ಹರಿಹರ ಪಳ್ಳತ್ತಡ್ಕ : ಜೂ.13 ರಂದು ಸಚಿನ್ ಕ್ರೀಡಾ ಸಂಘದ ಸಾರಥ್ಯದಲ್ಲಿ “ಅಭಿನಂದನಾ ಹಾಗೂ ಸನ್ಮಾನ ಸಮಾರಂಭ”

ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಇದರ ಸಾರಥ್ಯದಲ್ಲಿ ಜೂ.13 ಶನಿವಾರದಂದು ಬೆಳಿಗ್ಗೆ 10:30ಕ್ಕೆ ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ ನಿವೃತ್ತ ಯೋಧರಾದ ಭಾಸ್ಕರ ಕೇಮಟಿ ರವರಿಗೆ ಅಭಿನಂದನಾ ಸಮಾರಂಭ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.99 ಫಲಿತಾಂಶ ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದ ದಿ| ದಿವಾಕರ ಮುಂಡಾಜೆ ರವರ ಪುತ್ರಿ ಕು.ಆಶಿಕಾ ಮುಂಡಾಜೆ...

ಜೂ.13 : ಜೇಸಿಐ ಸುಳ್ಯ ಪಯಸ್ವಿನಿ ಹಾಗೂ ಅಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದ ಆಶ್ರಯದಲ್ಲಿ  ರಕ್ತದಾನ ಶಿಬಿರ

ರಕ್ತದಾನವು ಮಾನವೀಯತೆಯ ಶ್ರೇಷ್ಠ ಸೇವೆಗಳಲ್ಲಿ ಒಂದಾಗಿದ್ದು, ರಕ್ತದಾನ ಮಾಡಿ-ಜೀವದಾನ ನೀಡಿ, ನಿಮ್ಮ ಒಂದು ಹನಿ ರಕ್ತ ಮತ್ತೋಬ್ಬರ ಬದುಕಿಗೆ ಆಶಾಕಿರಣವಾಗಬಹುದು ಎಂಬ ಆಶಯದೊಂದಿಗೆ ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ, ಅಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ ಸುಳ್ಯ ತಾಲೂಕು ಹಾಗೂ ಸರಕಾರಿ ಆಸ್ಪತ್ರೆ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ...
Ad Widget

ಸುದೀರ್ಘ ದಿನಗಳು ಪ್ರಧಾನಿಯಾಗಿ ನರೇಂದ್ರ ಮೋದಿ ಸೇವೆ – ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಪೆರುವಾಜೆ ದೇಗುಲದಲ್ಲಿ ವಿಶೇಷ ಪೂಜೆ

ಭಾರತದ ಪ್ರಧಾನಮಂತ್ರಿಯಾಗಿ ಸತತ 4,399 ದಿನಗಳ ಕಾಲ ನಿರಂತರವಾಗಿ ಜನಸೇವೆ ಸಲ್ಲಿಸಿ ಐತಿಹಾಸಿಕ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸುಳ್ಯದ ಬಿಜೆಪಿ ಮಂಡಲ ಸಮಿತಿ ವತಿಯಿಂದ ಪೆರುವಾಜೆ ಜಲದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ,ಹಾಗೂ ಮಹಾಮಂಗಳಾರತಿಯನ್ನು ಜೂ‌.10ರಂದು ಸಲ್ಲಿಸಲಾಯಿತು.ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸತತ 4398 ದಿನಗಳ ಆಡಳಿತದ ದಾಖಲೆಯನ್ನು...

