Ad Widget

ಐನೆಕಿದು : ನಿಸರ್ಗ ಯುವಕ ಮಂಡಲದ ರಂಗಮಂದಿರ ನಿರ್ಮಾಣದ ಬಗ್ಗೆ ಪೂರ್ವಭಾವಿ ಸಭೆ

ಐನೆಕಿದು ನಿಸರ್ಗ ಯುವಕ ಮಂಡಲದ ರಂಗಮಂದಿರ ನಿಸರ್ಗ ವೇದಿಕೆಯ ನಿರ್ಮಾಣದ ಬಗ್ಗೆ ಐನೆಕಿದು ಶಾಲಾ ವಠಾರದಲ್ಲಿ ಸೆ.26 ರಂದು ನಿಸರ್ಗ ಯುವಕ ಮಂಡಲದ ಅಧ್ಯಕ್ಷರಾದ ಲಕ್ಷ್ಮೀಶ ಇಜ್ಜಿನಡ್ಕ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ರಂಗಮಂದಿರ ನಿರ್ಮಾಣ ಸಮಿತಿಯನ್ನು ರಚಿಸಲಾಯಿತು. ರಂಗಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಗಿರೀಶ್ ಪೈಲಾಜೆ, ಉಪಾಧ್ಯಕ್ಷರಾಗಿ ಕಿರಣ್ ಪೈಲಾಜೆ, ಕಾರ್ಯದರ್ಶಿಯಾಗಿ ಅಜಿತ್ ಕಲ್ಲೇರಿ, ಕೋಶಾಧಿಕಾರಿಯಾಗಿ ಯಶವಂತ ಕೊಪ್ಪಳಗದ್ದೆ, ಸಂಚಾಲಕರಾಗಿ ಕಿಶೋರ್ ಕುಮಾರ್ ಕೂಜುಗೋಡು ಮತ್ತು ಯತೀಂದ್ರ ಬಿ.ಆರ್ ಹಾಗೂ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಅವರನ್ನು ಗೌರವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅದೇ ರೀತಿ ರಂಗಮಂದಿರ ನಿರ್ಮಾಣ ಸಮಿತಿಯ ಸದಸ್ಯರಾಗಿ ಮನೀಶ್ ಕುಜುಂಬಾರು, ರಿತೇಶ್ ಕುಜುಂಬಾರು, ನವೀನ್ ಕಟ್ರಮನೆ, ಅಶೋಕ್ ಐಪಿನಡ್ಕ, ಸುಹಾಸ್ ಕೋಟೆಬೈಲು, ಭರತ್ ಆಚಾರಿಗದ್ದೆ, ರಮೇಶ್ ಕೋನಡ್ಕ, ಶಶಿಧರ್ ಕತ್ತಿಮಜಲು, ಭುಕ್ಷಿತ್ ನೀರ್ಪಾಡಿ, ನವೀನ್ ಕೆದಿಲ ಹಾಗೂ ಕಿಶೋರ್ ವಾಡ್ಯಪ್ಪನಮನೆ ಆಯ್ಕೆಯಾದರು.

(ವರದಿ :- ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!