ಸುಳ್ಯ : ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ  –  ವಾಹನ ಸವಾರರು ಎಚ್ಚರ ವಹಿಸಲು ಸೂಚನೆ

ಸುಳ್ಯ ನಗರ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದು, ಇದೀಗ ಪೈಪ್ ದುರಸ್ತಿ ಕಾರ್ಯವು ನಡೆಯುತ್ತಿದೆ. ಗಾಂಧಿನಗರ ಆಲೆಟ್ಟಿ ಕ್ರಾಸ್ ಬಳಿಯಲ್ಲಿ ರಸ್ತೆ ಮಧ್ಯದಲ್ಲಿ ಅಗೆದು ಪೈಪ್ ದುರಸ್ತಿ ಕಾರ್ಯ ನಡೆಯುತ್ತಿದೆ. ವಾಹನ ಸವಾರರು ಜಾಗರೂಕತೆಯಿಂದ ಚಾಲನೆ ಮಾಡಬೇಕು ಹಾಗೂ ಸಹಕಾರ ನೀಡಬೇಕು ಎಂದು ಗುತ್ತಿಗೆದಾರರು ವಿನಂತಿಸಿಕೊಂಡಿದ್ದಾರೆ.

ಸುಳ್ಯ : ನೈತಿಕ ಪೋಲೀಸ್ ಗಿರಿ ಪ್ರಕರಣ – ಮಾಹಿತಿದಾರನ ಬಂಧನ

ಆ.12 ರಂದು ಸಂಜೆ ನಡೆದ ನೈತಿಕ ಪೋಲೀಸ್ ಗಿರಿ ಪ್ರಕರಣದಲ್ಲಿ ಹಿಂದು ಸಂಘಟನೆಗಳಿಗೆ ಮಾಹಿತಿ ನೀಡಿದಾತನ ಬಂಧಿಸಿರುವ ಬಗ್ಗೆ ತಿಳಿದುಬಂದಿದೆ. ಸುಳ್ಯದ ಖಾಸಗಿ ಹೋಟೆಲ್ ಬಂದ ಜೋಡಿಯ ಬಗ್ಗೆ ಸಿಬ್ಬಂದಿ ವಿಡಿಯೋ ದೃಶ್ಯಾವಳಿಗಳನ್ನು ಸಂಘಟನೆಯ ಕಾರ್ಯಕರ್ತರಿಗೆ ಹಂಚಿದ್ದು ಇದರಿಂದಾಗಿ ನಿನ್ನೆಯ ಎಲ್ಲಾ ಘಟನೆಗಳಿಗೆ ಮುಖ್ಯ ಕಾರಣವೆಂದು ಮನಗಂಡ ಸುಳ್ಯ ಪೋಲೀಸರು ಆತನನ್ನು ಬಂಧಿಸಿದ ಘಟನೆ ಇದೀಗ...
Ad Widget

ಸುಳ್ಯ : ನೈತಿಕ ಪೋಲೀಸ್ ಗಿರಿ ಹಿನ್ನೆಲೆ : ಓರ್ವನ ಬಂಧನ – ಬಿಡುಗಡೆ, ನೈಜ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೋಲೀಸರು

ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ ನಡೆದ ನೈತಿಕ ಪೋಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಓರ್ವನನ್ನು ಬಂಧಿಸಿ, ಬಿಜೆಪಿ ಹಾಗೂ ಹಿಂದೂ ಮುಖಂಡರ ಆಗಮನದ ಬಳಿಕ ಹೈಡ್ರಾಮ ನಡೆದು ಬಿಡುಗಡೆಗೊಳಿಸಿದ ಘಟನೆ ಆ.12 ರಂದು ನಡೆದಿದೆ. ನೈತಿಕ ಪೋಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಂತೋಡಿನ ಅರ್ಜುನ್ ಎಂಬ ಯುವಕನನ್ನು ಸುಳ್ಯ ಪೋಲೀಸರು ಬಂಧಿಸಿ,ಠಾಣೆಯಲ್ಲಿ ಕೂರಿಸಿದ್ದಾರೆಂಬ ವಿಷಯ ತಿಳಿದ...

