Ad Widget

ಯೇನೆಕಲ್ಲು : ಅಖಂಡ ಭಾರತ ಸಂಕಲ್ಪ ದಿನ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆ ಮಾಡಲಾಯಿತು.
ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಊರಿನ ಹಿರಿಯರಾದ ಶೂರಪ್ಪ ಬಾಲಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಸೈನಿಕರು ಅವರ ಸೇವಾ ವೃತ್ತಿಯ ಬಗ್ಗೆ ಮತ್ತು ವಿಶ್ವಹಿಂದೂ ಪರಿಷತ್ತಿನ ಕಾರ್ಯವೈಖರಿ ಬಗ್ಗೆ ಮಾತಾಡಿದರು. ನಂತರ ದೇಶ ಸೇವೆ ಮಾಡಿದ ನಮ್ಮ ಊರಿನ ಮಾಜಿ ಸೈನಿಕರಾದ ವಾಸುದೇವ ಬಾನಡ್ಕ,ಭವಾನಿ ಶಂಕರ ಪೂಂಬಾಡಿ,ಹರಿಶ್ಚಂದ್ರ ಪರಮಲೆ ಇವರನ್ನು ಸನ್ಮಾನಿಸಿದರು. ಶ್ರೀರಾಮ ಶಾಖೆಯ ಅಧ್ಯಕ್ಷರಾದ ಲೋಕೇಶ್ ಅಲ್ಪೆ ವಿಶ್ವ ಹಿಂದೂ ಪರಿಷತ್ತು ಬೆಳೆದು ಬಂದ ಹಾದಿ ಅದರ ಧ್ಯೇಯ ಮತ್ತು ಸಿದ್ದಾಂತಗಳ ಬಗ್ಗೆ ಮಾತನಾಡಿದರು. ಅಶೋಕ್ ನೆಕ್ರಾಜೆ ಮಾತನಾಡಿ ಎಲ್ಲರೂ ಪಕ್ಷ ಭೇದ ಮರೆತು ಹಿಂದೂ ಸಂಘಟನೆಯಲ್ಲಿ ಎಲ್ಲರೂ ಜೊತೆಯಾಗಿ ಹಿಂದುತ್ವದ ಕೆಲಸ ಮಾಡಬೇಕು ಎಂದು ಹೇಳಿದರು. ವೇದಿಕೆ ಮೇಲೆ ಶ್ರೀರಾಮ ಶಾಖೆಯ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಜೀ ಮತ್ತು ಶ್ರೀರಾಮ ಶಾಖೆಯ ಸಂಚಾಲಕರಾದ ವಿನ್ಯಾಸ್ ಕೊಟಿಮನೆ ಉಪಸ್ಥಿತರಿದ್ದರು. ಅಶೋಕ್ ಅಂಬೆಕಲ್ಲು ಸ್ವಾಗತಿಸಿ,ಕುಮಾರ್ ಪೈಲಾಜೆ ವಂದಿಸಿ,ಮೋಹಿತ್ ಜೇನುಕೋಡಿ ಇವರು ಕಾರ್ಯಕ್ರಮ ನಿರೂಪಿಸಿದರು. ವಿಶ್ವಹಿಂದೂ ಪರಿಷತ್ ಬಜರಂಗದಳ ಶ್ರೀರಾಮ ಶಾಖೆಯ ಎಲ್ಲಾ ಕಾರ್ಯಕರ್ತ ಬಂಧುಗಳು ಮತ್ತು ಊರಿನ ಹಿರಿಯರು ಉಪಸ್ಥಿತರಿದ್ದರು. ನಂತರ ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!