Ad Widget

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಬಿ. ಸಿ. ಎಂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ



ವಿವೇಕಾನಂದ ವೃತ್ತದ ಬಳಿ ಇರುವ  ಬಿ. ಸಿ. ಎಂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ  ಆಚರಣೆ ನಡೆಸಲಾಯಿತು. ಧ್ವಜಾರೋಹಣವನ್ನು  ಜೆಸಿಐ ವಲಯ 15ರ ಪೂರ್ವದ್ಯಕ್ಷ jci ppp.ಅಶೋಕ್ ಚೂಂತರ್ ನೆರವೇರಿಸಿ ಶುಭಾಶಯ ಕೋರಿದರು. 

ಮತ್ತು ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗದೆ  ಶಿಕ್ಷಣಕ್ಕೆ  ಬೇಕಾದ ಪೂರಕ ಚಟುವಟಿಕೆಯೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದು  ಅಗತ್ಯವಾಗಿದೆ. ಈ ನಿಟ್ಟಿನಲಿ   ವಿದ್ಯಾರ್ಥಿನಿ ನಿಲಯಗಳು ಸಹಕಾರಿ ಆಗುತ್ತಿದೆ ಎಂದರು,  ಸುಳ್ಯ ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ  ಸುರೇಶ್ ಕಾಮತ್ ದೀಪ ಬೆಳಗಿಸಿ ಪುಷ್ಪಾರ್ಚನೆ  ಗೈದರು.

ಜೇಸಿಐ  ಸುಳ್ಯ ಪಯಸ್ವಿನಿ ಘಟಕಾದ್ಯಕ್ಷ ಜೇಸಿ ಗುರುಪ್ರಸಾದ್ ನಾಯಕ್ ಮತ್ತು ಜೇಸಿ ನವೀನ್ ಕುಮಾರ್, ಜೆಸಿ ರಂಜಿತ್ ಕುಕ್ಕೇಟ್ಟಿ ,   ಜೇಸಿ ಸುರೇಶ್ ಕಾಮತ್, ವಸತಿ  ನಿಲಯ ಮೇಲ್ವಿಚಾರಕರು ಶ್ರೀಮತಿ ಸುವಾಸಿನಿ, ಸಿಬ್ಬಂದಿ ವರ್ಗದವರು ಶ್ರೀಮತಿ ಜಲಜಾಕ್ಷಿ ಕೆ, ಕು. ಸುಮತಿ ಎ, ಶ್ರೀಮತಿ. ಭಾಗ್ಯವತಿ  ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!