ಪೈಕ : ವಿವಿಧ ಸಂಘಸಂಸ್ಥೆ ಹಾಗೂ ಊರವರಿಂದ ಶಾಲಾ ಆವರಣ ಸ್ವಚ್ಛತೆ

ಪೈಕ ಸ.ಕಿ‌.ಪ್ರಾಥಮಿಕ ಶಾಲೆಯಲ್ಲಿ ಆ.12 ರಂದು ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಶ್ರಮದಾನ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ,  ಗುತ್ತಿಗಾರು ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ, ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ದ ಸದಸ್ಯರು ಗಳು ಮತ್ತು ಎಸ್ .ಡಿ.ಎಂ.ಸಿ.ಅಧ್ಯಕ್ಷ ರು ಮತ್ತು ಸದಸ್ಯರು ,ಪೋಷಕ ರು,ವಿದ್ಯಾಭಿಮಾನಿಗಳು,ಹಿರಿಯ ವಿದ್ಯಾರ್ಥಿಗಳು  ಶಾಲೆಯ...

ಬೆಳ್ಳಾರೆ : ಕಲ್ಲಪ್ಪಣೆ ಕುಂಞಿಪ್ಪ ಅಜ್ಜ ತರವಾಡು ಕುಟುಂಬದ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ

ಬೆಳ್ಳಾರೆಯ ಕಲ್ಲಪ್ಪಣೆ ಕುಂಞಿಪ್ಪ ಅಜ್ಜ ತರವಾಡು ಕುಟುಂಬದ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಆ. 06 ರಂದು ಪೆರುವಾಜೆಯ ಜೆ.ಡಿ. ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ನಿರ್ದೇಶಕರಾದ ಹನೀಫ್ ನೆಟ್ಟಾರವರ ಗೌರವ ಉಪಸ್ಥಿತಿಯಲ್ಲಿ ಕುಟುಂಬದ ಹಿರಿಯರೂ ಆದ ಮೂಸ ಕಲ್ಲಪ್ಪಣೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆಯನ್ನು ನೀಡಿದರು. ಮುಸ್ತಫ ಸಖಾಫಿ ಈಶ್ವರಮಂಗಲ ಮತ್ತು ಇಸ್ಮಾಯಿಲ್ ಮದನಿ ಚೆನ್ನಾರು...

ಸುಳ್ಯ ಠಾಣೆಗೆ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗಮನ.

ಸುಳ್ಯದ ಅರಂತೋಡಿನಲ್ಲಿ ಹಲ್ಲೆಗೊಳಗಾದ ವಿಚಾರ ತಿಳಿಯುತ್ತಿದ್ದಂತೆ ಕರಾವಳಿಯ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗಮಿಸಿದ್ದು ಈ ಪ್ರಕರಣ ಇದೀಗ ಭಾರಿ ಸಂಚಲನ ಮೂಡಿಸಿದೆ . ಇದೀಗ ಠಾಣೆ ಬಳಿಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆ ಎಂದು ತಿಳಿದುಬಂದಿದೆ.

ವಾಹನ ಅಡ್ಡ ಗಟ್ಟಿ ನೈತಿಕ ಪೋಲೀಸ್ ಗಿರಿ ಆರೋಪ, ಯುವಕ ಆಸ್ಪತ್ರೆಗೆ ದಾಖಲು , ಠಾಣೆಗೆ ನಾಯಕರ ಆಗಮನ.

ಸುಳ್ಯ : ಅನ್ಯಕೋಮಿನ ಯುವತಿಯನ್ನು ಕಾರಲ್ಲಿ ಕರೆದೊಯ್ಯುತ್ತಿದ್ದನೆಂಬ ಕಾರಣಕ್ಕಾಗಿ ಕಾರಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕೆಲ ಯುವಕರು ತಡೆದು ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ವರದಿಯಾಗಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.ಅರಂತೋಡು ಕಡೆ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಅನ್ಯಕೋಮಿನ ಯುವತಿಯೊಬ್ಬಳನ್ನು ತನ್ನ ಕಾರಲ್ಲಿ ಸುತ್ತಾಡಿಸುತ್ತಿದ್ದಾನೆಂದು ಕೆಲವು ಯುವಕರು ಅನುಮಾನದಿಂದ ಹಿಂಬಾಲಿಸುತ್ತಿದ್ದರೆನ್ನಲಾಗಿದೆ. ಇಂದು ಸಂಜೆ ಆತ ಯುವತಿಯನ್ನು ಸುಳ್ಯಕ್ಕೆ...

