರಧನ ವಿತರಣೆ

ಸುಳ್ಯ ತಾಲೂಕಿನ ಕಸಬಾ ಗ್ರಾಮದ ಕಲ್ಲು ಮುಟ್ಲು ಜಯರಾಮ ನಾಯರ್ ಎಂಬವರ ಮನೆಯ ಮುಂಭಾಗದಲ್ಲಿ ಭೂ ಕುಸಿತ ಉಂಟಾಗಿ ಅವರಿಗೆ ಯಾವುದೇ ಪರಿಹಾರ ಸಿಗದೇ ಅವರು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಗೆ ತಿಳಿಸಿದ್ದರು. ಈ ಬಗ್ಗೆ ಅಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಕೂಡಲೇ ಸಂದಿಸಿದ್ದು...

ಕಳಂಜ : ಬಲೆ ತುಲು ಲಿಪಿ ಕಲ್ಪುಗ ಕಾರ್ಯಾಗಾರ ಮತ್ತು ಭಜನಾ ಶಿಬಿರ ಸಮಾರೋಪ ಹಾಗೂ ಪ್ರಮಾಣಪತ್ರ ವಿತರಣೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ), ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ಹಾಗೂ ಕಲಾ ವಿಕಾಸ (ರಿ) ಕಳಂಜ ಇವರ ಜಂಟಿ ಆಶ್ರಯದಲ್ಲಿ ನಡೆದ 'ಬಲೆ ತುಲು ಲಿಪಿ ಕಲ್ಪುಗ' ಕಾರ್ಯಾಗಾರ ಹಾಗೂ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ವತಿಯಿಂದ ಕಳೆದೆರಡು ತಿಂಗಳಿನಿಂದ ನಡೆದು ಕೊಂಡು ಬಂದಿದ್ದ ಭಜನಾ ಶಿಬಿರದ ಸಮಾರೋಪ...

ಮೈಸೂರು ಮೂಲದ ವೃದ್ಧ ದಂಪತಿಗಳಿಗೆ ಊರಿಗೆ ತೆರಳಲು ಬಸ್ಸಿನ ದರವನ್ನು ನೀಡಿ ಸಹಕರಿಸಿದ ನ.ಪಂ ಸದಸ್ಯ ರಿಯಾಝ್ ಕಟ್ಟೆಕಾರ್

ಸುಬ್ರಮಣ್ಯಕ್ಕೆ ಕೆಲಸ ಅರಸಿಕೊಂಡು ಬಂದಿದ್ದ ವೃದ್ಧ ದಂಪತಿಗಳಿಗೆ ಮರಳಿ ಊರಿಗೆ ತೆರಳಲು ಕೈಯಲ್ಲಿ ಹಣವಿಲ್ಲದೆ ಸುಳ್ಯ ಬಸ್ ನಿಲ್ದಾಣದಲ್ಲಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುತ್ತಿದ್ದ ಸಂದರ್ಭ ಸ್ಥಳೀಯರಿಂದ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ನಗರ ಪಂಚಾಯತಿ ಸದಸ್ಯ ರಿಯಾಜ್ ಕಟ್ಟೆಕಾರ್ ರವರು ವೃದ್ಧ ದಂಪತಿಗಳಿಗೆ ಊರಿಗೆ ತೆರಳಲು ಬಸ್ಸಿನ ದರವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಶೌಚಾಲಯದ ಸ್ವಚ್ಛತೆಯ...

ರಂಗಮನೆಯಲ್ಲಿ ಹಿಮ್ಮೇಳ ತರಗತಿ ಆರಂಭ

ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ, ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆಯಲ್ಲಿಈ ವರ್ಷದ ಯಕ್ಷಗಾನ ಹಿಮ್ಮೇಳ ತರಗತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅತಿಥಿಗಳಾಗಿದ್ದು ಶುಭ ಹಾರೈಸಿದರು. ಹಿಮ್ಮೇಳ ಗುರು ಕುಮಾರ ಸುಬ್ರಹ್ಮಣ್ಯ ವಳಕುಂಜ ಉಪಸ್ಥಿತರಿದ್ದರು. ರಂಗಮನೆ ಅಧ್ಯಕ್ಷರಾದ ಜೀವನ್...

ಸುಳ್ಯ : ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾಗಿ ಸತೀಶ್ ಮೂಕಮಲೆ ಆಯ್ಕೆ

ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ ನೂತನ ನಿರ್ದೇಶಕರಾಗಿ ಸತೀಶ್ ಮೂಕಮಲೆ ಆಯ್ಕೆಯಾಗಿದ್ದಾರೆ. ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ, ವಳಲಂಬೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಳಲಂಬೆ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಯುವಕ ಮಂಡಲ ಗುತ್ತಿಗಾರು, ನ್ಯೂ ಯಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್, ಮಿತ್ರಬಳಗ ವಳಲಂಬೆ, ಶ್ರೀ ಕೃಷ್ಣ...
Loading posts...

All posts loaded

No more posts

error: Content is protected !!