Ad Widget

ಶತಮಾನ ಕಂಡ ಶಾಲೆಯ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳ ತೀರ್ಮಾನ – ಎಂ.ಬಿ.ಸದಾಶಿವ

ಶತಮಾನ ಕಂಡ ಸುಳ್ಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಲು ಹಿರಿಯ ವಿದ್ಯಾರ್ಥಿಗಳು ಸಮಿತಿ ರಚಿಸಿ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಎಂ.ಬಿ‌. ಸದಾಶಿವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸುಳ್ಯದ ಜ್ಯೋತಿ ಸರ್ಕಲ್ ಬಳಿಯ ಸ.ಮಾ.ಹಿ.ಪ್ರಾ.ಶಾಲೆಯನ್ನು ಆಧುನಿಕ ಅಗತ್ಯಗಳಿಗೆ ಅನುಗುಣವಾಗಿ ಶಾಲೆಯನ್ನು ಪುನರ್ ನಿರ್ಮಾಣಗೊಳಿಸುವ ಅಭಿವೃದ್ಧಿ ಯೋಜನೆಯ ನೀಲಿ ನಕಾಶೆಯನ್ನು ಸಿದ್ಧಪಡಿಸಲಾಗಿದೆ. ಸುರಕ್ಷಿತ ಮತ್ತು ಸುಂದರ...

ಆಲೆಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಸಿ0ಟೆಕ್ಸ್ ಟ್ಯಾಂಕ್ ವಿತರಣೆ

ಆಲೆಟ್ಟಿ ಗ್ರಾಮ ಪಂಚಾಯತಿನ ಶೇಕಡಾ 25% ರ ಅನುದಾನವು ಪರಿಸಿಷ್ಟ ಜಾತಿ ಮತ್ತು ಪರಿಸಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದಡಿಯಲ್ಲಿ ಆಲೆಟ್ಟಿ ಗ್ರಾಮ ಪಂಚಾಯತಿನ 2 ನೇ ವಾರ್ಡಿನ ಪಂಚಾಯತ್ ಸದಸ್ಯರ ಶಿಫಾರಸ್ಸಿನ ಮೇರೆಗೆ 2ನೇ ವಾರ್ಡಿನ ಕುಡೆ೦ಬಿ ಪರಿಶಿಷ್ಟ ಪಂಗಡದ ನೀಲಮ್ಮ, ವಸಂತಿ, ಸುಮತಿ, ನೀಲಮ್ಮ, ಪದ್ಮಾವತಿ, ರಾಮಕೃಷ್ಣ, ಪುಷ್ಪಲತಾ ಎಂಬ 7 ಫಲಾನುಭವಿಗಳಿಗೆ...
Ad Widget

ಚಂದನ ಸಾಹಿತ್ಯ ವೇದಿಕೆಯಿಂದ ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಮಹಿಳಾ ದಿನಾಚರಣೆ ಮತ್ತು ಮಹಿಳಾ ಕವಿಗೋಷ್ಠಿ

ಬೆಳ್ಳಾರೆ ಪೆರುವಾಜೆಯ ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಚಂದನ ಸಾಹಿತ್ಯ ವೇದಿಕೆ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಮತ್ತು ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವು ಜರುಗಿತು. ಡಾ.ಕೆ.ಶಿವರಾಮ ಕಾರಂತ ಸರಕಾರಿ ಫುಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ  ಅಧ್ಯಯನ ಕೇಂದ್ರ ಇದರ...

ದೇವಚಳ್ಳ ಶಾಲೆಯಲ್ಲಿ ನೂತನ ಕೊಠಡಿಗೆ ಶಾಸಕರಿಂದ ಗುದ್ದಲಿಪೂಜೆ

ಸ. ಹಿ.ಪ್ರಾ. ಶಾಲೆ ದೇವಚಳ್ಳ ಶಾಲೆಯಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿ ನೂತನ ಕೊಠಡಿಯ ಗುದ್ದಲಿ ಪೂಜೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಮಾ.10ರಂದು ನೆರವೇರಿಸಿದರು.ಶತಮಾನೋತ್ಸವದ ಪ್ರಯುಕ್ತ ತರಗತಿ ಕೊಠಡಿಗಳಿಗೆ ಶಿಲಾನ್ಯಾಸ ಮತ್ತು ಹಿರಿಯ ವಿದ್ಯಾರ್ಥಿಗಳ ಮತ್ತು ಪೋಷಕರ ಸಮ್ಮಿಲನ ಹಾಗೂ ಕ್ರೀಡಾಕೂಟವು ನಡೆಯಿತು.ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ.ವಿ ತೀರ್ಥರಾಮ ಸಭಾ ಸಮಾರಂಭದ ಅಧ್ಯಕ್ಷತೆಯನ್ನು...

