Ad Widget

ಗೆಲುವು

ಮನಸಿನ ನೋವಿಗೆ ಕನ್ನಡಿಯೇತಕೆ, ನೋಡಲು ತಿಳಿಯುವುದು…
ಕಾಣುವ ಕನಸಿಗೆ ಮುನ್ನುಡಿಯೇತಕೆ, ಕಣ್ಣಿಗೆ ಕಾಣುವುದು…
ನೋವನು ಸಹಿಸಿದ ಮನಸ್ಸಿಗೆ ತಾನೇ ಛಲವು ಹುಟ್ಟುವುದು,
ಕಂಡ ಕನಸನು ನನಸು ಮಾಡುವ ಛಲವು ಹುಟ್ಟುವುದು…

ಎಲ್ಲವು ತಿಳಿದಿದೆ ಎನ್ನುವ ಸ್ವಾರ್ಥವು ನಿನ್ನನೇ ಕೊಲ್ಲುವುದು…
ಶಾಂತವಾಗಿ ಸಾಧಿಸೋ ವ್ಯಕ್ತಿಯೇ ಬದುಕಲಿ ಗೆಲ್ಲುವುದು…
ಮನಸಲಿ ನೋವು ಇದ್ದರೆ ಮಾತ್ರ ಛಲವು ಹುಟ್ಟುವುದು,
ನಿನಗೆ ಸಾಧಿಸೋ ಛಲವು ಹುಟ್ಟುವುದು…

ಸಾಧಿಸ ಹೊರಡುವ ವ್ಯಕ್ತಿಗೆ ಅವಮಾನ ಎಂದಿಗೂ ತಪ್ಪದು…
ಅವಮಾನಕ್ಕೆ ಹೆದರಿ ಕುಳಿತರೆ ನಿನಗೆ ಗೆಲ್ಲಲು ಆಗದು…
ಗೆದ್ದ ಮೇಲೆ ಸಿಗುವ ಸನ್ಮಾನ ಅವಮಾನವ ಮರೆಸುವುದು,
ಎಲ್ಲಾ ಅವಮಾನವ ಮರೆಸುವುದು…

ಮನಸಿನ ನೋವಿಗೆ ಕನ್ನಡಿಯೇತಕೆ, ನೋಡಲು ತಿಳಿಯುವುದು…
ಕಾಣುವ ಕನಸಿಗೆ ಮುನ್ನುಡಿಯೇತಕೆ, ಕಣ್ಣಿಗೆ ಕಾಣುವುದು…
ಗೆಲ್ಲುವ ಮೊದಲೇ ಸೋಲಿನ ನಿರ್ಧಾರ ಎಂದಿಗೂ ಕೂಡದು…
ಸದ್ದಿಲ್ಲದೆ ಸಾಧಿಸೋ ವ್ಯಕ್ತಿಯೇ ಬದುಕಲಿ ಗೆಲ್ಲುವುದು…

✍ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!