- Monday
- August 17th, 2026
ಕಾಣಿಯೂರು: ತುಳುನಾಡು ಶ್ರೇಷ್ಠ ಸಂಸ್ಕೃತಿ,ಸಂಸ್ಕಾರ ಹೊಂದಿರುವ ಪುಣ್ಯ ಭೂಮಿ.ಮೂವಪ್ಪೆಯಂತಹ ತೀರಾ ಹಿಂದುಳಿದ ಹಳ್ಳಿಯಲ್ಲಿ ದೀಪಾವಳಿ ಹಬ್ಬವನ್ನು ಊರಿನವರೆಲ್ಲರೂ ಸೇರಿಕೊಂಡು ಆಚರಿಸುತ್ತಿರುವುದು ಒಳ್ಳೆಯ ವಿಚಾರ ಎಂದು ಸವಣೂರು ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ಹೇಳಿದರು.ಅವರು ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಸ್ನೇಹಿತರ ಬಳಗ ಕಲ್ಪಡ,ಮೂವಪ್ಪೆ ಇದರ ಆಶ್ರಯದಲ್ಲಿ ಮೂವಪ್ಪೆ ಶಾಲಾ ಕ್ರೀಡಾಂಗಣದಲ್ಲಿ ನಡೆದ 5...
ಹರಿಹರ ಪಲ್ಲತಡ್ಕ ಹಿ.ಪ್ರಾ.ಶಾಲೆಯ ಶಿಕ್ಷಕರು ಪಾಠ ಪ್ರವಚನ ಸರಿಯಾಗಿ ಮಾಡುತ್ತಿಲ್ಲ, ಮಕ್ಕಳಿಗೆ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ, ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದು ಆರೋಪಿಸಿ ಮಕ್ಕಳು ಶಾಲೆಗೆ ಬರದೆ ಮನೆಯಲ್ಲೇ ಕೂತ ಘಟನೆ ವರದಿಯಾಗಿದೆ. ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಇತರೇ ೨ ಶಿಕ್ಷಕರು ಶಾಲೆಗೆ ಸರಿಯಾಗಿ ಬರುತ್ತಿಲ್ಲ, ಬಂದರೂ ತರಗತಿ ನಡೆಸುತ್ತಿಲ್ಲ, ಶಾಲೆಯಲ್ಲಿದ್ದರೂ ತರಗತಿಗೆ ಹಾಜರಾಗುವುದಿಲ್ಲ, ಮಕ್ಕಳಲ್ಲಿ ಬೇಧಭಾವ...
https://youtu.be/ihuD5HqmyCs ಅದ್ವೈತಂ ಕ್ರಿಯೇಷನ್ ವತಿಯಿಂದ ರಚಿಸಿರುವ ಅಮರ್ ಜಾಲ ಕೊರಗಜ್ಜ ಎಂಬ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿತು. ಇದಕ್ಕೆ ಮನೀಷ್ ಪ್ರಜ್ವಲ್ ಅವರ ಸಾಹಿತ್ಯದಲ್ಲಿ ಮೂಡಿಬಂದ ಹಾಡಿಗೆ ಚರಿಷ್ಮಾ ಕಾನಾವು ಅಡ್ಡನಪಾರೆ ಸ್ವರ ನೀಡಿದ್ದಾರೆ. ಚರಿಷ್ಮಾ ಇವರು ದೇವಚಳ್ಳ ಗ್ರಾಮದ ಅಡ್ಡನಪಾರೆ ಕಾನಾವು ರವೀಂದ್ರ ಮತ್ತು ಶ್ರೀಮತಿ ತಾರಾ ದಂಪತಿಗಳ ಪುತ್ರಿ.
