Ad Widget

ಶ್ರೀ ಗುರು ರಾಘವೇಂದ್ರ ಜ್ಯುವೆಲ್ಲರ್ಸ್ ನಲ್ಲಿ ನೂತನ ಆಭರಣ ಸ್ಕೀಂ ಗೋಲ್ಡ್ ನಿಧಿ ಉದ್ಘಾಟನೆ

ಸುಳ್ಯದ ಪ್ರತಿಷ್ಠಿತ ಸ್ವರ್ಣಾಭರಣ ಸಂಸ್ಥೆ ಶ್ರೀ ಗುರು ರಾಘವೇಂದ್ರ ಜ್ಯುವೆಲ್ಲರ್ಸ್ ನವರ ನೂತನ ಆಭರಣ ಸ್ಕೀಂ ಗೋಲ್ಡ್ ನಿಧಿ ಯ ಉದ್ಘಾಟನೆ ಇಂದು ಸಂಸ್ಥೆಯ ಮಳಿಗೆಯಲ್ಲಿ ನಡೆಯಿತು.

ಕೆಎಸ್ಎ ಕಾಮತ್ & ಸನ್ಸ್ ಮಾಲಕರು, ಉದ್ಯಮಿ ಸುಧಾಕರ ಕಾಮತ್ ಮತ್ತು ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್ ಎ ರಾಮಚಂದ್ರ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಶುಭಹಾರೈಸಿದರು.

ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದ್ರೆ, ಉಪಾಧ್ಯಕ್ಷ ಬುದ್ಧ ನಾಯಕ್, ಕರ್ನಾಟಕ ಪ್ಲೈವುಡ್ ನ ಮಾಲಕರಾದ ಹರಿರಾಯ ಕಾಮತ್, ಸ್ಟೇಟ್ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ನಾರಾಯಣ್ ಭಟ್ , ನಗರ ಪಂಚಾಯತ್ ಸದಸ್ಯೆ ಕಿಶೋರಿ ಶೇಟ್ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಸ್ಥೆಯ ಮಾಲಕರಾದ ಜ್ಞಾನೇಶ್ವರ ಶೇಟ್ ಮತ್ತು ರಾಘವೇಂದ್ರ ಶೇಟ್ ಮಾತನಾಡಿ ಗ್ರಾಹಕರ ಅನುಕೂಲಕ್ಕಾಗಿ ಗೋಲ್ಡ್ ನಿಧಿ ಸ್ಕೀಂ ಅನ್ನು ಆರಂಭಿಸಿದ್ದು, ರೂ. 1000,2000, 5000 ದ ಸ್ಕೀಂಗಳು ಲಭ್ಯವಿದ್ದು, ಗ್ರಾಹಕರು ಸಂಪೂರ್ಣ ಸಹಕಾರ ನೀಡಬೇಕಾಗಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ರಾಘವೇಂದ್ರ ಜ್ಯುವೆಲ್ಲರ್ಸ್ ನ ಭುವನೇಂದ್ರ ಶೇಟ್, ಶ್ರೀಮತಿ ಸಿಂಧೂರ ಶೇಟ್, ಶ್ರೀಮತಿ ನರ್ಮದಾ ಶೇಟ್, ವಿಶ್ವನಾಥ ಕೆ.ವಿ. ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!