ಸುಳ್ಯ: ಮೆಸ್ಕಾಂ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸುಳ್ಯ ಮೆಸ್ಕಾಂ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ನಿವೃತ್ತ ಜೆ.ಇ. ಬೋರಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಎಇಇ ಹರೀಶ್ ನಾಯ್ಕ್, ಎಇ ಸುಪ್ರಿತ್ , ಜೂನಿಯರ್ ಇಂಜಿನಿಯರ್ ಗಳಾದ ಮಹೇಶ್ ಕುಳ,  ಉಷಾ, ದಿವ್ಯ, ಮೇಲ್ವಿಚಾರಕರಾದ ಧರ್ಮಪಾಲ ಕೆ., ಜಯಪ್ರಕಾಶ್ ಕೆ., ಜೋಸೆಫ್, ಹಿರಿಯ ಸಹಾಯಕಿ ಪ್ರಸಿಲ್ಲಾ, ಸಿಬ್ಬಂದಿಗಳಾದ ಅರುಣಕುಮಾರ್, ತಿಮ್ಮಪ್ಪ ಕೆ., ದುರ್ಗಪ್ರಸಾದ್,...

ಐವರ್ನಾಡು : ಸ್ವಾತಂತ್ರ್ಯೋತ್ಸವ ಆಚರಣೆ – ಸಾಧಕರಿಗೆ ಸನ್ಮಾನ

ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ನಡೆಯಿತು.ನಿವೃತ್ತ ಯೋಧರಾದ ಗಣೇಶ್ ಬದಂತ್ತಡ್ಕ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಿವೃತ್ತ ಯೋಧ ಗಣೇಶ್ ಬದಂತ್ತಡ್ಕ, ಸ್ವಚ್ಛತಾ ನಿರತರಾದ, ಬಾಲಕೃಷ್ಣ ಮಡ್ತಿಲ, ಮುರಳೀಧರ ಕೊಚ್ಚಿರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಐವರ್ನಾಡು ಪ್ರಾಥಮಿಕ...
Ad Widget

ಅರಂತೋಡು :
ಅಖಂಡ ಭಾರತ ಸಂಕಲ್ಪ ದಿನಾಚರಣೆ – ಪಂಜಿನ ಮೆರವಣಿಗೆ

ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಖಂಡಹಾಗೂ ಹನುಮಾನ್ ಶಾಖೆ ಆರಂತೋಡು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ಹಾಗೂ ಪಂಜಿನ ಮೆರವಣಿಗೆ ಆ.13 ರಂದು ಅರಂತೋಡಿನಲ್ಲಿ ನಡೆಯಿತು. ಪಂಜಿನ ಮೆರವಣಿಗೆ ಕೋಡಂಕೇರಿ ಕೋರಗಜ್ಜನ ದ್ವಾರದಿಂದ ಹೊರಟು ದುರ್ಗಾಮತಾ ಮಂದಿರದಲ್ಲಿ ಸಮಾಪನಗೊಂಡಿತು. ನಂತರ ಸಭಾ ಕಾರ್ಯಕ್ರಮ ಆರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆಯಿತು. ...

ಮೇದಿನಡ್ಕ ನೂತನ ದ್ಜಜ ಸ್ತಂಭ ಉದ್ಘಾಟನೆ,76ನೇ ಸ್ವತಂತ್ರ ಮಹೋತ್ಸವ

ಅಜ್ಜಾವರ, ಮೇದಿನಡ್ಕದಲ್ಲಿ ಮುತ್ತು ಶ್ರೀ ಫ್ರೆಂಡ್ಸ್ ಕ್ಲಬ್ ಮೇದಿನಡ್ಕ ಹಾಗೂ ಶ್ರೀ ಮುತ್ತು ಮಾರಿಯಮ್ಮ ಸೇವಾ ಸಮಿತಿ ವತಿಯಿಂದ ನೂತನ ದ್ಜಜ ಸ್ತಂಭ ಉದ್ಘಾಟನೆ ಹಾಗೂ 76 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು, ಕೆ.ಎಫ್.ಡಿ.ಸಿ ನಿವೃತ್ತ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ರಂಗನಾಥ್ ರವರು ನೂತನ ದ್ಜಜ ಸ್ತಂಭ ಉದ್ಘಾಟಿಸಿ , ಧ್ವಜಾರೋಹಣ ನೆರವೇರಿಸಿದರು,...