ಅಂತ್ಯಸಂಸ್ಕಾರದ ವೇಳೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಅರಂತೋಡು ಗ್ರಾಮ ಗೌಡ ಸಮಿತಿ ನಿರ್ಧಾರ

ಅಂತ್ಯಸಂಸ್ಕಾರದ ವೇಳೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಅರಂತೋಡು ಗ್ರಾಮ ಗೌಡ ಸಮಿತಿ ನಿರ್ಧಾರ ಗ್ರಾಮ ಗೌಡ ಸಮಿತಿ ಅರಂತೋಡಿನ ವತಿಯಿಂದ ಗೌಡ ಸಮುದಾಯದ ವ್ಯಕ್ತಿಯ ಅಂತಿಮ ನಮನ ಕಾರ್ಯದಲ್ಲಿ ಕೆಲ ಬದಲಾವಣೆ ತಂದು ಇತರರಿಗೆ ಮಾದರಿಯಾಗಲು ತೀರ್ಮಾನಿಸಿದ್ದು, ಆ ಬಗ್ಗೆ ಪ್ರಕಟಣೆ ನೀಡಿ ಕೆಳ ಕಾಣಿಸಿದ ಬದಲಾವಣೆ ಗಳನ್ನು ಪಾಲಿಸಲು ಸಮದಾಯಕ್ಕೆ ವಿನಂತಿಸಿದೆ. ಗೌಡ ಗ್ರಾಮ...

ಗುಂಡೇಟಿಗೆ ಕಡವೆ ಬಲಿ – ಖಚಿತ ಪಡಿಸಿದ ಪಶು ವೈದ್ಯಾಧಿಕಾರಿ

ಉಕ್ರಾಜೆ ಬೈಲು ಕಾಡಿನೊಳಗೆ ಆ.12ರಂದು ಸಂಜೆ ಕಡವೆ ದೇಹವೊಂದು ಪತ್ತೆಯಾಗಿದ್ದು, ಈ ಕಡವೆ ಗುಂಡೇಟಿನಿಂದ ಮೃತಪಟ್ಟಿದೆ ಎಂದು ಖಚಿತಪಟ್ಟಿದೆ. ಇಂದು ಸುಳ್ಯ ಎ.ಸಿ.ಎಫ್. ಪ್ರವೀಣ್ ಶೆಟ್ಟಿ, ರೇಂಜರ್ ಮಂಜುನಾಥ್ ಮತ್ತು ಸಿಬ್ಬಂದಿ ವರ್ಗ, ಸುಳ್ಯ ಪಶುವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹಾಗೂ ಸಿಬ್ಬಂದಿ ವರ್ಗದ ಜೊತೆಗೆ ಅರಂತೋಡು ಉಕ್ರಾಜೆ ಬೈಲಿಗೆ ಹೋಗಿ ಪೋಸ್ಟ್ ಮಾರ್ಟಂ ನಡೆಸಿದ ವೇಳೆ...

ಸುಬ್ರಹ್ಮಣ್ಯ : ಪ್ರೆಸ್ ಕ್ಲಬ್ ರಚನೆ – ಅಧ್ಯಕ್ಷರಾಗಿ ವಿಶ್ವನಾಥ ನಡುತೋಟ, ಕಾರ್ಯದರ್ಶಿಯಾಗಿ ರತ್ನಾಕರ ಸುಬ್ರಹ್ಮಣ್ಯ

    ಕರ್ನಾಟಕ ಸರಕಾರದ ಜಿಲ್ಲಾ ನೊಂದನಾಧಿಕಾರಿಯವರಿಂದ ನೋಂದಾವಣೆಗೊಂಡು ನೂತನವಾಗಿ ಅಸ್ತಿತ್ವಕ್ಕೆ ಬಂದ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನ ಅಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ವಿಶ್ವನಾಥ ನಡುತೋಟ ನೇಮಕಗೊಂಡರು. ಕಾರ್ಯದರ್ಶಿ ಯಾಗಿ ವಿಜಯವಾಣಿ /ಹೊಸ ದಿಗಂತ ಪತ್ರಿಕೆಯ ರತ್ನಾಕರ ಸುಬ್ರಹ್ಮಣ್ಯ, ಉಪಾಧ್ಯಕ್ಷರಾಗಿ ಪ್ರಜಾವಾಣಿ ಪತ್ರಿಕೆಯ ಲೋಕೇಶ್ ಬಿ ಎನ್, ಕೋಶಾಧಿಕಾರಿಯಾಗಿ ವಿಜಯ ಕರ್ನಾಟಕ/ ಕನ್ನಡ ಪ್ರಭ ಪತ್ರಿಕೆಯ...
Loading posts...

All posts loaded

No more posts

error: Content is protected !!