ಪಾಲ್ತಾಡು ಸಮೀಪದ ಕಾಪುತಕಾಡು ಶ್ರೀ ರಾಜಗುಳಿಗ ಸಾನಿಧ್ಯ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ರಾಜಗುಳಿಗ ದೈವದ ಕೋಲ

ಪುತ್ತೂರು : ಪೆರುವಾಜೆ -ಪಾಲ್ತಾಡಿ-ಕೊಳ್ತಿಗೆ ಗ್ರಾಮದ ವ್ಯಾಪ್ತಿಗೆ ಸಂಬಂಧಪಟ್ಟ  ಕಾಪುತಕಾಡು ಶ್ರೀರಾಜಗುಳಿಗ ಸಾನಿಧ್ಯದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವದಕೋಲವು ಮಾ.9ರಂದು ವೈಭವದಿಂದ ನಡೆಯಿತು.ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕರಾದ  ಶ್ರೀನಿವಾಸ್ ಹೆಬ್ಬಾರ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 8ಕ್ಕೆ ದೇವತಾ ಪ್ರಾರ್ಥನೆ ,ಸ್ಥಳ ಶುದ್ದಿ ,ಶ್ರೀ ಮಹಾಗಣಪತಿ ಹೋಮ ನಡೆಯಿತು.ಸಂಜೆ ದೈವಕ್ಕೆ ಎಣ್ಣೆ ವೀಳ್ಯ...

ಝೀ ಕನ್ನಡ ಯುವರತ್ನ ಪ್ರಶಸ್ತಿ ಪಡೆದ ಗೀತಾ ಗುಡ್ಡೆಮನೆ

ರಾಷ್ಟ್ರೀಯ ಕ್ರೀಡಾಪಟು, ಸುಳ್ಯದವರಾದ ಗೀತಾ ಗುಡ್ಡೆಮನೆ ಅವರು ಝೀ ಮೀಡಿಯಾ ಸಂಸ್ಥೆಯ ಝೀ ಕನ್ನಡ ಯುವರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗೀತಾ ಅವರ ಅಕಾಡೆಮಿಕ್ ಸಾಧನೆ ಮತ್ತು ಕ್ರೀಡಾ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಇವರು ಅಮರಪಡ್ನೂರು ಗ್ರಾಮದ ಕಂದಡ್ಕದ ದಿ. ಆನಂದ ಗೌಡ ಮತ್ತು ಶ್ರೀಮತಿ ಜಯ ದಂಪತಿಗಳ ಪುತ್ರಿ. ಈ ಹಿಂದೆ ದಾವಣಗೆರೆ...

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಸಿಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂದಿರಾ ರೈ ವಹಿಸಿದ್ದರು. ಶ್ರೀಮತಿ ರಾಜೇಶ್ವರಿ ಕುಮಾರಸ್ವಾಮಿ ದಂಪತಿಗಳು ದೀಪ ಬೆಳಗಿಸಿ ಭಾರತ ಮಾತೆ ಮತ್ತು ನಿವೇದಿತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅಭ್ಯಾಗತರಾಗಿ ಶ್ರೀಮತಿ ಲೀಲಾವತಿ ನಿವೃತ್ತ ಮುಖ್ಯ...