“ಮಾನಸ ಮಹಿಳಾ ಮಂಡಲದ ಕಾರ‍್ಯಚಟುವಟಿಕೆ ಶ್ಲಾಘನೀಯ” : ಚಂದ್ರಾವತಿ ಬಡ್ಡಡ್ಕ

"ಮಾನಸ ಮಹಿಳಾ ಮಂಡಲ(ರಿ.) ಜಟ್ಟಿಪಳ್ಳವೂ ತನ್ನ ಇಪ್ಪತೈದು ವರ್ಷಗಳಿಂದಲೂ ಕ್ರಿಯಾಶೀಲವಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಮಹಿಳೆಯರ ಹಿಂದಿನ ಸ್ಥಿತಿಗೂ  ಪ್ರಸ್ತುತತೆಗೂ ತೀರಾ ಭಿನ್ನವಾಗಿ ಬೆಳೆದು ಬಂದಿದೆ" ಎಂದು ಮಾನಸ ಮಹಿಳಾ ಮಂಡಲ(ರಿ.)ದ ಬೆಳ್ಳಿಹಬ್ಬ  ಆಚರಣೆಯ ನೆನಪಿಗೆ ಹೊರತಂದ ಸ್ಮರಣಸಂಚಿಕೆ “ಮಾನಿನಿ-೨೦೨೫” ನ್ನು ಬಿಡುಗಡೆಗೊಳಿಸಿ, ಸಾಹಿತಿ-ಬರಹಗಾರರಾದ ಅರೆಭಾಷೆ ಅಕಾಡೆಮಿಯ ಸದಸ್ಯರಾದ ಶ್ರೀಮತಿ ಚಂದ್ರಾವತಿ ಬಡ್ಡಡ್ಕರವರು ಹೇಳಿದರು....

ಐವರ್ನಾಡು : ಗ್ರಾ. ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆದ ಸುಳ್ಯದ ನಿವಾಸಿಗಳಿಗೆ ದಂಡ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಸುಳ್ಯ ನಿವಾಸಿಗಳಿಗೆ ಜೂ.10 ರಂದು  ರೂ 5000.00 ದಂಡ ವಿಧಿಸಲಾಯಿತು. ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆಯಲ್ಲಿ ತ್ಯಾಜ್ಯ ಎಸೆದಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ತ್ಯಾಜ್ಯ ಎಸೆದ ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಪರಿಶೀಲಿಸಿ ತ್ಯಾಜ್ಯ ಎಸೆದ...

ಎನ್.ಎಂ.ಎಂ.ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಮರ್ಕಂಜ ಪ್ರೌಢಶಾಲಾ ವಿದ್ಯಾರ್ಥಿಗಳು

2025-26ನೇ ಸಾಲಿನ ಎನ್.ಎಂ.ಎಂ.ಎಸ್ ವಿದ್ಯಾರ್ಥಿ ವೇತನಕ್ಕೆ ಮರ್ಕಂಜ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅರಮನೆಗಾಯ ಸಂಜೀವ ಹಾಗೂ ಶ್ರೀಮತಿ ಸುಮತಿ ದಂಪತಿಗಳ ಪುತ್ರಿ ರೇಷ್ಮಾ, ಹಲ್ದಡ್ಕ ಪುರುಷೋತ್ತಮ ಹಾಗೂ ಶ್ರೀಮತಿ ಉಷಾ ದಂಪತಿಗಳ ಪುತ್ರಿ ಪಲ್ಲವಿ ಹಾಗೂ ಕಾಯರ ಮುತ್ತಪ್ಪ ಹಾಗೂ ಶ್ರೀಮತಿ ಸುಜಾತ ದಂಪತಿಗಳ ಪುತ್ರಿ ಶ್ರೀಷ್ಮ ಇವರುಗಳು ಆಯ್ಕೆಗೊಂಡಿದ್ದು, ಶಾಲಾ ಶಿಕ್ಷಕವೃಂದ ಹಾಗೂ ಶಾಲಾಭಿವೃದ್ಧಿ...

