ಪೆರಾಜೆ  : ಬಾವಿಗೆ ಬಿದ್ದ ಆನೆ ಮರಿ – ಅರಣ್ಯ ಇಲಾಖೆಯಿಂದ  ಕಾರ್ಯಾಚರಣೆ

ಪೆರಾಜೆಯ ಕಲ್ಚರ್ಪೆ ಬಳಿ ದಮಯಂತಿ ಎಂಬವರ ಜಾಗದಲ್ಲಿರುವ ಪಾಳು ಭಾವಿಗೆ ಕಳೆದ ರಾತ್ರಿ ಆನೆಮರಿಯೊಂದು ಬಿದ್ದಿದೆ. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆನೆ ಮರಿ ರಕ್ಷಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಆನೆ ಮರಿ  ಮೇಲೆ ಬರಲು ಹಿಟಾಚಿ ಬಳಸಿ ದಾರಿ ಮಾಡಲಾಗುತ್ತಿದೆ.

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ:13/04/2026 ಸೋಮವಾರ*01,🐏ಮೇಷರಾಶಿ🐏*📃,ಸಾಮಾಜಿಕ ಕಾರ್ಯಕ್ರಮದಲ್ಲಿ, ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ ಮತ್ತು ನಿಮಗೆ ಹೊಸ ಹುದ್ದೆಯನ್ನು ನೀಡಬಹುದು, ಆದರೆ ಕೆಲವು ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ. ಹಣಕಾಸಿನ ವ್ಯವಹಾರಗಳು ಕೂಡಿ ಬರುತ್ತವೆ. ದೀರ್ಘಾವಧಿಯ ಸಾಲ ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತದೆ. ಹೊಸ ಉದ್ಯೋಗ ಪ್ರಯತ್ನಗಳು ಫಲ...
Ad Widget

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಡಿಸ್ಟಿಂಕ್ಷನ್ ಪಡೆದ ಪೆರಾಜೆ ಗ್ರಾಮದ ಕೊಳಂಗಾಯ ಕುಟುಂಬದ ಯಶ್ ಕೊಳಂಗಾಯ ಹಾಗೂ ತನುಷ್ ಕೊಳಂಗಾಯ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪೆರಾಜೆ ಗ್ರಾಮದ ಕೊಳಂಗಾಯ ಕುಟುಂಬದ ಇಬ್ಬರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.ಬೆಂಗಳೂರಿನ ಯಲಹಂಕದ ರೇವಾ ಇಂಡಿಪೆಂಡೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಯಶ್ ಕೊಳಂಗಾಯ ವಾಣಿಜ್ಯ ವಿಭಾಗದಲ್ಲಿ 580(ಶೇ.96.6) ಅಂಕಗಳನ್ನು ಪಡೆದುಕೊಂಡು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಪೆರಾಜೆ ಗ್ರಾಮದ ಕೊಳಂಗಾಯ ಲೋಲಜಾಕ್ಷ ಹಾಗೂ ಸವಿತಾ.ಕೆ.ಎಲ್ ದಂಪತಿಗಳ ಪುತ್ರ.ಕುಶಾಲನಗರದ...

ಪೆರಾಜೆ : ಕನ್ನಿಕಾ ಇಲೆಕ್ಟ್ರಿಕಲ್ ಶುಭಾರಂಭ

ಪೆರಾಜೆಯಲ್ಲಿ ಸತೀಶ್ ಎಚ್.ಆರ್. ಹೊದ್ದೆಟ್ಟಿ ಮಾಲಕತ್ವದ ಕನ್ನಿಕಾ ಇಲೆಕ್ಟ್ರಿಕಲ್ ಏ.12 ರಂದು ಶುಭಾರಂಭಗೊಂಡಿತು. ಇದರ ಅಂಗವಾಗಿ ಗಣಹೋಮ ನೆರವೇರಿತು.ಇಲ್ಲಿ ಎಲ್ಲಾ ಇಲೆಕ್ಟ್ರಿಕಲ್ ಉಪಕರಣಗಳ ಮಾರಾಟ ಮತ್ತು ದುರಸ್ತಿ, ವಿದ್ಯುತ್ ವಯರಿಂಗ್, ಪ್ಲಂಬಿಂಗ್ ಕೆಲಸ ಹಾಗೂ ಸೋಲಾರ್ ಪಂಪ್ ಅಳವಡಿಸಿಕೊಡಲಾಗುವುದು. ಜನರೇಟರ್ ಬಾಡಿಗೆಗೆ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಶೇ.98 ಫಲಿತಾಂಶ ದಾಖಲಿಸಿದ ಸುಳ್ಯದ ರೋಟರಿ ಕಾಂಪೋಸಿಟ್ ಪದವಿ ಪೂರ್ವ ಕಾಲೇಜು

