ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ : 27-06-2026
ವಾರ : ಶನಿವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ
ಮಂಡೆಕೋಲು, ಸುಳ್ಯ
ಮೊ: 9591969197

01)🐏ಮೇಷರಾಶಿ : ಹೊರ ತಿಂಡಿಗಳನ್ನು ತಿನ್ನುವಾಗ ಮತ್ತು ಕುಡಿಯುವಾಗ ಎಚ್ಚರದಿಂದಿರಿ. ಅಸಡ್ಡೆ ನಿಮಗೆ ಅನಾರೋಗ್ಯ ತರಬಹುದು. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆಯಿಂದ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ನಿಮ್ಮ ಸ್ನೇಹಿತರಿಂದ ಅನುಕೂಲವಾಗುವುದು… ಗಮನಿಸಿ : ಇಂದು ನಿಮ್ಮ ಹಿರಿಯ ಅಧಿಕಾರಿಗಳ ಸಲಹೆ ಪಡೆಯುವುದು ಉತ್ತಮ… ಪರಿಹಾರ : ತಂದೆ ತಾಯಿಯರ ಆಶೀರ್ವಾದ ಪಡೆಯಿರಿ.

. . . . . . . . .

02)🐂ವೃಷಭರಾಶಿ : ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗಲಿದೆ. ಸ್ನೇಹಿತರು ಹಾಗೂ ನಿಮ್ಮ ಹಿರಿಯರ ಸಹಾಯ ದೊರಕಲಿದೆ. ವ್ಯಾಪಾರದಲ್ಲಿ ಹೆಚ್ಚು ಲಾಭ ಗಳಿಸುವುದು ಕಷ್ಟವಾಗಿದೆ. ಹತ್ತಿರದ ಸಹೋದ್ಯೋಗಿಗಳ ಜೊತೆ ಹಲವಾರು ಭಿನ್ನಾಭಿಪ್ರಾಯಗಳು ಉದ್ಭವಿಸಬಹುದು… ಗಮನಿಸಿ : ಒತ್ತಡ ತುಂಬಿದ ದಿನವಾಗಲಿದೆ… ಪರಿಹಾರ : ಶ್ರೀಗುರುದತ್ತಾತ್ರೇಯನ ಪ್ರಾರ್ಥನೆ ಮಾಡಿ.

. . . . . . .

03)👥ಮಿಥುನ ರಾಶಿ : ಇಂದು ನಿಮಗೆ ತುಂಬ ಉನ್ನತ ಶಕ್ತಿಯಿರುವ ದಿನ ಮತ್ತು ನೀವು ಸಣ್ಣ ಸಣ್ಣ ವಿಷಯಗಳಿಂದ ಕಿರಿಕಿರಿಗೊಳ್ಳುತ್ತೀರಿ. ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು ನೀಡುತ್ತವೆ ಆದ್ದರಿಂದ ನೀವು ಕಷ್ಟಪಟ್ಟುಗಳಿಸಿದ ನಿಮ್ಮ ಹಣವನ್ನು ಎಲ್ಲಿ ಹೂಡಬಯಸುತ್ತೀರೆನ್ನುವಲ್ಲಿ ಖಚಿತತೆಯಿರಲಿ… ಗಮನಿಸಿ : ಯಾವುದೇ ಜಂಟಿ ವ್ಯವಹಾರಗಳು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿ ಕೊಳ್ಳಿ… ಪರಿಹಾರ : ಮನೆ ದೇವರ ದರ್ಶನ ಮಾಡಿ.

04)🦀ಕಟಕ ರಾಶಿ : ನೀವು ಹೆಚ್ಚು ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನೀವು ಕೇವಲ ನಿಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ತಿಳಿದಿದ್ದರೆ ಸಾಕು. ಹೆಚ್ಚು ದುಂದು ವೆಚ್ಚ ಮಾಡದಿರಿ. ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ, ಕೆಲಸ ಕಾರ್ಯಗಳಲ್ಲಿ ಜಯ ನಿಮ್ಮದಾಗಲಿದೆ. ಯಾರ ಮೇಲೂ ಅವಲಂಬನೆ ಆಗದೆ ಕೆಲಸ ಮಾಡಿ… ಗಮನಿಸಿ : ಇಂದು ನೀವು ಲಾಭ ಪಡೆಯಬಹುದು… ಪರಿಹಾರ : ಶ್ರೀ ಶಿವನಾಮ ಸ್ಮರಣೆ ಮಾಡಿ.

