Ad Widget

ಐವರ್ನಾಡು : ಅಶ್ವಿನ್ ರೆಡಿಮೆಡ್ಸ್ ಮತ್ತು ಫ್ಯಾನ್ಸಿ ಮಳಿಗೆ ಶುಭಾರಂಭ

ಐವರ್ನಾಡಿನ ಡಿವಿಜಿ ಕಾಂಪ್ಲೆಕ್ಸ್ ನಲ್ಲಿ ಅಶ್ವಿನ್ ರೆಡಿಮೆಡ್ಸ್ ಮತ್ತು ಫ್ಯಾನ್ಸಿ ಮಳಿಗೆಯು ಡಿ.23ರಂದು ಐವರ್ನಾಡಿನಲ್ಲಿ ಶುಭಾರಂಭಗೊಂಡಿತು.ಪರೋಹಿತ ವಿಶ್ವೇಶ್ವರಯ್ಯ ಬಾಳಿಲ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ| ಬಾಲಸುಬ್ರಹ್ಮಣ್ಯ ಭಟ್, ಧರ್ಮಪಾಲ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ನಮ್ಮಲ್ಲಿ ರೆಡಿಮೆಡ್ಸ್ ಬಟ್ಟೆಗಳು,ಫ್ಯಾನ್ಸಿ ಐಟಂಗಳು ಮಕ್ಕಳ ಆಟಿಕೆಗಳು,ಮಕ್ಕಳ ಪುಸ್ತಕಗಳು ಹಾಗೂ ಇನ್ನಿತರ ವಸ್ತುಗಳು ದೊರೆಯುತ್ತದೆ ಎಂದು ಮಾಲಕರಾದ ಶ್ವೇತಾ...

ವಿವಾಹ ಮುಂದೂಡಲಾಗಿದೆ: ಪ್ರವೀಣ ಪಿಲಿಕಜೆ-ಚೈತ್ರ ಬೊಳ್ಳಾಜೆ

ಡಿ.26ರಂದು ನಡೆಯಬೇಕಿದ್ದ ಅಮರಮುಡ್ನೂರು ಗ್ರಾಮದ ಪಿಲಿಕಜೆ ಶ್ರೀ ಸೀತಾರಾಮ ಗೌಡರ ಪುತ್ರ ಪ್ರವೀಣ ಪಿಲಿಕಜೆ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ(ಮಡ್ತಿಲ) ಶ್ರೀ ಗಣೇಶರವರ ಪುತ್ರಿ ಚೈತ್ರ ಬೊಳ್ಳಾಜೆ ರವರ ವಿವಾಹವು ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದು, ಜ.20 ಗುರುವಾರದಂದು ಪೂರ್ವಾಹ್ನ ಗಂಟೆ 10.22ರ ಮೀನಾ ಲಗ್ನದ ಶುಭಮುಹೂರ್ತದಲ್ಲಿ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಲಿದೆ.
Ad Widget

ಶರತ್ ಮೆತ್ತಡ್ಕ ಮತ್ತು ಹರ್ಷಿತಾ ಕಾನಡ್ಕ ವಿವಾಹ ಮುಂದೂಡಲಾಗಿದೆ

ದಿನಾಂಕ : 26-12-2021ರಂದು ನಡೆಯಬೇಕಾಗಿದ್ದ ದೇವಚಳ್ಳಗ್ರಾಮದ ಮೆತ್ತಡ್ಕ ಶ್ರೀಮತಿ ಪದ್ಮಾವತಿ ಮತ್ತು ಹೊನ್ನಪ್ಪ ಗೌಡರ ಪುತ್ರ ಶರತ್ ಮತ್ತು ಅಮರಮುಡ್ನೂರು ಗ್ರಾಮದ ಕಾನಡ್ಕ ಶ್ರೀಮತಿ ಪುಷ್ಪವೇಣಿ ಮತ್ತು ಯಶವಂತ ಗೌಡರ ಪುತ್ರ ಹರ್ಷಿತಾರವರ ವಿವಾಹ ಕಾರ್ಯಕ್ರಮ ವು ಕಾರಣಾಂತರಗಳಿಂದ ಮುಂದೂಡಲಾಗಿದೆ. ಇವರ ವಿವಾಹ ಕಾರ್ಯಕ್ರಮವು ಇದೇ ಬರುವ ದಿನಾಂಕ 23-01-2022ರಂದು ವಿಷ್ಣು ಕಲಾ ಮಂದಿರ ಮಾವಿನಕಟ್ಟೆಯಲ್ಲಿ...

ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಭಜನಾ ತಂಡಕ್ಕೆ ಸಮವಸ್ತ್ರ ಕೊಡುಗೆ

ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಭಜನಾ ತಂಡವು ಅನೇಕ ಕಡೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ಕೊಡುಗೈ ದಾನಿ ಶ್ರೀಮತಿ ಹರಿಣಾಕ್ಷಿ ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ್ ಅವರು ಭಜನಾ ತಂಡದ ಹುಡುಗಿಯರಿಗೆ ಸಮವಸ್ತ್ರ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಸುಬ್ಬಯ್ಯ ವೈ ಬಿ ಇಬ್ಬರಿಗೂ...

ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ ಸಂಘದ ವಾರ್ಷಿಕ ಮಹಾಸಭೆ- ಶೇ.6% ಡಿವಿಡೆಂಡ್ ವಿತರಣೆ.

