Ad Widget

ಸುಳ್ಯದಲ್ಲಿ ಪರಿಹಾರಿಣಿ ಅಕ್ಯುಪ್ರೆಶರ್ ಚಿಕಿತ್ಸೆ ಆರಂಭ.

ಸುಳ್ಯದ ಸಂಧ್ಯಾರಶ್ಮಿ (ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಎದುರು) ಯಲ್ಲಿ ಅಕ್ಯುಪ್ರೆಶರ್ ಚಿಕಿತ್ಸೆ ಆರಂಭಗೊಂಡಿದ್ದು ಕಾರ್ಯಕ್ರಮವನ್ನು ಸಂಧ್ಯಾರಶ್ಮಿ ನಿವೃತ್ತ ನೌಕರರ ಸಂಘದ ಖಜಾಂಜಿಗಳಾದ ಎಂ ಸುಬ್ರಹ್ಮಣ್ಯ ಹೊಳ್ಳ ಉದ್ಘಾಟಿಸಿದರು ಉದ್ಘಾಟನಾ ವೇದಿಕೆಯಲ್ಲಿ ಸಂಧ್ಯಾ ರಶ್ಮಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಡಾ. ರಂಗಯ್ಯ, ಜಯಮ್ಮ , ಅನಿಲ್ ಎಂ ಬಿ , ರಶ್ಮಿತ ಟಿ ಎಸ್ , ಸುಮತಿ ನಾಯಕ್ , ಹೇಮಲತ , ನಿರ್ದೇಶಕರಾದ ವಾಸುದೇವ ಎನ್ ಮೊಗ್ರ, ಕೇಶವ ಮೊರಂಗಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿವಮೊಗ್ಗದ ಚಂದನ್. ಜಿ. ಮತ್ತು . ಮಂಜುನಾಥ್. ಎನ್.ರವರು ಚಿಕಿತ್ಸಕರಾಗಿದ್ದು ಮೊಣಕಾಲು ನೋವು, ಸೊಂಟ ನೋವು, ಬೆನ್ನು ನೋವು, ಕೈಕಾಲು ಸೆಳೆತ, ಮಲಬದ್ಧತೆ, ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್, ಕೊಲೆಸ್ಟ್ರಾಲ್, ಪಕ್ಷವಾತ,ಗಂಟುನೋವು, ದೇಹದ ಅತಿಭಾರ, ಸ್ತ್ರೀಯರ ಸಮಸ್ಯೆಗಳು, ಜೀರ್ಣ ಸಮಸ್ಯೆ, ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಅಂಗೈ ಮತ್ತು ಪಾದಗಳಿಗೆ ಒತ್ತಡ ನೀಡಿ ದೇಹವನ್ನು ಪುನಶ್ಚೇತನ ಗೊಳಿಸಿ ಆರೋಗ್ಯ ವರ್ಧಿಸುವ ಈ ಚಿಕಿತ್ಸೆಯ ಉಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 814 7870 814 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!