ಬಿಟ್ ಕಾಯಿನ್ ಎಂದರೇನು?: ಕೊಳ್ಳುವ, ಮಾರುವ ಮತ್ತು ಹಣ ಸಂಗ್ರಹಿಸುವ ಸಾಧನವಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಪ್ರಚಲಿತಕ್ಕೆ ಬಂದಿರುವುದರಿಂದ ವ್ಯವಹಾರದಲ್ಲಿ ಬಾರಿ ಹಗರಣ ನಡೆದು ಬಂದಿದೆ ಎಂದು ಸುದ್ದಿಯಾಗಿದೆ. ಇದನ್ನು ಗುಪ್ತಲಿಪಿ ಶಾಸ್ತ್ರ ಎಂಬ ತಂತ್ರಜ್ಞಾನದ ಮೂಲಕ ನಡೆಸಲಾಗುತ್ತದೆ. ಅಲ್ಲದೇ ಸದ್ಯದಲ್ಲಿರುವ ಅನೇಕ ವಿದ್ಯುನ್ಮಾನ ಹಂತಗಳಲ್ಲಿ ಬಿಟ್ ಕಾಯಿನ್ ಮೊದಲಿನ ಸ್ಥಾನದಲ್ಲಿ ಇದೆ ಎಂಬುದು ಸತ್ಯ....
ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ರೈತ ಉತ್ಪಾದಕ ಸಂಸ್ಥೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಸೇವಾ ಸದನದಲ್ಲಿ ಏರ್ಪಡಿಸಿದ್ದು, ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ಲಯನ್ ವೀರಪ್ಪ ಗೌಡ ಕಣ್ಕಲ್ ಅವರು ಮಾಹಿತಿ ನೀಡಿದರು.ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಿ ಆ ಮೂಲಕ ಕೃಷಿಯನ್ನು ಉದ್ಯಮವನ್ನಾಗಿಸಿ ಕೃಷಿಕರ ಆದಾಯವನ್ನು ಹೆಚ್ಚಿಸುವುದರಿಂದ ಸುಳ್ಯದಲ್ಲಿ...
ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ ಕಳೆದ ಶೈಕ್ಷಣಿಕ ವರ್ಷ ಸಿರಿಗನ್ನಡ ಪ್ರಕಾಶನ ಚಿತ್ರದುರ್ಗ ಜಿಲ್ಲೆ ಇವರು ಮಕ್ಕಳಿಗೆ ನಡೆಸಿದ ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಶಾಲೆಯ 40ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯಮಟ್ಟದಲ್ಲಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದರು. ಇದೀಗ ಈ ಸಾಧನೆ ಗುರುತಿಸಿ, ಸಿರಿಗನ್ನಡ ಪ್ರಕಾಶನ ಚಿತ್ರದುರ್ಗ ಜಿಲ್ಲೆ 2019-20ನೇ ಸಾಲಿನ ಅತ್ಯುತ್ತಮ ಪ್ರಥಮ ಸಾಧನಾ...
ನಿಂತಿಕಲ್ಲು ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ಸಂಸ್ಥೆಯು 3ನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು ಈ ಹಿನ್ನೆಲೆಯಲ್ಲಿ 'ಲಕ್ಕೀ ಡ್ರಾ' ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯ ಪ್ರಥಮ ಲಕ್ಕೀ ಡ್ರಾ ನ.13ರಂದು ನಡೆದಿದ್ದು, ವಿಜೇತರಾದ ರೋನವ್ ಪ್ರಸಾದ್ ಹಾಲೆಮಜಲು ಇವರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನವನ್ನು ಸಂಸ್ಥೆಯ ಮಾಲಕರಾದ ಪ್ರಕಾಶ್ ಮಾಣಿಬೈಲು ಹಾಗೂ...
ಹಿಂದೂ ಜಾಗರಣ ವೇದಿಕೆ ಮಹಾವಿಷ್ಟು ಘಟಕ ಕಣ್ಕಲ್ ಕೇನ್ಯ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸುಬ್ರಹ್ಮಣ್ಯ ಗೌಡ ಕಣ್ಕಲ್ ರವರ ಮನೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಪದ್ಮನಾಭ ಕೆರೆಕೋಡಿ, ಉಪಾಧ್ಯಕ್ಷರಾಗಿ ಮಾಧವ ಕೆ ಆರ್, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಐನಡ್ಕ, ಕಾರ್ಯದರ್ಶಿಯಾಗಿ ಸದಾನಂದ ಕೆರೆಕೋಡಿ, ಪ್ರಚಾರ ಪ್ರಮುಖ್ ಆಗಿ ಲೋಕೇಶ್ ಕೆರೆಕೋಡಿ, ಸಂಪರ್ಕ ಪ್ರಮುಖ್...
Loading posts...
All posts loaded
No more posts
