Ad Widget

ಗಣೇಶೋತ್ಸವ ಆಚರಣೆಗೆ ಹೊಸ ನಿಯಮ : ಸರ್ಕಾರದ ಹಿಂದೂ ವಿರೋಧಿ ಧೋರಣೆಗೆ ವೆಂಕಟ್ ವಳಲಂಬೆ ಖಂಡನೆ

ಸಾಮಾಜಿಕ ಚಳುವಳಿ,ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯನ್ನು ತುಂಬಿದ್ದ ಗಣೇಶೋತ್ಸವ ಆಚರಣೆಗೆ  ಸರ್ಕಾರ ಹೊಸ ನಿಯಮಗಳನ್ನು ತರುವ ಮೂಲಕ ಬಹುಸಂಖ್ಯಾತ ರ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. ದೇವರ ಪ್ರಸಾದ ಗಳಿಗೆ FSSAI ಪರವಾನಗಿ ಪಡೆದಿರುವ ವ್ಯಕ್ತಿ, ಸಂಸ್ಥೆಗಳಿಂದ ತಯಾರಿಸುವಂತೆ ಅಲ್ಲದೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅತಿಥಿಗಳು, ಚಾಲಕರ ಸಂಪೂರ್ಣ ಮಾಹಿತಿ ನೀಡಬೇಕೆಂದು  ಸುತ್ತೋಲೆ  ಹೊರಡಿಸಿದ್ದು ನಮ್ಮ ಆಚರಣೆಗೆ ಷರತ್ತುಗಳನ್ನು ರೂಪಿಸುವ ಮೂಲಕ   ನಂಬಿಕೆಯನ್ನು ಹಣಿಯುವ ಕೆಲಸ ಮಾಡುತ್ತಿದದೆ. ಅನೇಕ ವರ್ಷಗಳಿಂದ ಗ್ರಾಮ,ನಗರಗಳಲ್ಲಿ ಗಣೇಶೋತ್ಸವ ಆಚರಣೆ ನಿರ್ವಿಘ್ನವಾಗಿ ನೆರವೇರುತ್ತಿದ್ದು ಸರ್ಕಾರದ ಹೊಸ ನಿಯಮವನ್ನು ಖಂಡಿಸುವುದಾಗಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!