Ad Widget

ನಾಲ್ಗುತ್ತು-ಕಳಂಜ ಕಾಲುದಾರಿ ದುರಸ್ತಿ

ಕಳಂಜ ಗ್ರಾಮಪಂಚಾಯಿತಿಗೆ ಒಳಪಟ್ಟ ನಾಲ್ಗುತ್ತು -ಕಳಂಜ ಕಾಲುದಾರಿಯು ಸಾರ್ವಜನಿಕ ಸಂಚಾರಕ್ಕೆ ಕೆಲವು ವರ್ಷಗಳಿಂದ ತೊಂದರೆಯಾಗುತ್ತಿದ್ದು ಚರಂಡಿ ನೀರು ಕಾಲು ದಾರಿಯ ಮೂಲಕವೇ ಹರಿಯುತ್ತಿದೆ.

ತೋಟದ ಮಧ್ಯೆ ಇರುವ ಕಾಲುದಾರಿಯು ಜರಿದು ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ನಾಳೆಯಿಂದ ಶಾಲಾ ಆರಂಭೋತ್ಸವ ಆಗಿರುವುದರಿಂದ ಇದನ್ನು ಮನಗಂಡ ಊರವರಾದ ಕುಶಾಲಪ್ಪ ನಾಲ್ಗುತ್ತು ,ಮೋಹನ ತಂಟೆಪ್ಪಾಡಿ ,ಲೋಕೇಶ್ ತಂಟೆಪ್ಪಾಡಿ ,ಉಮೇಶ್ ಶೆಟ್ಟಿ ಕಳಂಜ ,ಶೋಭಾ ನಾಲ್ಗುತ್ತು ,ಪುಷ್ಪಾವತಿ ನಾಲ್ಗುತ್ತು ,ಗುಲಾಬಿ ಪಟ್ಟೆ ,ಪ್ರಿಯ ತಂಟೆಪ್ಪಾಡಿ ರವರು ಶ್ರಮದಾನದ ಮೂಲಕ ಕಾಲು ದಾರಿಯ ಬದಿ ಚರಂಡಿ ರಚಿಸಿ ದಾರಿಯ ಬದಿ ಇರುವ ಗಿಡಗಳನ್ನು ಕತ್ತರಿಸಿ ಕಾಲುದಾರಿ ದುರಸ್ತಿಗೊಳಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!