Ad Widget

ಅಜ್ಜಾವರ : ಪ್ರತಾಪ ಯುವಕ ಮಂಡಲ ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷ ಗುರುರಾಜ್ ಅಜ್ಜಾವರ, ಕಾರ್ಯದರ್ಶಿ ಅನಿಲ್ ರಾಜ್ ಕರ್ಲಪ್ಪಾಡಿ, ಖಜಾಂಜಿ ಲೋಕೇಶ್ ಮಾವಿನಪಳ್ಳ

ಅಜ್ಜಾವರ ಪ್ರತಾಪ ಯುವಕ ಮಂಡಲದ ಮಹಾಸಭೆಯು ಮೇ.19 ರಂದು ಶ್ರೀ ಅಯ್ಯಪ್ಪ ಭಜನಾ ಮಂದಿರ ಅಡ್ಪಂಗಾಯದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಿವಪ್ರಕಾಶ್ ಅಡ್ಪಂಗಾಯ ವಹಿಸಿದ್ದರು.


ಸಭೆಯಲ್ಲಿ ನೂತನ ಅಧ್ಯಕ್ಷ ರಾಗಿ ಗುರುರಾಜ್ ಅಜ್ಜಾವರ, ಉಪಾಧ್ಯಕ್ಷ ರಾಗಿ ವಿಕ್ರಮ್ ಅಡ್ಪಂಗಾಯ ಮತ್ತು ರವಿರಾಜ್ ಕರ್ಲಪ್ಪಾಡಿ,
ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ರಾಜ್ ಕರ್ಲಪ್ಪಾಡಿ, ಜತೆ ಕಾರ್ಯದರ್ಶಿಯಾಗಿ ನವೀನ್ ಕುಮಾರ್, ಕೋಶಾಧಿಕಾರಿಯಾಗಿ ಲೋಕೇಶ್ ಮಾವಿನಪಳ್ಳ, ಕ್ರೀಡಾಕಾರ್ಯದರ್ಶಿ ಗೌರೀಶ ಅಡ್ಪಂಗಾಯ,
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಮೇಶ್ ಮೇದಿನಡ್ಕ ಮತ್ತು ನಿರ್ದೇಶಕರಾಗಿ ಸೀತಾರಾಮ ಕರ್ಲಪ್ಪಾಡಿ, ಸಂಪತ್ ಕುಮಾರ್, ಮೋಹನ್ ಕುಮಾರ್ ಅಡ್ಪಂಗಾಯ, ಸುರೇಶ ಗೋರಡ್ಕ, ನಾಗಪ್ಪ ಮಾವಿನಪಳ್ಳ, ಗುರುವಪ್ಪ ಅಡ್ಪಂಗಾಯ, ಆನಂದ ಕಲ್ತಡ್ಕ, ವಿನೋದ್ ಮಾವಿನಪಳ್ಳ, ಮತ್ತು ಗೌರವ ಅಧ್ಯಕ್ಷರಾಗಿ ಶಿವಪ್ರಕಾಶ್ ಅಡ್ಪಂಗಾಯ ಹಾಗೂ ಗೌರವ ಸಲಹೆಗರಾಗಿ ಬಾಸ್ಕರ್ ರಾವ್ ಬಯಂಬು, ಗೋಪಿನಾಥ್ ಮೆತ್ತಡ್ಕ, ವೆಂಕಟರಮಣ ಅತ್ಯಾಡಿ, ಸೂರ್ಯಕುಮಾರ್ ಮತ್ತು ಚನಿಯ ಕಲ್ತಡ್ಕರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವಜನ ಸಯುಕ್ತ ಮಂಡಳಿಯ ನಿರ್ದೇಶಕಿ ಶ್ರೀಮತಿ ವಿನುತ ಪಾತಿಕಲ್ಲು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!