ಬೆಂಡೋಡಿ ಸೇತುವೆಯ ಸಂಪರ್ಕ ಕಡಿತ – ಈ ಬಾರಿಯೂ ಸಂಕಷ್ಟಕ್ಕೆ ಸಿಲುಕಿ ಬೆಂಡೋಡಿ ಜನತೆ

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಸೇತುವೆ ಇಂದು ಸುರಿದ ಭಾರಿ ಮಳೆಗೆ ಕಳೆದ ವರ್ಷದಂತೆ ಈ ಬಾರಿಯೂ ಸಂಪರ್ಕ ಕಳೆದುಕೊಂಡಿದೆ. ನಿನ್ನೆಯಿಂದ ಕಲ್ಮಕಾರು, ಕೂಜುಮಲೆ, ಕಡಮಕಲ್ ಭಾಗದಲ್ಲಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಮೋರಿ ಅಳವಡಿಸಿ ಮರಳು ಚೀಲ ಇರಿಸಿ ನಿರ್ಮಿಸಿದ್ದ ಸಂಪರ್ಕ ಮತ್ತೆ ಕೊಚ್ಚಿಹೋಗಿದೆ. ಕಳೆದ ಬಾರಿ ಉಂಟಾದ...

ಪುಳಿಕುಕ್ಕು ಬಳಿ ರಸ್ತೆಗೆ ನುಗ್ಗಿದ ಕುಮಾರಧಾರ ನದಿ ನೀರು

ಭಾರಿ ಮಳೆಯಿಂದಾಗಿ ಕುಮಾರಧಾರ ನದಿಯು ಉಕ್ಕಿ ಹರಿಯುತ್ತಿದ್ದು, ಪಂಜ ಸಮೀಪದ ಪುಳಿಕುಕ್ಕು ಎಂಬಲ್ಲಿ ಹೊಳೆ ನೀರಿನ ನೆರೆ ಮುಖ್ಯ ರಸ್ತೆಯಲ್ಲಿ ತುಂಬಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಕಡಬ-ಪಂಜ ಕಡೆಗೆ ಸಂಚರಿಸಲು ನಿಂತಿಕಲ್ಲು -ಎಡಮಂಗಲ ರಸ್ತೆಯಾಗಿ ಪರ್ಯಾಯ ರಸ್ತೆಯನ್ನು ಬಳಸಬೇಕಾಗಿದೆ.
Ad Widget

ಜಾರುಬಂಡಿಯಂತಾದ ಶೆಟ್ಟಿಗದ್ದೆ ಜೋಗಿಬೆಟ್ಟು ಮಂಞನಕಾನ ರಸ್ತೆ

✍️ ಭಾಸ್ಕರ ಜೋಗಿಬೆಟ್ಟು ಭಾರಿ ಮಳೆ ಸುರಿಯುತ್ತಿರುವುದರಿಂದ ಜೋಗಿಬೆಟ್ಟು ಮಂಞನಕಾನ ಸಂಪರ್ಕ ಮಾಡುವ ರಸ್ತೆಯು ಹದೆಗೆಟ್ಟು ಈ ಭಾಗದ ಜನರಿಗೆ ಬಹಳ ತೊಂದರೆಯುನ್ನು ಉಂಟುಮಾಡುತ್ತಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಈ ರಸ್ತೆಯ ಅಧೋಗತಿಯನ್ನು ನೋಡುವವರು ಕೇಳುವವರು ಯಾರು ಇಲ್ಲದಂತಾಗಿದೆ. ಸರಿಯಾದ ಚರಂಡಿ ವ್ಯವಸ್ತೆ ಇಲ್ಲದೆ ಮಳೆಯ ನೀರು ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿಯುವುದರಿಂದ...

ಹಳೆಗೇಟು ಬಳಿ ಬೈಕ್ ಮುಖಾಮುಖಿ ಡಿಕ್ಕಿ, ಆಸ್ಪತ್ರೆಗೆ ದಾಖಲು .