ಕುಕ್ಕೆ ದೇವಳದ ಭದ್ರತಾ ಸಿಬ್ಬಂದಿಗಳಿಗೆ ಉಚಿತ ಕೊಡೆ ವಿತರಣೆ

ಸುಬ್ರಹ್ಮಣ್ಯ ಜೂನ್ 10 : ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷ ಗೋಪಾಲ ಎಣ್ಣೆಮಜಲು ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 50 ಭದ್ರತಾ ಸಿಬ್ಬಂದಿಗಳಿಗೆ ಸೋಮವಾರ ಉಚಿತವಾಗಿ ಕೊಡೆಗಳನ್ನು ವಿತರಣೆ ಮಾಡಿದರು. ಭದ್ರತಾ ಸಿಬ್ಬಂದಿಯವರು ಹಗಲು ರಾತ್ರಿ ಎನ್ನದೆ ಶಿಫ್ಟ್ ನಲ್ಲಿ ಮಳೆಗಾಲ, ಬೇಸಿಗೆಗಾಲಗಳಲ್ಲಿ ಭಕ್ತಾದಿಗಳ ಸರತಿ ಸಾಲು, ವಾಹನ ಪಾರ್ಕಿಂಗ್, ದೇವಳದ ಹೊರಾಂಗಣದ...

ಪುತ್ತೂರು ಹಾಗೂ ಸುಳ್ಯದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಹಾಗೂ ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ – ಮಾಹಿತಿ ನೀಡಿದ ವಿದ್ಯಾಮಾತಾ ಫೌಂಡೇಶನ್

ಪುತ್ತೂರು ಹಾಗೂ ಸುಳ್ಯದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಹಾಗೂ ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಹಾಗೂ ಕಛೇರಿ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು, ಯಾವುದೇ ಪದವಿ ಪೂರ್ಣಗೊಳಿಸಿದ ಕಡ್ಡಾಯವಾಗಿ ಬೇಸಿಕ್ ಕಂಪ್ಯೂಟರ್ ಜ್ಞಾನವನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಸೂಕ್ತ ಅರ್ಹತೆ ಇರುವವರಿಗೆ ಹಾಗೂ ಅನುಭವ ಇಲ್ಲದ ಫ್ರೆಶರ್ಸ್‌ಗಳಿಗೂ ಮುಕ್ತ...

ಸಂಪಾಜೆ ಕೊಡಗು ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿಯ 33ನೇ ವರ್ಷದ ಗೌರಿ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆ

ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಸಂಪಾಜೆ ಕೊಡಗು ಇದರ ಆಶ್ರಯದಲ್ಲಿ ನಡೆಸುವ 33ನೇ ವರ್ಷದ ಗೌರಿ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆಯು ಜೂ.06 ಶನಿವಾರದಂದು ಪಯಸ್ವಿನಿ ಪ್ರಾ.ಕೃ.ಪ.ಸ ಸಂಘದ ಸಭಾಭವನದಲ್ಲಿ ಸಮಿತಿಯ ಅಧ್ಯಕ್ಷರಾದ ವಿಕ್ರಾಂತ್ ಎಂ.ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿಂದಿನ ಬಾರಿಯ ಆಯ ವ್ಯಯ ಪತ್ರವನ್ನು ಗೌರವಾಧ್ಯಕ್ಷರಾದ ಬಿ.ಆರ್ ಶಿವರಾಮ ಮಂಡಿಸಿದರು. ಈ ಬಾರಿಯ ನೂತನ ಅಧ್ಯಕ್ಷರಾಗಿ...

ಗುತ್ತಿಗಾರು ಪದವಿ ಪೂರ್ವ ಕಾಲೇಜಿಗೆ ಸತತ ಎರಡನೇ ಬಾರಿ ಶೇ.100 ಫಲಿತಾಂಶ – ಲಯನ್ಸ್ ಕ್ಲಬ್ ನಿಂದ ಗೌರವ

ದ್ವಿತೀಯ ಪಿಯುಸಿ ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಸತತ ಎರಡನೇ ಬಾರಿಗೆ ಶೇ.100 ಫಲಿತಾಂಶ ಪಡೆದ ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜನ್ನು ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾ ರಾಜ್ಯಪಾಲರ ಭೇಟಿಯ ಸಂದರ್ಭದಲ್ಲಿ ಗೌರವಿಸಲಾಯಿತು. ಕಾಲೇಜು ಪ್ರಾಂಶುಪಾಲರಾದ ಚೆನ್ನಮ್ಮ.ಪಿ ಇವರು ಗೌರವ ಸ್ವೀಕರಿಸಿದರು.
Loading posts...

All posts loaded

No more posts

error: Content is protected !!