Ad Widget

ಅರಂತೋಡು : ರಾಜ್ಯ ಹೆದ್ದಾರಿಯಲ್ಲಿ ಅಪಾಯ ಆಹ್ವಾನಿಸುತ್ತಿರುವ ಗುಂಡಿ

ಅರಂತೋಡು ತೆಕ್ಕಿಲ್
ಹೆಚ್.ಪಿ.ಗ್ಯಾಸ್‌ ಗೋಡಾನ್ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ತಾದ ಗುಂಡಿ ಸೃಷ್ಟಿಯಾಗಿದ್ದು ವಾಹನ ಸವಾರ ರು ಚಾಲನೆ ಮಾಡುವಾಗ ಜಾಗೃತೆ ವಹಿಸದೇ ಹೋದರೆ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಇದೀಗ ಆ ಗುಂಡಿಗೆ ಬಾಳೆಗಿಡ ನೆಟ್ಟು ಸಾರ್ವಜನಿಕರು ಪ್ರತಿಭಟಿಸಿದ್ದು ಇನ್ನಾದರೂ ಇಲಾಖೆಯವರು ಎಚ್ಚೆತ್ತುಗೊಳ್ಳಬಹುದೇ?. ಕಳೆದ ವರ್ಷ ಇದೇ ತರದ ಗುಂಡಿ ನಿರ್ಮಾಣ ವಾಗಿ ಅಧಿಕಾರಿಗಳು ಮೌನ ವಹಿಸಿದ್ದರಿಂದ ಅದರ ಸರಿಪಡಿಸದೇ ಇರುವುದರಿಂದ ಈ ಬಾರಿ ಬಾಳೆಗಿಡ ನೆಟ್ಟು ಅಪಘಾತವಾಗುವುದನ್ನು ತಪ್ಪಿಸಲು ಹಾಗೂ ಇಲಾಖೆ ಗಮನ ಹರಿಸಲು ಪಯತ್ನಿಸಿದ್ದಾರೆ. ಅಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ನೀರು ರಸ್ತೆಯೇ ಬರುವುದರಿಂದ ಮುಖಾಮುಖಿಯಾಗಿ ವಾಹನಗಳು ಬರುವಾಗ ನೀರಿ ಸಿಂಚನ ತಪ್ಪಿದಲ್ಲಾ. ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದೇ ಈ ತರ ನೀರು ರಸ್ತೆಯಲ್ಲಿ ಹಾಳಾಗುತ್ತಿರುವ ಬಗ್ಗೆ ಪಂಚಾಯತ್ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!