Ad Widget

ಕೇನ್ಯ : ಶಾಲಾ ಪ್ರಾರಂಭೋತ್ಸವ

ಸ.ಕಿ.ಪ್ರಾ.ಶಾಲೆ ಕೇನ್ಯದಲ್ಲಿ ಶಾಲಾ ಪ್ರಾರಂಭೋತ್ಸವವು 16/05/2022 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಪುಟ್ಟಣ್ಣ ಗೌಡ ಕುಂಜಾತ್ತಾಡಿ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕುಸುಮ ಎಸ್ ರೈ, ಗೌರವ ಉಪಸ್ಥಿತಿಯಲ್ಲಿ ಶ್ರೀಮತಿ ವಿಮಲ ಆರ್ ರೈ ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ,ಅತಿಥಿಗಳಾಗಿ ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀಮತಿ ಟೀನಾ ಸಿ,ಪೋಷಕರಾದ ಶ್ರೀ ಶಿವಾನಂದ,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ದಮಯಂತಿ, ಮುಖ್ಯ ಶಿಕ್ಷಕಿ ರೇವತಿ, ಅತಿಥಿ ಶಿಕ್ಷಕಿ ತುಲಶ್ರಿ,ಗೌರವ ಶಿಕ್ಷಕಿ ಶ್ರೀಮತಿ ಅಂಕಿತಾ ಉಪಸ್ಥಿತರಿದ್ದರು. ಪೋಷಕರು, ಎಸ್ಡಿಎಂಸಿ ಸದಸ್ಯರು,ಹಿರಿಯ ವಿದ್ಯಾರ್ಥಿಗಳು ಇದ್ದರು. ಎಲ್ಲಾ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ದಿನ ಮಕ್ಕಳಿಗೆ ಕುರ್ಚಿ ಖರೀದಿಗಾಗಿ ಕೇನ್ಯ ಶಾಲೆಯ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ವಿಮಲ ರೈ ಕೇನ್ಯ ಹೊಸಮನೆ ಧನಸಹಾಯ ನೀಡಿದರು. 1ನೇ ತರಗತಿಗೆ 5 ಮಕ್ಕಳು ದಾಖಲಾಗಿದ್ದಾರೆ,3 ಮತ್ತು 4ನೇ ತರಗತಿಗೆ ತಲಾ ಒಂದರಂತೆ ಮಕ್ಕಳು ದಾಖಲಾಗಿದ್ದಾರೆ. ಕಾರ್ಯಕ್ರಮವನ್ನು ಕು|ರೇವತಿ ನಿರೂಪಿಸಿದರು. ಅಂಕಿತಾ ಸ್ವಾಗತಿಸಿ,ತುಲಶ್ರೀ ಧನ್ಯವಾದಗೈದರು. ಈ ವರ್ಷ ನಮ್ಮೂರ ಸರಕಾರಿ ಶಾಲೆ ಉಳಿಸಿ ಅಭಿಯಾನದಂತೆ ದುರ್ಗಾ ಸೇವಾ ಸಂಘ ಕೇನ್ಯ ಇದರ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಸಮವಸ್ತ್ರ, ಕೊಡೆ ಇತ್ಯಾದಿಗಳನ್ನು ದಾನಿಗಳ ಸಹಾಯದಿಂದ ನೀಡುವುದಾಗಿ ಸಂಘದ ಕಾರ್ಯದರ್ಶಿ ಶ್ರೀ ದೇವಿಪ್ರಸಾದ್ ರೈ ಗೆಜ್ಜೆ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!