ಗುತ್ತಿಗಾರು ಬಸ್ ನಿಲ್ದಾಣದ ಮುಂಭಾಗದ ತರಕಾರಿ ಅಂಗಡಿ, ಪಕ್ಕದ ಕಟ್ಲೇರಿ ಅಂಗಡಿ, ಮೇಲಿನ ಪೇಟೆಯ ಮುತ್ತಪ್ಪ ನಗರದ ಗುಡಿಯ ಕಾಣಿಕೆ ಹುಂಡಿಗೆ ಕನ್ನ ಹಾಕಿರುವುದಾಗಿ ತಿಳಿದುಬಂದಿದೆ.
ಅಂಗಡಿಗಳಿಂದ ನಗ-ನಗದು ಕಳವುಗೈದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸುಬ್ರಹ್ಮಣ್ಯ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.ಕಳ್ಳನ ಚಲನವನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.