Ad Widget

ಮರ್ಕಂಜ: ನಿವೃತ್ತ ಶಿಕ್ಷಕ ಅಚ್ಚುತ.ಪಿ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಸರಕಾರಿ ಪ್ರೌಢಶಾಲೆ ಮರ್ಕಂಜ ಇಲ್ಲಿ ಸುಮಾರು 27 ವರ್ಷಗಳಿಂದ ಸೇವೆ ಸಲ್ಲಿಸಿ ಡಿ.31ರಂದು ನಿವೃತ್ತರಾದ ಅಚ್ಚುತ ಪಿ. ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಮರ್ಕಂಜ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಆನಂದ ಬಾಣೂರು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಚಿಪಿಲಿ, ಗ್ರಾಮ ಪಂಚಾಯತ್ ಅಧ್ಯಕ್ಷೆ...

ಸಾವಿರಾರು ಜನರ ನೋವು ನಿವಾರಿಸಿದ ನಾಟಿವೈಧ್ಯ ಶ್ರೀನಿವಾಸ್ ಪಂಡಿತ್

'ಕೋಟಿವಿಧ್ಯೆಗಿಂತ, ನಾಟಿವಿಧ್ಯೆ ಮೇಲು' ಎಂಬ ಮಾತಿನಂತೆ ಇಲ್ಲೊಬ್ಬರು ತನಗೆ ವಂಶಪಾರಂಪರ್ಯವಾಗಿ ಸಿದ್ಧಿಸಿದ ನಾಟಿವಿದ್ಯೆಯ ಜ್ಞಾನವನ್ನು ಬಳಸಿ ಆಸ್ಪತ್ರೆಯಲ್ಲಿ ವೈದ್ಯರಿಂದಲೇ ಗುಣಪಡಿಸಲಾಗಂತಹ ಕೆಲವೊಂದು ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಹಲವು ಜನರಿಗೆ ನೆರವಾದಂತಹ ತೆರೆಮರೆಯ 'ನಾಟಿವೈದ್ಯ' ರೊಬ್ಬರು ನಮ್ಮ ನಡುವೆ ಇದ್ದಾರೆ.ನೋಡಲು ಸರಳ ವ್ಯಕ್ತಿಯಾಗಿ ಕಂಡರೂ ಇವರ ಕಾರ್ಯ ಮಾತ್ರ ನೂರಾರು ಜನರಿಗೆ ನೆರವಾಗುವಂತಹವು. ದಕ್ಷಿಣ ಕನ್ನಡ ಜಿಲ್ಲೆಯ...
Ad Widget

ನಿರ್ಮಾಣಗೊಳ್ಳಲಿರುವ 110 ಕೆ.ವಿ ಸಬ್ ಸ್ಟೇಷನ್ ನ ಸ್ಥಳ ಪರಿಶೀಲನೆ ನಡೆಸಿದ ಸಚಿವ ಎಸ್. ಅಂಗಾರ

ಸುಳ್ಯದ ಬಹುದಿನಗಳ ಬೇಡಿಕೆಯಾದ 110 ಕೆವಿ ಸಬ್‌ಸ್ಟೇಷನ್‌ನ ಕಾಮಗಾರಿಗೆ ಜ.10 ರಂದು ಗುದ್ದಲಿಪೂಜೆ ನೆರವೇರಲಿದ್ದು, ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಭೇಟಿ ಪರಿಶೀಲನೆ ನಡೆಸಿದರು. ಕೆಪಿಟಿಸಿಎಲ್ ಹಾಗು ಮೆಸ್ಕಾಂ ಇಂಜಿನಿಯರ್‌ಗಳು ಜತೆಗಿದ್ದರು. 110 ಕೆವಿ ಸಬ್ ಸ್ಟೇಷನ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಆಂಧ್ರ ಮೂಲದ ಕಂಪೆನಿ...

ಅರಂತೋಡು : ವಿ.ಎಚ್.ಪಿ. ವತಿಯಿಂದ ಬಲಿದಾನ್ ದಿವಸ ಕಾರ್ಯಕ್ರಮ

ವಿಶ್ವ ಹಿಂದೂ ಪರಿಷತ್, ಭಜರಂಗದಳ, ದುರ್ಗವಾಹಿನಿ ಸುಳ್ಯ ಪ್ರಖಂಡದ ಅರಂತೋಡು ಹನುಮಾನ್ ಶಾಖೆಯ ವತಿಯಿಂದ ಸ್ವಾಮಿ ಶ್ರದ್ದಾನಂದ ಸ್ವಾಮೀಜಿಯ ಬಲಿದಾನ್ ದಿವಸ ಕಾರ್ಯಕ್ರಮ ಜ.1 ರಂದು ನಡೆಯಿತು. ಸ್ವಾಮೀಜಿಯ ತತ್ವ ಸಿದ್ಧಾಂತದ ಬಗ್ಗೆ ಪ್ರಾಂತ ಧರ್ಮ ಪ್ರಸರಣ ಪ್ರಮುಖ್ ಕೃಷ್ಣ ಮೂರ್ತಿ ಯವರು ತಿಳಿಸಿದರು. ಆ ಸಂದರ್ಭದಲ್ಲಿ ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಬಿ ಯನ್...

