Ad Widget

ಗಾಂಧಿನಗರ : ಶಿವಶಕ್ತಿ ಆಯಿಲ್ ಮಿಲ್ ಸಹಸಂಸ್ಥೆ ಶಿವಶಕ್ತಿ ಫ್ಲೋರ್ ಮಿಲ್ ಶುಭಾರಂಭ

ಸುಳ್ಯದ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ನಲ್ಲಿ ಕಳೆದ 12 ವರ್ಷಗಳಿಂದ ಕಾರ್ಯಚರಿಸುತ್ತಿಸುತ್ತಿರುವ ಶಿವಶಕ್ತಿ ಆಯಿಲ್ ತನ್ನ ಗ್ರಾಹಕರಿಗೆ ಹೆಚ್ಚು ಸೇವೆ ನೀಡುವ ಉದ್ದೇಶದಿಂದ ಶಿವಶಕ್ತಿ ಫ್ಲೋರ್ ಮಿಲ್ ಸೆ.11 ರಂದು ಶುಭಾರಂಭಗೊಂಡಿತು. ಇಲ್ಲಿ ಅಕ್ಕಿ, ಗೋಧಿ, ರಾಗಿ ಹಾಗೂ ಧವಸಧಾನ್ಯಗಳನ್ನು ಕ್ಲಪ್ತ ಸಮಯದಲ್ಲಿ ಹುಡಿಮಾಡಿಕೊಡಲಾಗುವುದು ಎಂದು ಮಾಲಕರಾದ ಶಿವರಾಮ ಬಳ್ಳಡ್ಕ ತಿಳಿಸಿದ್ದಾರೆ.

ಶಾಂತಿನಗರ ಶಾಲಾ ಎಸ್.ಡಿ.ಎಂ.ಸಿ ರಚನೆ – ಅಧ್ಯಕ್ಷರಾಗಿ ಮಹಮ್ಮದ್ ನಝೀರ್

ಶಾಂತಿನಗರ ಸ.ಉ.ಹಿ.ಪ್ರಾ. ಶಾಲೆಯಲ್ಲಿ ನೂತನ ಎಸ್.ಡಿ.ಎಂ.ಸಿ ರಚನೆ ಸೆ.3 ರಂದು ಮಾಡಲಾಯಿತು. ಅಧ್ಯಕ್ಷರಾಗಿ ಮಹಮ್ಮದ್ ನಝೀರ್ , ಉಪಾಧ್ಯಕ್ಷರಾಗಿ ಶ್ರೀಮತಿ ಗೋಪಿ, ಸದಸ್ಯರಾಗಿ ಜಗದೀಶ್ ಪಿ ಆರ್, ಬಾಲಕೃಷ್ಣ ಎಸ್.ಆರ್, ಶಶಿಕಲಾ.ಎ, ಗೀತಾ, ಲತಾ.ಎ, ಪುಟ್ಟಣ್ಣ ನಾಯ್ಕ, ಇಬ್ರಾಹಿಂ.ಎಸ್.ಎ, ಹಮೀದ್, ಸಾಜಿದ, ಮುಮ್ತಾಜ್, ಜುಲೈಕಾ, ಮರಿಯಮ್ಮ, ಸೀತಾ, ಚಿಕ್ಕಯ್ಯ, ಪುಷ್ಪಲತ, ದಿವ್ಯ.ಎಂ ಇವರುಗಳು ಆಯ್ಕೆಯಾದರು
Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ – ನವಾನ್ನ ಪ್ರಸಾದ

ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸೋಮವಾರ ಹೊಸ್ತಾರೋಗಣೆ (ನವಾನ್ನ ಪ್ರಸಾದ) ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿದಿ ವಿಧಾನಗಳೊಂದಿಗೆ ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಪಂಚಾಮೃಮಹಾಭಿಷೇಕವನ್ನು ಶ್ರೀ ದೇವರ ಮೂಲ ವಿಗ್ರಹಕ್ಕೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು. ವರ್ಷದಲ್ಲಿ ಹೊಸ್ತಾರೋಗಣೆಯ ಒಂದು ದಿನ...
error: Content is protected !!