ಮಕ್ಕಳಲ್ಲಿ ದೇಶಪ್ರೇಮವನ್ನು ಪ್ರೇರೆಪಿಸುವ ಅಮೂಲ್ಯವಾದ ಪ್ರಯತ್ನವಾಗಬೇಕು

✍️ ಭಾಸ್ಕರ ಜೋಗಿಬೆಟ್ಟು ನಮಗೆ ಈ ವರ್ಷ 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ದೇಶಾದ್ಯಂತ ಈ ಸಂದರ್ಭದಲ್ಲಿ ಪ್ರತಿಯೊಂದು ಮನೆ , ಕಛೇರಿಗಳಲ್ಲಿ ಬಾವುಟವನ್ನು ಹಾರಿಸುವುದರ ಮೂಲಕ ಗೌರವವನ್ನು ಸೂಚಿಸಲಾಗುತ್ತದೆ. ಮಕ್ಕಳಿಗೆ ಬೇರೆ ಚಟುವಟಿಕೆಗಳ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಲಾಗುತ್ತದೆ. ಮಕ್ಕಳಿಗೆ ದೇಶಪ್ರೇಮದ ಬಗ್ಗೆ ತಿಳುವಳಿಕೆ ನೀಡಬೇಕು ಇಂದಿನ ಮಕ್ಕಳೆ ಮುಂದಿನ ಜನಾಂಗ....

ಬೆಳ್ಳಾರೆ ಮದರಸದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸ ವಠಾರದಲ್ಲಿ 77ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಮದ್ರಸಾ ಮುಖ್ಯೋಪಾಧ್ಯಾಯರಾದ ಬಹು ಮುಹಮ್ಮದ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿದರು. ನಂತರ ವಿದ್ಯಾರ್ಥಿ ನಾಯಕ ಶಿಹಾಬ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸಭೆಯಲ್ಲಿ ಅಧ್ಯಾಪಕರುಗಳು, ವಿದ್ಯಾರ್ಥಿಗಳು, ಜಮಾಅತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಭೆಗೆ ಹಸೈನಾರ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.

ಸುಳ್ಯ ಭಜರಂಗದಳ ಮತ್ತು ವಿಶ್ವಹಿಂದು ಪರಿಷತ್ ವತಿಯಿಂದ ಅಖಂಡ ಭಾರತ ಸಂಕಲ್ಪದೊಂದಿಗೆ ದೊಂದಿ ಮೆರವಣಿಗೆ .

ಅಖಂಡ ಭಾರತ ನಿರ್ಮಾಣ ಸಂಕಲ್ಪದೊಂದಿದೆ ಸುಳ್ಯ ನಗರದಲ್ಲಿ ವಿಶ್ವಹಿಂದು ಪರಿಷತ್ ಮತ್ತು ಭಜರಂಗದಳ ವತಿಯಿಂದ ಪಂಜಿನ ಮೆರವಣಿಗೆ ಹಾಗು ಸಭಾ ಕಾರ್ಯಕ್ರಮವು ಚೆನ್ನಕೇಶವ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಪಂಜಿನ ಮೆರವಣಿಗೆಯು ಜ್ಯೋತಿ ವೃತ್ತದಿಂದ ಪ್ರಾರಂಭಗೊಂಡು ಗಾಂಧಿನಗರಕ್ಕೆ ತೆರಳಿ ಅಲ್ಲಿಂದ ಚೆನ್ನಕೇಶವ ದೇವಾಲಯದ ವರೆಗೆ ಮೆರವಣಿಗೆ ನೂರಾರು ಸಂಖ್ಯೆಯ ಕಾರ್ಯಕರ್ತರ ಪಂಜು ಹಿಡಿದು ನಡೆದರು. ಸಭಾಕಾರ್ಯಕ್ರಮವನ್ನು ನಿವೃತ್ತ...

