Ad Widget

ಕೇನ್ಯ : ಕಾಂಗ್ರೆಸ್ ವಾರ್ಡ್ ಸಭೆ

ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇನ್ಯ ಗ್ರಾಮದಲ್ಲಿ ಮೇ.23 ರಂದು ಕಾಂಗ್ರೆಸ್ ಸಮಿತಿಯ ವಾರ್ಡ್ ಸಭೆ ನಡೆಯಿತು.
ಗ್ರಾಮ ಉಸ್ತುವಾರಿಯಾದ ರವೀಂದ್ರ ಕುಮಾರ್ ರುದ್ರಪಾದ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಕೇನ್ಯ ವಾರ್ಡ್ ಸಮಿತಿಯನ್ನು ರಚಿಸಲಾಯಿತು. ಕೇನ್ಯ ವಾರ್ಡ್ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಕಾಶ್ ಗೆಜ್ಜೆ, ಉಪಾಧ್ಯಕ್ಷರುಗಳಾಗಿ ವಿಠಲ್ ರೈ ಕಂಡೆಬಾಯಿ, ಸೀತಾರಾಮ ರೈ, ಪ್ರದಾನ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಬಡ್ಡಕೋಟಿ, ಕಾರ್ಯದರ್ಶಿಯಾಗಿ ವಿನೋದ್ ಪೇರಳಕಟ್ಟೆ, ಖಜಾಂಜಿಯಾಗಿ ಪ್ರಕಾಶ್ ಕಾಯಂಬಾಡಿ ಹಾಗೂ ಶಿವಪ್ಪ ಮುರ ಇವರುಗಳನ್ನು ಒಳಗೊಂಡ 13 ಜನ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ರವೀಂದ್ರ ಕುಮಾರ್ ರುದ್ರಪಾದ ಹಾಗೂ ಅಶೋಕ್ ನೆಕ್ರಾಜೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ರವೀಂದ್ರನಾಥ ಶೆಟ್ಟಿ ಕೇನ್ಯ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ್ ನೆಕ್ರಾಜೆ, ಕಡಬ ಬ್ಲಾಕ್ ಸದಸ್ಯರಾದ ಸಂತೋಷ್ ರೈ, ಬಳ್ಪ ಹಾಗೂ ಕೇನ್ಯ ಗ್ರಾಮ ಸಮಿತಿಯ ಅಧ್ಯಕ್ಷರಾದ ಚಂದ್ರಕಾಂತ್ ಮತಾವು, ಕೇನ್ಯ ಗ್ರಾಮ ಸಮಿತಿಯ ಅಧ್ಯಕ್ಷರಾದ ಯಶೋಧರ ಗೆಜ್ಜೆ ಹಾಗೂ ಉಪಾಧ್ಯಕ್ಷರಾದ ಮಿಥುನ್, ವೆಂಕಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸಂತೋಷ್ ರೈ ಸ್ವಾಗತಿಸಿ ಯಶೋಧರ ಗೆಜ್ಜೆ ವಂದಿಸಿದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!