ಕೂಟೇಲು : ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ – ಕ್ರೀಡಾ ಸ್ಫೂರ್ತಿಯಿಂದ ಸೌಹಾರ್ದತೆ ಬೆಳೆಯುತ್ತದೆ : ಹೆಚ್.ಎಂ. ನಂದಕುಮಾರ್

ಶಕ್ತಿ ಪ್ರೆಂಡ್ಸ್ ಕ್ಲಬ್ (ರಿ) ಕೂಟೇಲು ಇದರ ಆಶ್ರಯದಲ್ಲಿ ಅಮರ ಮುಡ್ನೂರು ಗ್ರಾಮದ ಕೂಟೇಲು ಮದನ್ ಕ್ರೀಡಾಂಗಣದಲ್ಲಿ ಸ್ಥಳೀಯ ಗ್ರಾಮ ವ್ಯಾಪ್ತಿಯ 8 ತಂಡಗಳ ಮತ್ತು ಆಹ್ವಾನಿತ 8 ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮ ನಿನ್ನೆ ನಡೆಯಿತು. ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ಎನ್ ಜಯಪ್ರಕಾಶ್ ರೈ...

ಸಂಪಾಜೆ: ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಂಪಾಜೆ ಗ್ರಾಮದ ಚೆಡಾವು ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದ ಮೋಕ್ತೆಸರರ ಎಂ.ಬಿ ಸದಾಶಿವ ಸುಳ್ಯ ರವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪಿ ಎಲ್, ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ಬಾಬು ಹೆಚ್.ಎಂ, ಅಧ್ಯಕ್ಷರಾದ ಹುಕ್ರಪ್ಪ ಪಿ, ಸದಸ್ಯರಾದ ಶಶಿಕುಮಾರ್ ಹೆಚ್.ಬಿ, ನಾರಾಯಣ...

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವೀಣಾ ಎಂ.ಟಿ. ನೇಮಕ

ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಮಹಾದೇವ್ ಎಸ್.ಪಿ‌ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವೀಣಾ ಎಂ.ಟಿ ಅವರನ್ನು ನಿಯೋಜನೆ ಮಾಡಲಾಗಿದೆ. ಮರ್ಕಂಜ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ವೀಣಾ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ, ಬೆಳ್ಳಾರೆ ಸರಕಾರಿ ಪದವಿಪೂರ್ವ...

ಜ.10 ರಂದು 110 ಕೆವಿ ಸಬ್‌ಸ್ಟೇಷನ್ ಕಾಮಗಾರಿಗೆ ಶಂಕುಸ್ಥಾಪನೆ – ಇಂಧನ ಸಚಿವ ಸುನಿಲ್ ಕುಮಾರ್, ಸಚಿವ ಅಂಗಾರರ ಸತತ ಪ್ರಯತ್ನದ ಫಲ

ಸುಳ್ಯದ ಬಹುಕಾಲದ‌ ಬೇಡಿಕೆಯಾದ 110 ಕೆವಿ ಸಬ್‌ಸ್ಟೇಷನ್ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜನವರಿ 10 ರಂದು ಶಂಕುಸ್ಥಾಪನೆ ನಡೆಯಲಿದೆ ಎಂದು ಬಂದರು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ. ‌ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.10 ಪೂ.10.30ಕ್ಕೆ ಸುಳ್ಯದ ವಿದ್ಯುತ್ ಸಬ್ ಸ್ಟೇಷನ್ ಬಳಿಯಲ್ಲಿ ಇಂಧನ ಸಚಿವರಾದ ವಿ.ಸುನಿಲ್ ಕುಮಾರ್‌ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಾಡಾವಿನಿಂದ...

ಕೊಲ್ಲಮೊಗ್ರು : ಕಾಂತಾರ ಚಲನಚಿತ್ರ ಪ್ರದರ್ಶನ – ದೈವ ನರ್ತಕರಿಗೆ ಹಾಗೂ ಕಲಾವಿದರಿಗೆ ಸನ್ಮಾನ

ನಾಗರಿಕ ಸೇವಾ ಸಮಿತಿ ಕೊಲ್ಲಮೊಗ್ರು-ಕಲ್ಮಕಾರು ಇದರ ವತಿಯಿಂದ ಡಿ.30 ರಂದು ಕೊಲ್ಲಮೊಗ್ರು ಶ್ರೀ ಮಯೂರ ಕಲಾಮಂದಿರದಲ್ಲಿ ಕಾಂತಾರ ಚಲನಚಿತ್ರದ ಓಟಿಟಿ ಪ್ರದರ್ಶನ ಹಾಗೂ ದೈವ ನರ್ತಕರಿಗೆ ಮತ್ತು ರಂಗಭೂಮಿ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ನಾಗರಿಕ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ನಿವೃತ್ತ ಶಿಕ್ಷಕರಾದ ಕುಂಞಟ್ಟಿ ಶಿವರಾಮ ಮಾಸ್ತರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದ ಪ್ರಧಾನ...

ಮಧುಸೂದನ ಉಳುವಾರು ನಿಧನ

ಅರಂತೋಡು ಗ್ರಾಮದ ಉಳುವಾರು ಮಧುಸೂದನ ಉಳುವರು ಬ್ರೈನ್ ಹ್ಯಾಮರೇಜ್ ಇಂದು ನಿಧನರಾದರು ಎಂದು ತಿಳಿದುಬಂದಿದೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ತಿಲೋತ್ತಮೆ, ಪತ್ನಿ ಮಮತಾ ಹಾಗೂ ಮಕ್ಕಳಾದ ಪ್ರೀತಮ್ ಹಾಗೂ ಮೌಲ್ಯ ಅವರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!