Ad Widget

ಹರಿಹರ ಪಲ್ಲತ್ತಡ್ಕ : ಶ್ರೀ ಹರಿಹರೇಶ್ವರ ದೇವರ ಭಕ್ತಿಗೀತೆ ಬಿಡುಗಡೆ

ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವರ ಭಕ್ತಿಗೀತೆಯನ್ನು ಸೆ.10 ರ ಗಣೇಶ ಚತುರ್ಥಿ ಹಬ್ಬದ ದಿನದಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.


ಈ ಸಂದರ್ಭದಲ್ಲಿ ಜಯಂತ್ ನಾಯ್ಕ್ ಎಲ್ಲಪಡ್ಕ, ಗಿರೀಶ್ ಕಾಂತುಕುಮೇರಿ, ಸಂತೋಷ್ ನಾಯ್ಕ್ ಗಡಿಕಲ್ಲು, ಶ್ರೀಕಾಂತ್ ಪಂಜ, ಗಣೇಶ್ ಮಂಚಿಕಟ್ಟೆ, ರಾಮಣ್ಣ ಮಂಚಿಕಟ್ಟೆ, ದಯಾನಂದ ಏನೆಕಲ್ಲು, ಜಯಕುಮಾರ್ ಕಲ್ಲೇರಿಕಟ್ಟ, ಮೋಹನ್ ದಾಸ್ ಕಲ್ಲೇರಿಕಟ್ಟ, ನೇಮಿಚಂದ್ರ ದೋಣಿಪಳ್ಳ, ಹವೀನ್ ಕುಕ್ಕುಂದ್ರಡ್ಕ, ವಿನೀತ್ ಚೀಮುಳ್ಳು, ಸುಮಿತ್ರಾ ನಾಯ್ಕ್ ಗಡಿಕಲ್ಲು, ಶ್ರವಣ್ ಪಂಜ, ನವೀನ್ ಹರಿಹರ, ಹೇಮಂತ್ ಎಲ್ಲಪಡ್ಕ, ಗೋಪಾಲ ಗೋರ್ತಿಲ ಹಾಗೂ ದೇವಸ್ಥಾನದ ಅರ್ಚಕರು ಮತ್ತು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಈ ಭಕ್ತಿಗೀತೆಯ ಕ್ಷೇತ್ರದ ಮೂಲ ಹಿನ್ನೆಲೆ ಹಾಗೂ ಮಾರ್ಗದರ್ಶನವನ್ನು ದೇವಸ್ಥಾನದ ಸಹಾಯಕ ಅರ್ಚಕರಾದ ಶ್ರೀ ಬಿ.ಕೃಷ್ಣಕುಮಾರ್ ಬರೆದಿದ್ದಾರೆ. ಹಾಡಿನ ಸಾಹಿತ್ಯವನ್ನು ಪಂಚವರ್ಣ ಖ್ಯಾತಿಯ ರಕ್ಷಿತ್ ಮಂಚಿಕಟ್ಟೆ ಬರೆದಿದ್ದು ಪವಿತ್ರ ಮಯ್ಯಾ ಹಾಡಿದ್ದಾರೆ. ಮಿಥುನ್ ರಾಜ್ ವಿದ್ಯಾಪುರ ಸಂಗೀತ ನಿರ್ದೇಶನ ಮಾಡಿದ್ದು, ಅಶ್ವಿನ್ ಪುತ್ತೂರು ಪ್ರೋಗ್ರಾಮಿಂಗ್ ಮಾಡಿದ್ದಾರೆ. ದ್ವನಿ ಮುದ್ರಣವನ್ನು ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಕಡಬ ಮಾಡಿದ್ದು, ದಯಾನಂದ ಬೇರ್ಯ ಛಾಯಾಗ್ರಹಣ ಮಾಡಿದ್ದಾರೆ.

(ವರದಿ :- ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!