05)🦁ಸಿಂಹ ರಾಶಿ : ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ಸಂಬಂಧಿಗಳು ನಿಮ್ಮ ಅತೀ ಉದಾರ ವರ್ತನೆಯ ಅನುಚಿತ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಮೋಸ ಹೋಗಬೇಡಿ, ಸಂಬಂಧಿಕರಿಂದ ತೊಂದರೆಯನ್ನು ಅನುಭವಿಸುವಿರಿ… ಗಮನಿಸಿ : ಇಂದು ಮನೆಯವರೊಂದಿಗೆ ಸ್ವಲ್ಪ ಸಮಯ ಕಳೆಯಿರಿ… ಪರಿಹಾರ : ಶ್ರೀ ಗುರು ರಾಘವೇಂದ್ರನ ದರ್ಶನ ಪಡೆಯಿರಿ.

06)👩‍🦳ಕನ್ಯಾ ರಾಶಿ : ಮನೆಯಲ್ಲಿ ಅಶಾಂತಿ ಇದರಿಂದ ನಿಮಗೆ ನೀವೇ ಅನಗತ್ಯ ಮಾನಸಿಕ ಒತ್ತಡವನ್ನು ತಂದುಕೊಳ್ಳುವಿರಿ, ನಿಮಗೆ ಇಂದು ಹಿರಿಯ ಅಧಿಕಾರಿಗಳು ನಾಯಕತ್ವವನ್ನು ನೀಡುವರು, ಆರೋಗ್ಯದಲ್ಲಿ ಏರುಪೇರು. ನಿಮ್ಮ ಸಂಗಾತಿಯಿಂದ ಧನ ಸಹಾಯ ಆಗುವುದು… ಗಮನಿಸಿ : ಇಂದು ನಿಮ್ಮ ಸಮಸ್ಯೆಗಳನ್ನು ಮರೆತು ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯಿರಿ… ಪರಿಹಾರ : ವಿಜ್ಞೇಶ್ವರನ ಪ್ರಾರ್ಥನೆ ಮಾಡಿ.

07)⚖️ತುಲಾ ರಾಶಿ : ನಿಮ್ಮ ಕೆಲಸಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಲಾಭ ಪಡೆಯುವ ಪರಿಪೂರ್ಣ ದಿನ. ಇಂದು ನಿಮಗೆ ಧನ ಲಾಭ ಆಗುವ ಸಂಭವ. ಹಳೆಯ ಸ್ನೇಹಿತರ ಬೇಟಿ ಆಗುವುದು, ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ… ಗಮನಿಸಿ : ಇಂದು ನಿಮ್ಮ ತಂದೆ ತಾಯಿಯರ ಆಶೀರ್ವಾದ ಪಡೆದು ನಿಮ್ಮ ಹೊಸ ಯೋಜನೆಗಳನ್ನೂ ಪ್ರಾರಂಭಿಸಿ… ಪರಿಹಾರ : ಗುರುಗಳ ದರ್ಶನ ಪಡೆಯಿರಿ.

08)🦂ವೃಶ್ಚಿಕ ರಾಶಿ : ಇಂದು ಕೈಗೊಂಡ ನಿರ್ಮಾಣ ಕಾರ್ಯ ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ. ಯಾರನ್ನು ಕಾರಣವಿಲ್ಲದೆ ನೋಯಿಸಬೇಡಿ. ಮಕ್ಕಳ ಕಡೆ ಹೆಚ್ಚುಗಮನಹರಿಸಬೇಕಾಗಿದೆ. ಬಂದು ಮಿತ್ರರಿಂದ ಅನುಕೂಲವಾಗುವುದು. ಅನಿರೀಕ್ಷಿತ ಪ್ರಯಾಣ ಮಾಡುವ ಸಂಭವವಿದೆ… ಗಮನಿಸಿ : ಇಂದು ತೃಪ್ತಿಕರ ಫಲಿತಾಂಶಗಳನ್ನು ಪಡೆಯಲು ಸರಿಯಾಗಿ ಯೋಜನೆ ಹಾಕಿಕೊಳ್ಳಿ… ಪರಿಹಾರ : ಬಡವರಿಗೆ ಸಹಾಯ ಮಾಡಿ.