ಸುಬ್ರಹ್ಮಣ್ಯ - ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.19 ರ ಆದಿತ್ಯವಾರದಂದು ಬೆಳಿಗ್ಗೆ 10:00 ಗಂಟೆಗೆ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು ಇವರ ಅಧ್ಯಕ್ಷತೆಯಲ್ಲಿ ಎಸ್.ಎಸ್.ಪಿ.ಯು ಕಾಲೇಜಿನ ಬೆಳಿಹಬ್ಬ ಸಭಾಭವನದಲ್ಲಿ ನಡೆಯಿತು.ಸಂಘವು 2020-21 ನೇ ಸಾಲಿನಲ್ಲಿ 20,06,389 ರೂಪಾಯಿ ಲಾಭಾಂಶ ದಾಖಲಿಸಿದ್ದು, ಸಂಘದ ಸದಸ್ಯರಿಗೆ ಶೇ.6%...

ಯುವ ರೆಡ್ ಕ್ರಾಸ್ ಘಟಕದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ. ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಚ್ಚುತ ಪೂಜಾರಿ, ಜೆಸಿಐ ಇಂಡಿಯಾದ ವಲಯ...

ಎನ್ನೆಂಸಿ: ವಾಣಿಜ್ಯ ಶಾಸ್ತ್ರ ಸಂಘದಿಂದ ತರಬೇತಿ ಕಾರ್ಯಾಗಾರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಶಾಸ್ತ್ರ ಸಂಘದಿಂದ "Maths Shortcut tricks and tips" ಎಂಬ ವಿಷಯದ ಕುರಿತ ತರಬೇತಿ ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆ ಪುತ್ತೂರು ಇದರ ಸಹ ಸಂಸ್ಥಾಪಕಿ ಹಾಗೂ ಅಕಾಡೆಮಿಕ್ ಕೌನ್ಸೆಲರ್ ಆದ ಶ್ರೀಮತಿ ಪ್ರಫುಲ್ಲಾ ಗಣೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾಲೇಜಿನ...

ನಡುಗಲ್ಲು : ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಡಿ.18 ರ ಶನಿವಾರದಂದು ಮೆಟ್ರಿಕ್ ಮೇಳ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಉಮೇಶ್ವರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ವಿವಿಧ ಬಗೆಯ ತರಕಾರಿ, ಹಣ್ಣು ಹಾಗೂ ಮನೆಯಲ್ಲಿ ತಯಾರಿಸಿದ ತಿಂಡಿ ಮುಂತಾದವುಗಳನ್ನು ತಂದು ಮಾರಾಟ ಮಾಡಿದರು.ಸಾರ್ವಜನಿಕರು ಹಾಗೂ ಪೋಷಕರು ವಿದ್ಯಾರ್ಥಿಗಳಿಂದ ತರಕಾರಿ, ಹಣ್ಣು, ತಿಂಡಿ ಮುಂತಾದವುಗಳನ್ನು...

ಬಾಳಿಲ ಮುಪ್ಪೇರಿಯ: ಶ್ರೀ ಮಹಾವಿಷ್ಣು ಸಿಂಗಾರಿ ಮೇಳದ ವತಿಯಿಂದ ಭಜನಾ ತರಬೇತಿ ಕಾರ್ಯಕ್ರಮ

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರಿಯ ಇದರ ವಾರ್ಷಿಕೋತ್ಸವದ ಪ್ರಯುಕ್ತ ಭಜನೆ ತರಬೇತಿಯು ಇಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆ ತನಕ ಜರುಗಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಾಧವ ಪಂಜ ಮತ್ತು ಶ್ರೀಮತಿ ಸುಮಾ ಆಚಾರ್ ಭಜನೆ ಹೇಳಿಕೊಟ್ಟರು. ಇವರನ್ನು ಶ್ರೀ ರಾಧಾಕೃಷ್ಣ ರಾವ್ ಉಡುವೆಕೋಡಿ ಗೌರವಿಸಿ, ಅವರ ಬಗ್ಗೆ ಶ್ಲಾಘನೀಯ...

ಮುರುಳ್ಯ- ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ- ಸಂಘಕ್ಕೆ ನಿವ್ವಳ ಲಾಭ ರೂ.52,10,897.61/-, ಸದಸ್ಯರಿಗೆ 6% ಡಿವಿಡೆಂಡ್

ಮುರುಳ್ಯ- ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ನಿ.) ಅಲೆಕ್ಕಾಡಿ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯ ಡಿ.19 ಆದಿತ್ಯವಾರದಂದು ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ, ಅಲೆಕ್ಕಾಡಿಯಲ್ಲಿ ಸಂಘದ ಅಧ್ಯಕ್ಷರಾದ ವಸಂತ ಹೆಚ್ ಹುದೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿರಿಯ ಕೃಷಿಕರಾದ ಗಿರಿಯಪ್ಪ ಗೌಡ ದೀಪ ಬೆಳಗಿಸಿ ಮಹಾಸಭೆಯನ್ನು ಉದ್ಘಾಟಿಸಿದರು. ಸಂಘದ ಮುಖ್ಯ...
Loading posts...

All posts loaded

No more posts

error: Content is protected !!