- Tuesday
- September 1st, 2026
ಸುಳ್ಯ ಶಾಂತಿನಗರ ನಿವಾಸಿ 17 ವರ್ಷದ ಬಾಲಕ ಹೊಟ್ಟೆ ನೋವು ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಮೃತ ಬಾಲಕ ಸುಳ್ಯ ಶಾಂತಿನಗರ ನಿವಾಸಿ ಸಂಜೀವ ಎಂಬುವರ ಪುತ್ರ ಶ್ರೀಜಿತ್. ಈತನಿಗೆ ಕಳೆದ ಎರಡು ದಿನಗಳಿಂದ ಹೊಟ್ಟೆ ನೋವು ಕಾಣಿಸಿದ್ದು ಆಗಸ್ಟ್ 13ರಂದು ನೋವು ಉಲ್ಬಣಗೊಂಡು ಮನೆಯವರು ಸುಳ್ಯ...
ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಮತ್ತು ಕಿರಣರಂಗ ಅಧ್ಯಯನ ಸಂಸ್ಥೆ(ರಿ.) ಗುತ್ತಿಗಾರು ಇವುಗಳ ಸಹಯೋಗದೊಂದಿಗೆ ಗ್ರಂಥಾಲಯ ಪಿತಾಮಹ ಡಾ| ಎಸ್.ಆರ್.ರಂಗನಾಥನ್ ಜನ್ಮದಿನೋತ್ಸವ, ಗ್ರಂಥಪಾಲಕರ ದಿನಾಚರಣೆ, ಮಕ್ಕಳ ಕಥಾ ಸಂಕಲನ ಬಿಡುಗಡೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವು ಆ.13 ರಂದು ಗುತ್ತಿಗಾರು ಗ್ರಾಮ ಪಂಚಾಯತ್...
ಸುಳ್ಯದ ಅರಂಬೂರು ಬಳಿಯ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿರುವ ವ್ಯಕ್ತಿಯ ಶವವನ್ನು ಗುರುತಿಸಲಾಗಿದೆ. ಮೃತ ವ್ಯಕ್ತಿಯನ್ನು ಮಡಿಕೇರಿ ತಾಲೂಕು ಎಂ ಚೆಂಬು ಗ್ರಾಮದ ಬಾಲಕೃಷ್ಣ (65 ವರ್ಷ) ಎಂದು ಗುರುತಿಸಲಾಗಿದೆ . ಮಿನುಂಗೂರು ಮನೆಯ ಬಾಲಕೃಷ್ಣ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಆಗಸ್ಟ್ 8ರಂದು ಚೆಂಬುವಿನಲ್ಲಿರುವ ತನ್ನ ಮನೆಯಿಂದ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವುದಕ್ಕೆ ಅರಂತೋಡಿಗೆ...
ಕಡಬ ತಾಲೂಕಿನ ಎಡಮಂಗಲ ಗ್ರಾಮದ ಪಾದೆ ಬಾಲಕೃಷ್ಣ ಗೌಡ (56) ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾರೆ.2023ರ ಜುಲೈ 31ರಂದು ಮನೆಯಿಂದ ಹೊರಗೆ ಹೋದ ಅವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.5.7 ಎತ್ತರದ ಬಾಲಕೃಷ್ಣ ಗೌಡ ಎಣ್ಣೆಕಪ್ಪು ಬಣ್ಣ ಹೊಂದಿದ್ದಾರೆ. ಕನ್ನಡ, ತುಳು, ಹಿಂದಿ, ತಮಿಳು, ಮಲೆಯಾಳಂ ಮತ್ತು ಮರಾಠಿ...
ಹಿಂದೂ ಭಾಂದವರು ಮುರುಳ್ಯ ಇದರ ವತಿಯಿಂದ ಕೆಸರ್ ಡ್ ಒಂಜಿದಿನ ಕಾರ್ಯಕ್ರಮ ನಡೆಯಿತು. ಮುರುಳ್ಯ ಗ್ರಾಮದ ಪೂದೆ ಕೋಡಿಯಡ್ಕ ಗದ್ದೆಯಲ್ಲಿ ಕೆಸರ್ ಡ್ ಒಂಜಿದಿನ ದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭಾಗವಹಿಸಿದರು. ನಂತರ ಆಟಿಯ ಮಹತ್ವ ಮತ್ತು ಸಂಸ್ಕೃತಿ ಉಳಿಸುವುದರ ಬಗ್ಗೆ ಮಾನ್ಯ ಶಾಸಕರು ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ...