ಡಾ. ಆರ್. ಕೆ . ನಾಯರ್ ಗೆ ಗುಜರಾತ್ ರಾಜ್ಯ ಪ್ರಶಸ್ತಿ

ಸುಳ್ಯ: ಗುಜರಾತ್ ಸರಕಾರವು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನೀಡುವ ರಾಜ್ಯ ಪ್ರಶಸ್ತಿಗೆ ಪರಿಸರ ಕ್ಷೇತ್ರದಿಂದ ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ. ಆರ್.ಕೆ.‌ನಾಯರ್ ಆಯ್ಕೆಯಾಗಿದ್ದಾರೆ. ಮೂಲತಃ ಸುಳ್ಯ ತಾಲೂಕಿನ ಜಾಲ್ಸೂರಿನವರಾದ ಡಾ. ಆರ್.‌ಕೆ.‌ ನಾಯರ್ ಅವರು ಗುಜರಾತ್ ನಲ್ಲಿ ಉದ್ಯಮಿಯಾಗಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಪರಿಸರ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವ ಅವರುಮಿಯಾವಕಿ ಮಾದರಿ...

ಸುಳ್ಯ : ತಾ.ಪಂ.ನೂತನ ಕಾರ್ಯನಿರ್ವಾಹಣಾ ಅಧಿಕಾರಿ ರಾಜಣ್ಣರಿಗೆ ಸ್ವಾಗತ – ಕಾರ್ಯನಿರ್ವಾಹಣಾ ಅಧಿಕಾರಿ ಭವಾನಿಶಂಕರ್ ಗೆ ಬೀಳ್ಕೊಡುಗೆ

ಸುಳ್ಯ ತಾಲೂಕು ಪಂಚಾಯತ್ ನ ನೂತನ ಕಾರ್ಯನಿರ್ವಾಹಣಾ ಅಧಿಕಾರಿಗೆ ಸ್ವಾಗತ ಹಾಗೂ ವರ್ಗಾವಣೆ ಗೊಂಡ ಅಧಿಕಾರಿಗಳಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆ. 14 ರಂದು ನಡೆಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸುಳ್ಯ ಕಾರ್ಯನಿರ್ವಾಹಣಾ ಅಧಿಕಾರಿ ರಾಜಣ್ಣ , ನಿರ್ಗಮಿತ ಕಾರ್ಯನಿರ್ವಾಹಣಾ ಅಧಿಕಾರಿ ಎನ್. ಭವಾನಿ ಶಂಕರ್ , ನೇತ್ರಾವತಿ ಗ್ರಾಮ ಪಂಚಾಯತ್...

ಶಾಂತಿನಗರದ ಶ್ರೀಜಿತ್ ಸಾವು ಪ್ರಕರಣ – ವೈಧ್ಯರ ನಿರ್ಲಕ್ಷ್ಯ ಆರೋಪ – ಆಸ್ಪತ್ರೆಯ ಮುಂಭಾಗ ಪ್ರತಿಭಟನೆಗೆ ಸಿದ್ದತೆ

ಸುಳ್ಯದ ಶಾಂತಿನಗರದ ಸಂಜೀವ ಎಂಬುವವರ ಅವಳಿ ಜವಳಿ ಮಕ್ಕಳಲ್ಲಿ ಓರ್ವ ಇಂದು ಚಿಕಿತ್ಸೆ ಫಲಿಸದೇ ಮಂಗಳೂರಿಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು. ಮೃತ ಯುವಕನ ತಂದೆ ಅಸೌಖ್ಯದಲ್ಲಿ ಮಲಗಿದಲ್ಲೆ ಇದ್ದು, ಇದೀಗ ಪುತ್ರ ಮೃತಪಟ್ಟ ವಿಚಾರ ಇನ್ನು ತಿಳಿದಿಲ್ಲ ಎಂದು ತಿಳಿದುಬಂದಿದೆ. ಸಂಬಂಧಿಕರ ಮಾಹಿತಿಯಂತೆ ವೈದ್ಯರ ನಿರ್ಲಕ್ಷ್ಯವಿದ್ದು ಪೋಲಿಸ್ ಇಲಾಖೆಗೆ ದೂರು ನೀಡಲಿದ್ದೇವೆ ಹಾಗೂ ಪುತ್ತೂರಿನ...
Loading posts...

All posts loaded

No more posts

error: Content is protected !!