Ad Widget

ವಳಲಂಬೆ : ಜೈ ಮಾರುತಿ ಪ್ರಗತಿಬಂಧು ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ವಳಲಂಬೆಯ ಕಾಜಿಮಡ್ಕದಲ್ಲಿ ಜೈಮಾರುತಿ ಪ್ರಗತಿ ಬಂಧು ಸಂಘವು ಉದ್ಘಾಟನೆಗೊಂಡಿತು. ವಳಲಂಬೆ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಲಿಂಗಪ್ಪ ನಾಯ್ಕ ಕಾಜಿಮಡ್ಕ ದೀಪ ಬೆಳಗಿ ಸಂಘವನ್ನು ಉದ್ಘಾಟಿಸಿ, ಶುಭಹಾರೈಸಿದರು.

ಸೇವಾ ಪ್ರತಿನಿಧಿ ಲೋಕೇಶ್ವರ ಡಿ ಆರ್ ರವರು ಸಂಘದ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿ ದಾಖಲೆಯನ್ನು ಹಸ್ತಾಂತರಿಸಿದರು.

ಸಂಘದ ಅಧ್ಯಕ್ಷರಾಗಿ ಸತೀಶ್ ಕಾಜಿಮಡ್ಕ, ಕಾರ್ಯದರ್ಶಿಯಾಗಿ ಈಶ್ವರ ನಾಯ್ಕ ಕಾಜಿಮಡ್ಕ ಕೋಶಾಧಿಕಾರಿ ಯಾಗಿ ಭರತ್ ಹೊಸೊಳಿಕೆ ಮತ್ತು ಸದಸ್ಯರಾಗಿ ಉಮಾಶಂಕರ ಹೊಸೊಳಿಕೆ ಹಾಗೂ ಕಿಶನ್ ನಡುಮನೆಯವರನ್ನು ಆಯ್ಕೆ ಮಾಡಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!