Ad Widget

ಎನ್ ಎಸ್ ಯು ಐ ನ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಪಿ ಯು ಉಬೈಸ್ ಗೂನಡ್ಕ ನೇಮಕ

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ಸುಳ್ಯ ವಿಧಾನಸಭಾ ಕ್ಷೇತ್ರದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯಾಗಿ ಸಂಪಾಜೆ ಗ್ರಾಮದ ಗೂನಡ್ಕದ
ಪಿ. ಯು. ಉಬೈಸ್ ಗೂನಡ್ಕ ರವರು ನೇಮಕಗೊಂಡಿದ್ದಾರೆ. ಇವರನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಮತ್ತು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಅಬುಸಾಲಿ ಗೂನಡ್ಕ ರವರ ಶಿಫಾರಸಿನ ಮೇರೆಗೆ ಎನ್ ಎಸ್ ಯು ಐ ತಾಲೂಕು ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ನೇಮಕಗೊಳಿಸಿದ್ದಾರೆ. ಇವರು ಗೂನಡ್ಕದ ಹಿರಿಯ ಸಾಮಾಜಿಕ ಧುರೀಣ, ಪಾಪ್ಯುಲರ್ ಎಜುಕೇಷನ್ ಸೊಸೈಟಿ ಅರಂತೋಡು ಇದರ ಸ್ಥಾಪಕ ನಿರ್ದೇಶಕ, ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ಸ್ಥಾಪಕಾಧ್ಯಕ್ಷ, ಸುಳ್ಯ ಎ ಪಿ ಎಂ ಸಿ ಯ ಮಾಜಿ ಉಪಾಧ್ಯಕ್ಷ, ದ ಕ ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ, ಭೂ ನ್ಯಾಯ ಮಂಡಳಿಯ ಮಾಜಿವಸದಸ್ಯ, ಕೆ ಡಿ ಪಿ ಮಾಜಿ ಸದಸ್ಯ, ಸಂಪಾಜೆ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ, ಸಂಪಾಜೆ ಸಹಕಾರಿ ಸಂಘದ ಮಾಜಿ ನಿರ್ದೇಶಕ ಪ್ರತಿಷ್ಠಿತ ಪೊವ್ವಲ್ ಕುಟುಂಬದ ಪಿ ಎ ಉಮ್ಮರ್ ಹಾಜಿ ಗೂನಡ್ಕ ಮತ್ತು ರುಕಿಯ ದಂಪತಿಗಳ ಸುಪುತ್ರ ಪಿ ಯು ಉಬೈಸ್ ಗೂನಡ್ಕ ರವರು ಆಯ್ಕೆಯಾದರು. ಇವರು ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗೂನಡ್ಕ ಇದರ ಹಿರಿಯ ವಿದ್ಯಾರ್ಥಿಯಾಗಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!