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಶೇ.98 ಫಲಿತಾಂಶ ದಾಖಲಿಸಿದ ಸುಳ್ಯದ ರೋಟರಿ ಕಾಂಪೋಸಿಟ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯದ ರೋಟರಿ ಕಾಂಪೋಸಿಟ್ ಪದವಿ ಪೂರ್ವ ಕಾಲೇಜು ಶೇ.98 ಫಲಿತಾಂಶ ದಾಖಲಿಸಿದೆ. ಒಟ್ಟು 129 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 127 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 67 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ...

ನಾಗಪಟ್ಟಣ ಸೇತುವೆ ದುರಸ್ತಿ ಹಿನ್ನಲೆ ಏ.15 ರಿಂದ ಮೇ 31 ರವರೆಗೆ ಸಂಚಾರ ಬಂದ್ – ಪರ್ಯಾಯ ಮಾರ್ಗ ಬಳಸಲು ಸೂಚನೆ

ಅಂತಾರಾಜ್ಯ ರಸ್ತೆಯಾಗಿರುವ ಸುಳ್ಯ ಕೋಲ್ಚಾರು-ಬಂದಡ್ಕ ರಸ್ತೆಯಲ್ಲಿರುವ ನಾಗಪಟ್ಟಣ ಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಏ.15 ರಿಂದ ಮೇ.31 ರವರೆಗೆ ದುರಸ್ತಿ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಸೇತುವೆ ಮೇಲೆ ಸಂಚಾರ ಬಂದ್ ಆಗಲಿದ್ದು ಪರ್ಯಾಯ ಮಾರ್ಗ ಬಳಸಲು ಇಲಾಖಾಧಿಕಾರಿಗಳು ಸೂಚನೆ ನೀಡಿದ್ದಾರೆ. ಸುಳ್ಯಕ್ಕೆ ಸಂಚರಿಸುವ ಪ್ರಯಾಣಿಕರು ನಾರ್ಕೋಡು - ಮೇನಾಲ ಕಾಂತಮಂಗಲ ಸುಳ್ಯ ರಸ್ತೆಯನ್ನು ಬಳಸಬಹುದಾಗಿದೆ.

ನಾಲ್ಕು ದಶಕಗಳ ಶಿಕ್ಷಣ ಸೇವೆ ಪೂರೈಸಿದ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು

ಸುಳ್ಯ ತಾಲೂಕು ಮತ್ತು ಇತರೆ ತಾಲೂಕುಗಳ ಪ್ರತಿಯೊಂದು ಮನೆಯಿಂದ ಕನಿಷ್ಠ ಒಬ್ಬ ಇಂಜಿನಿಯರ್ ಹೊರಬರಬೇಕು, ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಶಿಕ್ಷಣ ಕೈಗೆಟಕುವಂತಾಗಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಎ.ಒ.ಎಲ್.ಇ.(ರಿ.) ಇದರ ಸ್ಥಾಪಕಾಧ್ಯಕ್ಷರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರಿಂದ ೧೯೮೬ರಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲ್ಪಟ್ಟು ಸಾರ್ಥಕ ನಾಲ್ಕು ದಶಕಗಳನ್ನು ಪೂರೈಸಿದೆ. ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ...