ಹಳೆಗೇಟು ಬಳಿ ನಿನ್ನೆ ಸಂಜೆ ಬೈಕ್ ಗಳ ಮಧ್ಯೆ ಪರಸ್ಪರ ಡಿಕ್ಕಿಯಾಗಿ ಸವಾರರಿಗೆ ಗಾಯವಾದ ಘಟನೆ ನಡೆದಿದೆ. ಬೆಟ್ಟಂಪಾಡಿಯ ಸ್ಮರಣ್ ಗಾಯಗೊಂಡವರು. ಪೈಚಾರ್ ನಿಂದ ಸುಳ್ಯಕ್ಕೆ ಬೈಕ್ ನಲ್ಲಿ ಬರುತ್ತಿದ್ದಾಗ ಸುಳ್ಯದಿಂದ ಪೈಚಾರ್ ಕಡೆಗೆ ಬರುತ್ತಿದ್ದ ಇನ್ನೊಂದು ಬೈಕ್ ಕಾರ್ ಅನ್ನು ಒವರ್ ಟೇಕ್ ಮಾಡುವ ಭರದಲ್ಲಿ ಸ್ಮರಣ್ ರವರ ಬೈಕಿಗೆ ಢಿಕ್ಕಿಯಾಗಿದ್ದು ಅವರು ಅಲ್ಲೆ...

ಅರಂಬೂರಿನ ಇಡ್ಯಡ್ಕ ಸರಕಾರಿ ಶಾಲೆಯಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ, ಅರಂಬೂರು ಇಲ್ಲಿ ಮೆಂಡ ಫೌಂಡೇಶನ್, ಎಸ್.ಪಿ. ಗ್ಲೋಬಲ್ ಮತ್ತು ಸೆಲ್ಕೋ ಸೋಲಾರ್ ಸಂಸ್ಥೆಯ ಸಹಯೋಗದೊಂದಿಗೆ ಒಂದು ಲಕ್ಷ 75 ಸಾವಿರ ರೂ. ವೆಚ್ಚದಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಸಿಸ್ಟಮ್ ನ್ನು ಕೊಡುಗೆಯಾಗಿ ನೀಡಲಾಗಿದ್ದು, ಈ ಸ್ಮಾರ್ಟ್ ಸಿಸ್ಟಮ್ ಉದ್ಘಾಟನಾ ಕಾರ್ಯಕ್ರಮ ಜು.22 ರಂದು ನಡೆಯಿತು. ಸಭಾ...

ಕಾಂತಮಂಗಲದಲ್ಲಿ ಪ್ರವಾಹ ಭೀತಿ, ಕರಿಯಮೂಲೆ ತೋಟಗಳಿಗೆ ನುಗ್ಗಿದ ನೀರು .

ನಿನ್ನೆ ರಾತ್ರಿಯಿಂದ ಅಜ್ಜಾವರದ ಕರಿಯಮೂಲೆಯ ರಾಮ್ ಪ್ರಸಾದ್ ಕಾರ್ನಿಕ , ವಿಶ್ವನಾಥ ರಾವ್ ಸರಿದಂತೆ ಇತರರ ತೋಟಗಳಿಗೆ ನೀರು ನುಗ್ಗಿದ ಘಟನೆ ವರದಿಯಾಗಿದೆ.ಮೊನ್ನೆಯಿಂದ ಘಟ್ಟ ಹಾಗೂ ಕರಾವಳಿಯಾಧ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಪಯಸ್ವಿನಿ ಉಕ್ಕಿ ಹರಿಯುತ್ತಿದ್ದು ಕಾಂತಮಂಗಲ ರಾಘವೇಂದ್ರ ಮಠ ಹಾಗೂ ಇತರ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಂಭವವಿದ್ದು ಮುನ್ನೆಚ್ಚರಿಕೆ ಕೈಗೊಳ್ಳಬೇಕಿದೆ

ಸುಬ್ರಹ್ಮಣ್ಯ: ಹೆದ್ದಾರಿಗೆ ನುಗ್ಗಿದ ಕುಮಾರಧಾರ ನದಿಯ ಪ್ರವಾಹ ನೀರು

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದ ನೀರು ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ಅಡಚನೆ ಉಂಟಾಯಿತು.ಕುಮಾರಧಾರ ನದಿಯಲ್ಲಿ ಬಾರೀ ನೀರು ಹೆಚ್ಚಳದಿಂದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಇಲ್ಲಿನ ಲಗೇಜ್ ಕೊಠಡಿ, ಶೌಚಾಲಯ ಎಲ್ಲವೂ ಮುಳುಗಡೆಯಾಗಿದೆ.ಮಂಜೇಶ್ವರ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ನದಿಯ...

