Ad Widget

ಐನೆಕಿದುವಿನಲ್ಲಿ ಮಾನ್ಯ ಶಾಸಕರಾದ .ಕು.ಭಾಗೀರಥಿ ಮುರುಳ್ಯ ಅವರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ‌.‌

ಐನೆಕಿದು ಗ್ರಾಮದಲ್ಲಿ ಸುಮಾರು 25ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಿರು ಸೇತುವೆಯನ್ನು ಮಾನ್ಯ ಶಾಸಕರಾದ ಕು.ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಭಾಜಪಾ ಮಂಡಲ ಅಧ್ಯಕ್ಷರಾದ ಶ್ರೀ ವೆಂಕಟ್ ವಳಲಂಬೆ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ವೆಂಕಟ್ ದಂಬೆಕೋಡಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಸುಜಾತ ಧನಂಜಯ ಉಪಾಧ್ಯಕ್ಷ ಶ್ರೀ ವೆಂಕಟೇಶ್ ಯಚ್.ಯಲ್.ಸದಸ್ಯರಾದ ಭಾರತಿ ದಿನೇಶ್ ಹಾಗೂ ಲಲಿತಾ ಗುಂಡಡ್ಕ ಐನೆಕಿದು -ಸುಬ್ರಹ್ಮಣ್ಯ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು ಶ್ರೀ ಹರಿಹರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಐನೆಕಿದು ಬಾಜಪ ಬೂತ್ ಸಮಿತಿ ಅಧ್ಯಕ್ಷ ಕಿರಣ್ ಪೈಲಾಜೆ ಸ್ಥಳೀಯರಾದ ಯತೀಂದ್ರ ಬಿ.ಆರ್.ರಮೇಶ್ ಕೋನಡ್ಕ ಅಜಿತ್ ಕಲ್ಲೇರಿ ಶಶಿಧರ ಕತ್ತಿ ಮಜಲು ವಿನಯ್ ಅಂಙಣ ಹಾಗೂ ಸೇತುವೆ ಫಲಾನುಭವಿಗಳು ಉಪಸ್ಥಿತರಿದ್ದರು.ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಆಚಾರ್ಯ ಪೈಲಾಜೆ ಕಾರ್ಯಕ್ರಮ ನಿರೂಪಿಸಿ ನವೀನ್ ಕಟ್ರಮನೆ ಧನ್ಯವಾದಗಳನ್ನು ತಿಳಿಸಿ ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತಗಳನ್ನು ಹಾಗೂ ಹೆಮ್ಮೆಯ ಪ್ರಧಾನಿಯವರ ದೇಶದ ಅಭಿವೃದ್ಧಿ ಚಿಂತನೆ ಮನಗಂಡು ಹಾಗೂ ಗ್ರಾಮದಲ್ಲಿನ ಅಭಿವೃದ್ಧಿ ಯೋಜನೆಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ ಈ ಹಿಂದೆ ಐನೆಕಿದು ಸುಬ್ರಹ್ಮಣ್ಯ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಹರಿಪ್ರಸಾದ್ ಕೆದಿಲ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಗೊಂಡರು . ಭಾಜಪಾ ಸುಳ್ಯ ಮಂಡಲ ಅಧ್ಯಕ್ಷರಾದ ಶ್ರೀ ವೆಂಕಟ್ ವಳಲಂಬೆ ಪಕ್ಷದ ಶಾಲು ಹಾಕಿ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.ಇದಾದ ಬಳಿಕ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅನುದಾನದ ಕೊಪ್ಪಳಗದ್ದೆ ಬಳಿ ರಸ್ತೆ ಕಾಂಕ್ರೀಟ್ ಕರಣ ಹಾಗೂ ಕೆದಿಲ ಮಂಚಡ್ಕ ಎಂಬಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಉದ್ಘಾಟನೆ ನೆರವೇರಿಸಲಾಯಿತು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!