Ad Widget

ಸುಬ್ರಹ್ಮಣ್ಯ : ಪತ್ರಕರ್ತ ಮಂಜುನಾಥ ರಾವ್ ಅವರಿಗೆ ಸಾರ್ವಜನಿಕ ಶ್ರದ್ದಾಂಜಲಿ ಸಭೆ

ಇತ್ತೀಚೆಗೆ ನಿಧನರಾದ ಸುಬ್ರಹ್ಮಣ್ಯದ ಹಿರಿಯ ಪತ್ರಕರ್ತರಾದ ಮಂಜುನಾಥ ರಾವ್ ಅವರಿಗೆ ಜೂ.07 ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕ ಶ್ರದ್ದಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಆರಂಭದಲ್ಲಿ ಹಿರಿಯ ಸಾಮಾಜಿಕ ಧುರೀಣ ಚಂದ್ರಶೇಖರ ಮೇಲ್ನಾಡ್ ದೀಪ ಬೆಳಗಿಸಿ ನುಡಿ ನಮನ ಸಲ್ಲಿಸಿದರು. ನಂತರ ಪತ್ರಕರ್ತ ವಿಶ್ವನಾಥ ನೆಡುತೋಟ ಪ್ರಾಸ್ತಾವಿಕ ನುಡಿಗಳೊಂದಿಗೆ ನುಡಿ ನಮನ ಸಲ್ಲಿಸಿದರು. ನಂತರ ಶಿವರಾಮ ರೈ, ಯಜ್ಞೇಶ್ ಆಚಾರ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿ.ಡಿ.ಓ ಯು.ಡಿ ಶೇಖರ್, ಅಶೋಕ್ ನೆಕ್ರಾಜೆ, ಗೋಪಾಲ ಎಣ್ಣೆಮಜಲು, ಲೋಕೇಶ್.ಬಿ.ಎನ್, ಚಂದ್ರಶೇಖರ ನಾಯರ್, ಗಿರಿಧರ ಸ್ಕಂದ, ಸುಬ್ರಹ್ಮಣ್ಯ, ನಾರಾಯಣ ಅಗ್ರಹಾರ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಲಿತಾ ಗುಂಡಡ್ಕ ಸೇರಿದಂತೆ ಮುಂತಾದವರು ನುಡಿ ನಮನ ಸಲ್ಲಿಸಿದರು.
ಸಭೆಯಲ್ಲಿ ಡಾ| ರವಿ ಕಕ್ಕೆಪದವು, ಕೂಜುಗೋಡು ಕಿಶೋರ್ ಕುಮಾರ್, ಕೆ.ವಸಂತ ಶೆಟ್ಟಿ, ರಘು, ಅಚ್ಯುತ ಗೌಡ, ಮಂಜುನಾಥ ರಾವ್ ಅವರ ಸಹೋದರರಾದ ಎನ್.ಸುಬ್ರಹ್ಮಣ್ಯ ರಾವ್, ಹರೀಶ್ ರಾವ್, ನರಸಿಂಹ, ನಾಗೇಂದ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!