ಸಾಹಿತಿ, ಜ್ಯೋತಿಷಿ ಎಚ್.ಭೀಮರಾವ್ ವಾಷ್ಠರ್ ರಿಗೆ ಎಲಿಮಲೆಯಲ್ಲಿ ಸನ್ಮಾನ ಮತ್ತು ಕವಿಗೋಷ್ಠಿ ಕಾರ್ಯಕ್ರಮ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ಎಲಿಮಲೆ ಪ್ರೌಢಶಾಲೆಯ ಕನ್ನಡ ಸಂಘ ಜಂಟಿ ಆಶ್ರಯದಲ್ಲಿ ಜರುಗಿದ ಚಾಂದ್ರಮಾನ ಮತ್ತು ಸೌರಮಾನ ಯುಗಾದಿ ವಿಶೇಷತೆಯ ಪ್ರಯುಕ್ತ ಜರುಗಿದ ಕವಿಗೋಷ್ಠಿ ಸಾಹಿತ್ಯ ಕಾರ್ಯಕ್ರಮವು ಎಲಿಮಲೆ ಪ್ರೌಢಶಾಲೆಯ ಅನ್ನಪೂರ್ಣೇಶ್ವರಿ ಭೋಜನ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷರು, ಸಾಹಿತಿ ಹಾಗೂ ಎಲಿಮಲೆ ಸರಕಾರಿ ಪ್ರೌಢಶಾಲೆಯ ಮುಖ್ಯ ಉಪಾಧ್ಯಾಯರಾದ...

ಸುಳ್ಯ ತಾಲೂಕು ಕ್ರೀಡಾಂಗಣ ಪೆವಿಲಿಯನ್ ನಿರ್ಮಾಣಕ್ಕೆ ಅನುದಾನ ಮೀಸಲಿರಿಸುವಂತೆ ಕೆ.ಎಂ ಮುಸ್ತಾಫ ಅವರಿಂದ ಮನವಿ

“ಸುಳ್ಯ ತಾಲೂಕು ಸುಳ್ಯ ನಗರ ವ್ಯಾಪ್ತಿಯ ಶಾಂತಿನಗರ ಎಂಬಲ್ಲಿ ಕ್ರೀಡಾoಗಣ ನಿರ್ಮಾಣ ಕಾಮಗಾರಿ ಅನುದಾನದ ಕೊರತೆಯಿoದ ಪೂರ್ಣಗೊಂಡಿರುವುದಿಲ್ಲ. ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಲ್ಲಿ ಪೆವಿಲಿಯನ್ ನಿರ್ಮಾಣ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಣ ಮೀಸಲಿರಿಸುವಂತೆ” ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷರಾದ ಕೆ.ಎಂ. ಮುಸ್ತಫ ರವರು ಬೆಂಗಳೂರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ...

ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ತೆರಳುವ ತಂಡಗಳಿಗೆ ಜೆರ್ಸಿ ವಿತರಣೆ ಹಾಗೂ ಶುಭ ಹಾರೈಕೆ ; “ಕ್ರೀಡೆಯ ಮೂಲಕ ನಾಡಿಗೆ ಕೀರ್ತಿ ತರಲು ಕ್ರೀಡಾಪಟುಗಳು ಶ್ರಮಿಸಬೇಕು” : ಜಯಪ್ರಕಾಶ್ ರೈ

ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಮೂಡಬಿದಿರೆ ಸ್ವರಾಜ್ ಮೈದಾನದಲ್ಲಿ ನಡೆಯಲಿರುವ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ತೆರಳುವ ಸುಳ್ಯ ತಾಲೂಕಿನ ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ತಂಡಕ್ಕೆ ಆರಂಬೂರು ಗಣೇಶ್ ಇಂಡಸ್ಟ್ರೀಸ್ ಮಾಲಕ ಜಗದೀಶ್ ಸರಳಿ ಕುಂಜ ಮತ್ತು ದುರ್ಗಾ ದೇವಿ ಸ್ಟ್ರೈಕರ್ಸ್ ಅಧ್ಯಕ್ಷ ರಕ್ಷಿತ್...
Loading posts...

All posts loaded

No more posts

error: Content is protected !!