
ಕೊಲ್ಲಮೊಗ್ರು ಗ್ರಾಮದ ಚಾಳೆಪ್ಪಾಡಿ ನಿವಾಸಿ ಸುರೇಶ್ ಎಂಬುವವರ ಮನೆಗೆ ಜೂ.6 ರಂದು ಸಂಜೆ 6:00 ರಿಂದ ರಾತ್ರಿ 8:00 ಗಂಟೆಯ ನಡುವೆ ಕಳ್ಳರು ನುಗ್ಗಿ ಚಿನ್ನಾಭರಣ ಕಳವುಗೈದ ಘಟನೆ ವರದಿಯಾಗಿದೆ.
ಸುರೇಶ್ ರವರು ಕೊಲ್ಲಮೊಗ್ರದಲ್ಲಿ ಸೆಲೂನ್ ಹೊಂದಿದ್ದು, ಅವರ ಪತ್ನಿ ಮೀನಾಕ್ಷಿ ರವರು ಕೊಲ್ಲಮೊಗ್ರದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಮನೆಯಲ್ಲಿದ್ದ ಅವರ ಪುತ್ರ ಸಂಜೆ 6:00 ಗಂಟೆಯ ವೇಳೆಗೆ ಮನೆಗೆ ಬೀಗ ಹಾಕಿ ತಾಯಿಯ ದಿನಸಿ ಅಂಗಡಿಗೆ ಬಂದಿದ್ದರು. ರಾತ್ರಿ 8:00 ಗಂಟೆಗೆ ಅಂಗಡಿ ಮುಚ್ಚಿ ಮನೆಯವರು ಮನೆಗೆ ಹೋದಾಗ ಮನೆಯ ಬೀಗ ಒಡೆದಿರುವುದು ಕಂಡುಬಂದಿದ್ದು, ಮನೆಯ ಒಳಗೆ ಹೋಗಿ ನೋಡಿದಾಗ ಬೆಡ್ ರೂಮ್ ನಲ್ಲಿರುವ ಕಪಾಟಿನ ಬಾಗಿಲು ಒಡೆದು ಸುಮಾರು 3 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳರು ಕಳವುಗೈದಿರುವುದು ತಿಳಿದುಬಂದಿದೆ. ಕೂಡಲೇ ಪೋಲೀಸರಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿದ ಪೋಲೀಸರು ರಾತ್ರಿಯೇ ಸ್ಥಳಕ್ಕೆ ಬಂದು ಸ್ಥಳ ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ.

