Ad Widget

ಶುಭಶ್ರೀ ಮಹಿಳಾ ಮಂಡಲದಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕಿಯರಿಗೆ ಸನ್ಮಾನ

ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಕನ್ನಡ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಎಂ. ಮೀನಾಕ್ಷಿ ಗೌಡ ಅವರು ಉದ್ಘಾಟಿಸಿದರು. ಕಾಂತಮಂಗಲ ಕಿರಿಯ ಪಾಥಮಿಕ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ಶಿಕ್ಷಕಿ ವಿಜಯಲಕ್ಷ್ಮೀ. ಎಸ್ ರವರನ್ನು “ಉತ್ತಮ ಶಿಕ್ಷಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಬಳಿಕ ಶುಭಶ್ರೀ ಮಹಿಳಾ ಮಂಡಲದ ಮಹಾಸಭೆಯು ನಡೆಯಿತು. ಈ ಸಂದರ್ಭದಲ್ಲಿ ಸರಕಾರಿ ಪ್ರೌಢ ಶಾಲಾ ಶಿಕ್ಷಕಿ ವಿಜಯಲಕ್ಷ್ಮಿಯವರಿಗೆ ಉತ್ತಮ ಶಿಕ್ಷಕಿ ಗೌರವ ಸಲ್ಲಿಸಲಾಯಿತು. ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಸುನಂದಾ ಕೇನಾಜೆಯವರನ್ನು ಗೌರವಿಸಲಾಯಿತು.

ಈ ಸಂದರ್ಭ ಸುಳ್ಯ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಇಂದಿರಾ ಆರ್.ರೈ, ಉಪಾಧ್ಯಕ್ಷೆ ಕವಿತಾ ಸಿ.ರೈ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಶಶಿಕಲಾ ಸ್ವಾಗತಿಸಿ, ಗಿರಿಜಾ.ಎಂ.ವಿ ಯವರು ವಂದಿಸಿದರು. ಆಶಾ ಅವರು ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!