Ad Widget

ಮಡಪ್ಪಾಡಿ : ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ

ಮಡಪ್ಪಾಡಿ ಗ್ರಾಮದ ಬಿಜೆಪಿ ಬೂತ್ ಸಂಖ್ಯೆ 226 ಹಾಗೂ 227 ರ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ ಕಾರ್ಯಕ್ರಮ ಕೇವಳ ದೇವಸ್ಥಾನದ ಅವರಣದಲ್ಲಿ ನಡೆಸಲಾಯಿತು. ಪಕ್ಷದ ಹಿರಿಯರಾದ ಲೋಕಪ್ಪ ಶೀರಡ್ಕ ಇವರು ದೀನ್ ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಗುತ್ತಿಗಾರು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ವಿನಯ್ ಕುಮಾರ್ ಮುಳುಗಾಡು ರವರು ದೀನ್ ದಯಾಳ್ ಉಪಾಧ್ಯಾಯರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮೋರ್ಚಾದ ಸದಸ್ಯರಾದ ಶಕುಂತಳಾ ಕೇವಳ, ಕಿರಣ್ ಶೀರಡ್ಕ, ರಂಜಿತ್ ಬೊಮ್ಮೆಟ್ಟಿ, ಸುಮಂತ್ ಶೀರಡ್ಕ, ಹೇಮಕುಮಾರ್ ಹಾಡಿಕಲ್ಲು. ವಿನ್ಯಾಸ್ ಪಾರೆಮಜಲು, ಪುನೀತ್ ಪಾರೆಮಜಲು, ಕರುಣಾಕರ ಪಾರೆಪ್ಪಾಡಿ, ಕುಶನ್ ಅಂಬೆಕಲ್ಲು, ರವೀಶ ಕೇವಳ,ಕಿಶನ್ ಕೇವಳ, ಹೂವಪ್ಪ ಕೇವಳ ಮತ್ತಿತರರು ಉಪಸ್ಥಿತರಿದ್ದರು. ಕಿಶನ್ ಕೇವಳ ಮತ್ತು ಮನೆಯವರು ಸಿಹಿ ತಿಂಡಿ ವಿತರಿಸಿದರು. ಬೂತ್ ಸಮಿತಿ ಅಧ್ಯಕ್ಷ ಧನ್ಯ ಕುಮಾರ್ ಸ್ವಾಗತಿಸಿ, ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!