Ad Widget

ದ.ಕ. ಬಿ.ಜೆ.ಪಿ. ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟ ನಾಳೆ ಸುಳ್ಯಕ್ಕೆ ಭೇಟಿ


ದ.ಕ. ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ  ನಾಳೆ ಬೆಳಿಗ್ಗೆ ಸುಳ್ಯಕ್ಕೆ ಭೇಟಿ ನೀಡಲಿದ್ದಾರೆ.

  8 ಗಂಟೆಗೆ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ, ಹಳೆ ಬಸ್ ನಿಲ್ದಾಣ ದಲ್ಲಿರುವ ಡಾ. ಕುರುಂಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.
ನಂತರ ಸುಳ್ಯ ಪ್ರಮುಖರಾದ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಡಾ. ಚಿದಾನಂದ ಕೆ.ವಿ., ಡಾ.ರೇಣುಕಾಪ್ರಸಾದ್ ಕೆ.ವಿ. ಯವರಲ್ಲಿಗೆ ಭೇಟಿ ನೀಡಲಿದ್ದಾರೆ.

ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಬಿಜೆಪಿ ಕಚೇರಿಗೆ ಪೂ.10ಕ್ಕೆ  ಭೇಟಿ ನೀಡಲಿದ್ದು, ಚುನಾವಣಾ ಕಚೇರಿ ಉದ್ಘಾಟಿಸಲಿದ್ದಾರೆ. ಬಳಿಕ ಆಲೆಟ್ಟಿ, ಅಜ್ಜಾವರ, ಸುಳ್ಯ ಮಹಾಶಕ್ತಿಕೇಂದ್ರಗಳ ಕಾರ್ಯಕರ್ತರ ಸಭೆ ನಡೆಯಲಿದೆ. ಬಳಿಕ ಮಾಜಿ ಸಚಿವ ಎಸ್.ಅಂಗಾರರ ಮನೆಗೆ ಭೇಟಿ, ಹಿರಿಯರಾದ ಚಂದ್ರಶೇಖರ ತಳೂರು ಮನೆ ಭೇಟಿ. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಭೇಟಿ, ಸಂಪುಟ ನರಸಿಂಹ ಮಠಾಧೀಶರ ಭೇಟಿ ಮಾಡಲಿದ್ದಾರೆ. ಬಳಿಕ ಸುಬ್ರಹ್ಮಣ್ಯ , ಗುತ್ತಿಗಾರು ಮಹಾಶಕ್ತಿಕೇಂದ್ರ ಕಾರ್ಯಕರ್ತರ ಸಭೆ. ಬಳಿಕ ಡಾ. ರಾಮಯ್ಯ ಭಟ್ ಪಂಜ, ಶಾಸಕಿ ಭಾಗೀರಥಿ ಮುರುಳ್ಯ ಮನೆ ಭೇಟಿ ನೀಡಲಿದ್ದಾರೆ. ಅಪರಾಹ್ನ ಕೊಯಿಲದಲ್ಲಿ ನೆಲ್ಯಾಡಿ, ಕಡಬ, ಬೆಳಂದೂರು ಶಕ್ತಿಕೇಂದ್ರ ಕಾರ್ಯಕರ್ತರ ಸಭೆ. ಹಿರಿಯರಾದ ದಿವಾಕರ ರಾಮಕುಂಜ ಮನೆ ಭೇಟಿ, ಅಣ್ಣಾ ವಿನಯಚಂದ್ರರ ಮನೆ ಭೇಟಿ, ಸಂಜೆ ಪೆರುವಾಜೆ ಜೆಡಿ ಆಡಿಟೋರಿಯಂ ನಲ್ಲಿ ಬೆಳ್ಳಾರೆ ಮಹಾಶಕ್ತಿಕೇಂದ್ರ ಕಾರ್ಯಕರ್ತರ ಸಭೆ ನಡೆಯುವುದು. ಬಳಿಕ ಉಪೇಂದ್ರ ಕಾಮತ್ ವಿನೋಬಾನಗರ ಮನೆ ಭೇಟಿ, ನ.ಸೀತಾರಾಮರ ಮನೆ ಭೇಟಿ ಕಾರ್ಯಕ್ರಮ ಮಾಡಲಿದ್ದಾರೆಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!