ಸುಳ್ಯದ ಪಾಲಡ್ಕ ಪಯಸ್ವಿನಿ ನದಿಯಲ್ಲಿ ಆ.13ರಂದು ಕಂಡು ಬಂದ ಅಪರಿಚಿತ ಮೃತದೇಹವನ್ನು ಮೇಲೆತ್ತಲು ಸುಳ್ಯದ ಪೈಚಾರಿನ ಈಜು ತಜ್ಞರ ತಂಡದ ಸದಸ್ಯರು ಸಹಕರಿಸಿದ್ದಾರೆ. ತಂಡದಲ್ಲಿ ಸದಸ್ಯರುಗಳಾದ ಆರ್ ಬಿ ಬಶೀರ್, ಅಬ್ಬಾಸ್ ಶಾಂತಿನಗರ, ಶಿಯಾಬ್ ಬೆಟ್ಟಂಪಾಡಿ, ನೂರುದ್ದೀನ್, ಶಾರಿಕ್, ಅಶ್ರಫ್ ಅಚ್ಚಪ್ಪು, ಮೊದಲಾದವರು ಪಾಲ್ಗೊಂಡಿದ್ದರು. ಪೈಚಾರಿನ ಈಜು ತಜ್ಞರ ತಂಡದ ಸದಸ್ಯರು ಇಂತಹ ನೂರಾರು ಕಾರ್ಯಗಳ...
ಆಲೆಟ್ಟಿ ಗ್ರಾಮದ ಅರಂಬೂರು ಪಾಲಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ ಯಾಗಿರುವ ಘಟನೆ ಇದೀಗ ವರದಿಯಾಗಿದೆ. ಸ್ಥಳೀಯರು ನದಿಗೆ ಗಾಳ ಹಾಕಲು ನಡೆದುಕೊಂಡು ಹೋಗುತ್ತಿರುವವರಿಗೆ ಕಂಡಿದ್ದು ಅವರು ಕೂಡಲೇ ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು ರವರಿಗೆ ವಿಷಯ ತಿಳಿಸಿದರು. ಸುಳ್ಯ ಪೋಲಿಸರಿಗೆ ತಕ್ಷಣ ಮಾಹಿತಿ ನೀಡಲಾಗಿದ್ದು ಇದೀಗ ಪೋಲಿಸ್...
ಸುಳ್ಯದಲ್ಲಿ ಆದಾರ್ ಕಾರ್ಡ್ ತಿದ್ದುಪಡಿ ಮಾಡಲೆಂದು ಅರಂತೊಡಿಗೆ ಬಂದ ಚೆಂಬು ಗ್ರಾಮದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ .ಆ.8 ರಂದು ಚೆಂಬುಗ್ರಾಮದ ಮಿನುಂಗೂರು ಮನೆ ಬಾಲಕೃಷ್ಣ ಎಂಬ 65 ವರ್ಷದ ವ್ಯಕ್ತಿ ಅರಂತೋಡಿಗೆ ತೆರಳಿದ್ದು ಅಲ್ಲಿಂದ ಸುಳ್ಯ ಕಡೆಗೆ ಬರುವ ವ್ಯಾನ್ ನಲ್ಲಿ ತೆರಳಿದ್ದು ಮತ್ತೆ ಅವರು ಮರಳಿ ಮನೆಗೆ ಬಾರದೇ ಇರುವುದರಿಂದ ಮನೆಯವರು ಠಾಣೆಯಲ್ಲಿ...
ಸುಳ್ಯದ ತೊಡಿಕಾನದಲ್ಲಿ ನಿನ್ನೆ ನಡೆದ ನೈತಿಕ ಪೊಲೀಸ್ ಗಿರಿ ನಡೆದಿದೆ ಎಂಬ ಆರೋಪದಡಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಸಂದೇಶ ಹೋಗುವ ರೀತಿ ವರದಿ ನೀಡಿದ್ದಾರೆಂಬ ಆರೋಪದಡಿಯಲ್ಲಿ ಮೂರು ವೆಬ್ ಸೈಟ್ ನ್ಯೂಸ್ ಗಳ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ವರದಿಯಾಗಿರುವ ಅ ಕ್ರ 87/2023 ಪ್ರಕರಣಕ್ಕೆ ಸಂಬಂಧಿಸಿದಂತೆ...
ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು, ಯುವಕ ಮಂಡಲ, ಕನಕಮಜಲು ಇವರ ಸಂಯುಕ್ತ ಆಶ್ರಯದಲ್ಲಿ ಸಂತ್ಯಡ್ಕ (ಕನ್ನಡ್ಕ) ಗದ್ದೆ, ಶ್ರೀರಾಮ್ ಪೇಟೆ ಕನಕಮಜಲಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭಾಗವಹಿಸಿದರು. ನಂತರ ಮಾತನಾಡಿದ ಶಾಸಕರು ತುಳುನಾಡಿನ ಆಚರಣೆಗಳನ್ನು ಪಾಲಿಸಿಕೊಂಡು ಮುಂದಿನ ಯುವ...
Loading posts...
All posts loaded
No more posts
