Ad Widget

ಬೈಕ್ ಅಪಘಾತದಲ್ಲಿ ಮೃತಪಟ್ಟ ದರ್ಶನ್ ಬನ ಹಾಗೂ ಅವಿನ್ ಮನೆಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ


ಎ.28ರಂದು ಅಪರಾಹ್ನ ಅರಂತೋಡು ಗ್ರಾ. ಪಂ. ಸದಸ್ಯ ಹಾಗೂ ಬಿಜೆಪಿ ಕಾರ್ಯಕರ್ತ ಗಂಗಾಧರ ಬನ ಹಾಗೂ ಶೇಷಪ್ಪ ಗೌಡರ ಅವರ ಮನೆಗೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರು  ಭೇಟಿ ನೀಡಿ ಕುಟುಂಬಸ್ಥರ ಕೈ ಹಿಡಿದು ಸಾಂತ್ವನ ಹೇಳಿದರು.

ಗಂಗಾಧರ ಬನ ಅವರ ಪುತ್ರ ದರ್ಶನ್ ಬಿ.ಜಿ. ಅವರು ಮತದಾನ ಮಾಡಲು ಮೈಸೂರಿನಿಂದ ಆಗಮಿಸುತ್ತಿದ್ದ ವೇಳೆ ಸಂಪಾಜೆಯ ದೊಡ್ಡಡ್ಕ ಎಂಬಲ್ಲಿ ಬೈಕ್ ಅಪಘಾತವಾಗಿ ದರ್ಶನ್ ಮೃತಪಟ್ಟಿದ್ದರು.


ಶೇಷಪ್ಪ ಗೌಡರ ಪುತ್ರ ಅವಿನ್ ಅವರು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಕ್ಯಾಪ್ಟನ್ ಬ್ರಿಜೇಶ್ ಚೌಟರು ಮಾತನಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ನಾಯಕರುಗಳಾದ ಸಂತೋಷ್ ಕುತ್ತಮೊಟ್ಟೆ, ಕೇಶವ ಅಡ್ತಲೆ,  ಶಿವಾನಂದ ಕುಕ್ಕುಂಬಳ , ದಯಾನಂದ ಕುರುಂಜಿ, ತೀರ್ಥರಾಮ ಅಡ್ಕಬಳೆ, ಶಂಕರಲಿಂಗಂ, ಕುಸುಮಾಧರ ಅಡ್ಕಬಳೆ, ಭಾರತಿ ಪುರುಷೋತ್ತಮ ಉಳುವಾರು, ಸೇರಿದಂತೆ ಮತ್ತಿತರ ಸ್ಥಳೀಯ ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!