ಹರಿಹರ ಪಲ್ಲತ್ತಡ್ಕ : ಸಚಿನ್ ಕ್ರೀಡಾ ಸಂಘದಿಂದ ಮಗುವಿನ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

ಬಾಳುಗೋಡು ಗ್ರಾಮದ ಕೊತ್ನಡ್ಕ ಪ್ರಸಾದ್ ಹಾಗೂ ಆಶಲತಾ ದಂಪತಿಯ ಧೀಕ್ಷನ್ ಎಂಬ 4 ವರ್ಷದ ಮಗು ಹುಟ್ಟಿನಿಂದಲೇ ಕಾಲಿನ ನ್ಯೂನತೆ ಹೊಂದಿದ್ದು, ನಡೆದಾಡಲು ಅಶಕ್ತನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗುವಿನ ಚಿಕಿತ್ಸೆಗಾಗಿ ಹರಿಹರ ಪಲ್ಲತ್ತಡ್ಕದ ಸಚಿನ್ ಕ್ರೀಡಾ ಸಂಘದಿಂದ ಮಾ.10 ರಂದು ಸಹಾಯಧನದ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಚಿನ್ ಕ್ರೀಡಾ ಸಂಘದ ಅಧ್ಯಕ್ಷರಾದ ಪ್ರದೀಪ್...

ವಿಶ್ವ ಗ್ಲಾಕೋಮಾ ಜಾಗ್ರತಿ ದಿನ ..ಮಾರ್ಚ್ 12

ನಿಶ್ಯಬ್ದ ದ್ರಷ್ಟಿ ಚೋರ ಎಂಬ ಕುಖ್ಯಾತಿ ಗಳಿಸಿರುವ ಗ್ಲಾಕೋಮ ರೋಗದ ಬಗ್ಗೆ ಜಾಗ್ರತಿ ಮೂಡಿಸಲು ಪ್ರತಿ ವರುಷ ಮಾರ್ಚ ೧೨ ರಂದು ವಿಶ್ವ ಗ್ಲಾಕೋಮ ದಿನ ಎಂದು ಆಚರಿಸಿ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. 2024 ವರುಷದ ಈ ಆಚರಣೆಯ ಧ್ಯೇಯ ವಾಕ್ಯ "ಗ್ಲಾಕೋಮ ಮುಕ್ತ ವಿಶ್ವಕ್ಕಾಗಿ ಒಂದಾಗೋಣ "ಎಂಬುದಾಗಿದೆ. ಅಂಧತ್ವಕ್ಕೆ ನಾಂದಿ ಹಾಡುವ ಗ್ಲಾಕೋಮಾ ಕಣ್ಣುಗಳು...

ಕಲ್ಮಕಾರು : ಹಿಂದಿನ ಕಾಲದ ಸುರಂಗ ಪತ್ತೆ

ಕಲ್ಮಕಾರು ಗ್ರಾಮದ ಬಿಳಿಮಲೆ ಎಂಬಲ್ಲಿ ವೃತ್ತಾಕಾರದ ಗುಹೆಯೊಂದು ಪತ್ತೆಯಾಗಿದೆ. ಬಿಳಿಮಲೆ ಉಮೇಶ್ ಅವರ ಮನೆಯ ಪಕ್ಕದಲ್ಲಿ ಈ ಗುಹೆ ಪತ್ತೆಯಾಗಿದೆ. ಗುಹೆಯ ಮೇಲ್ಭಾಗಕ್ಕೆ ಮುಚ್ಚಳದಂತೆ ಕಲ್ಲೊಂದನ್ನು ಕೆತ್ತಿದಂತೆ ಕಾಣುತ್ತಿದೆ. ಬಿಳಿಮಲೆ ಉಮೇಶ್‌ ಅವರ ರಬ್ಬರ್‌ ತೋಟದಲ್ಲಿ ಜೆಸಿಬಿ ಮೂಲಕ ಅಗೆತ ನಡೆಸುವ ವೇಳೆ ಇದು ಪತ್ತೆಯಾಗಿದೆ. ಅಗೆತ ವೇಳೆ ಮುಚ್ಚಳದ ಮಾದರಿ ಪತ್ತೆಯಾಗಿದ್ದು, ಅದನ್ನು ತೆಗೆದಾಗ...
Loading posts...

All posts loaded

No more posts

error: Content is protected !!
ವಾಟ್ಸ್‌ಆಪ್‌ ಗ್ರೂಪ್‌ಗೆ ಸೇರಿ