09)🏹ಧನುಸ್ಸು ರಾಶಿ : ನಿಮ್ಮ ಧೀರ್ಘಕಾಲೀನ ಅನಾರೋಗ್ಯದ ಸಮಸ್ಯೆ ಹೆಚ್ಚಾಗುವುದು, ಜೊತೆಗೆ ಓಡಾಟ, ನಿಮ್ಮನ್ನು ಮಾನಸಿಕವಾಗಿ ಇನ್ನಷ್ಟು ಕುಗ್ಗಿಸುವುದು. ನೀವು ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದಂತೆ ಒತ್ತಡ ನಿಮ್ಮ ಮನಸ್ಸನ್ನು ಅವರಿಸುತ್ತದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ. ಮನೆಯಲ್ಲಿ ಸಂಬಂಧಿಕರಿಂದ ಕಿರಿಕಿರಿ. ದೂರ ಪ್ರಯಾಣ ಉತ್ತಮವಲ್ಲ… ಗಮನಿಸಿ : ಇಂದು ಆರೋಗ್ಯದ ಕಡೆ ಗಮನ ಕೊಡಿ… ಪರಿಹಾರ : ಕಾಗೆಗಳಿಗೆ ಆಹಾರ ನೀಡಿ.

10)🐊ಮಕರ ರಾಶಿ : ನಿಮ್ಮ ಆತ್ಮ ವಿಶ್ವಾಸದಿಂದ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ, ಹಾಗೂ ಕೆಲಸ ಕಾರ್ಯಗಳಲ್ಲಿ ಜಯವನ್ನು ಸಾಧಿಸುವಿರಿ, ನಿಮ್ಮ ಕುಟುಂಬಕ್ಕೆ ಸೂಕ್ತ ಸಮಯ ನೀಡಿ. ದೂರದ ಪ್ರಯಾಣ ಒಳ್ಳೆಯದಲ್ಲ, ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು… ಗಮನಿಸಿ : ಇಂದು ನೀವು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದಬಹುದು… ಪರಿಹಾರ : ಶ್ರೀ ಆಂಜನೇಯ ಸ್ವಾಮಿ ದರ್ಶನ ಮಾಡಿ.

11)⚱️ಕುಂಭ ರಾಶಿ : ನಿಮ್ಮ ಸ್ನೇಹಿತರು ಇಂದು ನಿಮ್ಮ ಸಂತೋಷಕ್ಕೆ ಕಾರಣರಾಗುತ್ತಾರೆ. ಮನೆಯವರಿಂದ ಅನುಕೂಲವಾಗುತ್ತದೆ, ಇಂದು ನಿಮ್ಮ ಕೆಲಸ ಕಾರ್ಯಗಳಿಗೆ ಉತ್ತಮ ದಿನವಾಗಿದೆ, ಹೊಸ ಯೋಜನೆಗಳಿಗೆ ನಾಂದಿ ಹಾಡಬಹುದು. ಇಂದು ನೀವು ನಿಜವಾಗಿಯೂ ಲಾಭ ಪಡೆಯಬಯಸಿದರೆ, ಇತರರು ನೀಡಿದ ಸಲಹೆಯನ್ನು ಕೇಳಿ. ದನಲಾಭವಾಗುವುದು… ಗಮನಿಸಿ : ಇಂದು ಹೆಚ್ಚು ಓಡಾಟದಿಂದ ಸುಸ್ತಾಗುವಿರಿ… ಪರಿಹಾರ : ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ.

12)🐬ಮೀನ ರಾಶಿ : ಮನೆಯಲ್ಲಿ ಕಲಹಗಳು ನಿಮ್ಮನ್ನು ಮಾನಸಿಕ ಒತ್ತಡದಲ್ಲಿರಿಸುತ್ತದೆ. ನಿಮ್ಮನ್ನು ಹೆಚ್ಚು ಪ್ರೀತಿಸುವ ವ್ಯಕ್ತಿಯನ್ನು ನೋವಿಸದಿರಿ, ನೀವು ಇಂದು ಕೆಲಸದಲ್ಲಿ ಎಲ್ಲದರಲ್ಲೂ ಮೇಲುಗೈ ಸಾಧಿಸಬಹುದು. ನಿಮ್ಮ ಕಾರ್ಯ ಸಾಧನೆಗೆ ಹಿರಿಯ ಅಧಿಕಾರಿಗಳ ಸಲಹೆ ಪಡೆಯಿರಿ… ಗಮನಿಸಿ : ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಪ್ರಯತ್ನಿಸಿ… ಪರಿಹಾರ : ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading