Ad Widget

ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿಯಿಂದ ಅಶಕ್ತ ಕುಟುಂಬಗಳಿಗೆ ಟೇಬಲ್ ಫ್ಯಾನ್ ಕೊಡುಗೆ


ಬಿಸಿಲಿನ ಝಳ ಹೆಚ್ಚುತ್ತಿರುವ ಈ ಸಂಧರ್ಭದಲ್ಲಿ, ದಿನಕೂಲಿ ನಡೆಸಿ ಜೀವನ ಸಾಗಿಸುವ ಮನೆಗಳಲ್ಲಿನ ಅಶಕ್ತರು ಮತ್ತು ಅನಾರೋಗ್ಯಗಳಿಂದ ಬಳಲುತ್ತಿರುವ, ಕನಿಷ್ಠ ಫ್ಯಾನ್ ಹೊಂದಿರದ ಕುಟುಂಬಗಳನ್ನು ಗಮನಿಸಿದ ಬಾಳುಗೋಡು ಗ್ರಾಮದ ಕಾಂಗ್ರೆಸ್ ಸಮಿತಿಯ ಸದಸ್ಯರು ತೀರಾ ಕಡುಬಡತನದಲ್ಲಿ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ, ರೇಷನ್ ಕಾರ್ಡ್

ತಿದ್ದುಪಡಿಯಾಗದೇ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಲಕ್ಷ್ಮೀ ಯೋಜನೆಯಿಂದ ವಂಚಿತರಾದ ನಾಲ್ಕು ಮನೆಗಳನ್ನು ಗುರುತಿಸಿ ಅವರ ಮನೆಗಳಿಗೆ ಮಾನವೀಯ ನೆಲೆಯಲ್ಲಿ ಟೇಬಲ್ ಫ್ಯಾನ್ ಕೊಡುಗೆ ನೀಡಲಾಯಿತು. ಈ ಸಂದರ್ಭ ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ರವಿಕುಮಾರ್ ಕಿರಿಭಾಗ, ಹಿರಿಯರಾದ ದಯಾನಂದ ಕಟ್ಟೆಮನೆ, ಶೈಲೇಶ್ ಕಟ್ಟೆಮನೆ, ರಾಮಕೃಷ್ಣ ಕಟ್ಟೆಮನೆ, ಚೇತನ್ ಕಜೆಗದ್ದೆ, ಮಂಜುನಾಥ ಕಿರಿಭಾಗ, ಭಾಸ್ಕರ್ ದೋಲ್ಪಾಡಿ, ಶೇಷಪ್ಪ ಗೋರ್ತಿಲ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!