ಎಣ್ಮೂರು ಪ್ರೌಢಶಾಲೆಯಲ್ಲಿ ಆಟಿ ಆಚರಣೆ ಮತ್ತು ಆಟಿ ತಿನಿಸುಗಳ ಸ್ಪರ್ಧೆ

ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಆಟಿ ತಿಂಗಳ ವಿಶಿಷ್ಟ ಖಾದ್ಯಗಳ ಪ್ರದರ್ಶನ ಮತ್ತು ಆಟಿ ಆಚರಣೆ ಜುಲೈ 22 ರಂದು ನಡೆಯಿತು. ತುಳುನಾಡು ಅನೇಕ ವಿಶಿಷ್ಟ ಹಬ್ಬಗಳ ತವರೂರು, ಇಲ್ಲಿನ ಭಾಷೆ ಸಂಸ್ಕೃತಿ ಆಚರಣೆ ಹಬ್ಬ ಹರಿದಿನ ಪ್ರತಿಯೊಂದರಲ್ಲೂ ತುಳುನಾಡಿನ ಮಣ್ಣಿನ ಸೊಗಡು ಘಮಘಮಿಸುತ್ತಿರುತ್ತದೆ. ಇದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಸದುದ್ದೇಶದಿಂದ ಶಾಲೆಯಲ್ಲಿ ಹಲವಾರು...

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಆಟಿದ ಲೇಸು” ಕಾರ್ಯಕ್ರಮ

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿದ ಲೇಸು ಕಾರ್ಯಕ್ರಮ ಜು.22ರಂದು ನಡೆಯಿತು. ಕಾರ್ಯಕ್ರಮ ಶಾಲಾ ಆಡಳಿತ ಮಂಡಳಿ ಸಹಕಾರದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ವಿದ್ಯಾಬೋಧಿನೀ ಎಜುಕೇಷನ್ ಸೊಸೈಟಿ ಬಾಳಿಲ ಇದರ ಕೋಶಾಧಿಕಾರಿಯಾದ ರಾಧಾಕೃಷ್ಣ ರಾವ್ ಉಡುವೆಕೋಡಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಾಬು ಅಜಿಲ ಆಟಿ ತಿಂಗಳ ವೈಶಿಷ್ಟ್ಯತೆಯ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಶಾಲಾ...

ವಿದ್ಯುತ್ ಲೈನ್ ದುರಸ್ತಿ ವೇಳೆ ಬಿದ್ದ ಕಂಬ, ಪವರ್ ಮ್ಯಾನ್ ಗೆ ಗಾಯ

ಸುಳ್ಯ ಸಂಪಾಜೆಯಲ್ಲಿ ವಿದ್ಯುತ್ ಲೈನ್ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಿದ್ದು ಕಂಬದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪವರ್ ಮ್ಯಾನ್ ಗಾಯಗೊಂಡ ಘಟನೆ ಸಂಪಾಜೆಯ ಚಟ್ಟೆಕಲ್ಲಿನಲ್ಲಿ ಇಂದು ನಡೆದಿದೆ. ಇಂದು ವಿಪರೀತ ಗಾಳಿ ಮಳೆಗೆ ವಿದ್ಯುತ್ ಲೈನ್ ತುಂಡಾಗಿದ್ದು,ತಕ್ಷಣವೇ ದುರಸ್ತಿ ಮಾಡಲು ಕಂಬ ಹತ್ತಿದ ಪವರ್ ಮ್ಯಾನ್ ಸಂಗಮೇಶ ಎಂಬವರು ಕೆಲಸ...
Loading posts...

All posts loaded

No more posts

error: Content is protected !!