Ad Widget

ಸುಳ್ಯ : ನಗರ ಪಂಚಾಯತ್ ನಾಮನಿರ್ದೇಶನ ಸದಸ್ಯರಾಗಿ ಕೊಕ್ಕೊ , ರಾಜು ಪಂಡಿತ್ , ಬಾಸ್ಕರ ಪೂಜಾರಿ ನೇಮಕ

ಸರಕಾರವು ತಮ್ಮ ಆಡಳಿತದ ಅವಧಿಯಲ್ಲಿ ತಮ್ಮ ತಮ್ಮ ಪಕ್ಷದ ಕಾರ್ಯಕರ್ತರು ನಾಯಕರುಗಳನ್ನು ನಾಮ ನಿರ್ದೇಶನ ಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಅದರಂತೆ ಇದೀಗ ಸುಳ್ಯ ನಗರ ಪಂಚಾಯತ್ ಗೆ ಸರಕಾರವು ನಾಮನಿರ್ದೇಶನ ಮಾಡಲು ಮೂವರ ಹೆಸರನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.

ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇದೀಗ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಸಿದ್ದಿಕ್ ಕೊಕ್ಕೊ , ಶಾರದಾಂಬ ಟ್ರಸ್ಟ್ ನ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಾಜು ಪಂಡಿತ್ , ಮತ್ತು ದುಗಲಡ್ಕದ ಬಾಸ್ಕರ ಪೂಜಾರಿ ಇವರನ್ನು ಸರಕಾವು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಲು ಸಿದ್ದವಾಗಿದ್ದು ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದ್ದು ಇಂದು ಅಥವಾ ನಾಳೆ ಅಧಿಕೃತ ಪ್ರಕಟನೆಯಾಗಲಿದೆ .

Related Posts

error: Content is protected !!