Ad Widget

ಕಲ್ಮಡ್ಕ : ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ – ಆರೋಗ್ಯ ಕೇಂದ್ರದ ಆವರಣ ಸ್ವಚ್ಛತೆ

ಯುವಸ್ಫೂರ್ತಿ ಸೇವಾ ಸಂಘ ಕಲ್ಮಡ್ಕ ಕಳೆದ ಐದು ವರುಷಗಳಿಂದ ನಿರಂತರವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಈ ಬಾರಿ ಕೂಡ ಸರಕಾರದ ನಿಯಮದನುಸಾರ ಸೆ.5 ರಂದು 6ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೇವಿಪ್ರಸಾದ್ ಮರಕ್ಕಡ ನೆರವೇರಿಸಿದರು. ಯಮುನಾ ಓಟೆಕಜೆ ಸಾಂಕೇತಿಕವಾಗಿ ತೆಂಗಿನ ಗಿಡ ನೆಡುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಿಪ್ರಸಾದ್ ಮರಕ್ಕಡ ವಹಿಸಿದ್ದರು. ಅತಿಥಿಗಳಾಗಿ ಸಂಘದ ಸ್ಥಾಪಕಾಧ್ಯಕ್ಷ ಶೇಷಪ್ಪ ಮಾಳಪ್ಪಮಕ್ಕಿ, ಆಶಾಕಾರ್ಯಕರ್ತೆ ಯಮುನಾ ಓಟೆಕಜೆ, ಗ್ರಾ.ಪಂ.ಸದಸ್ಯ ಹರೀಶ್ ಮಾಳಪ್ಪಮಕ್ಕಿ, ಸಂಘದ ಪೂರ್ವಾಧ್ಯಕ್ಷ ಅಶೋಕ್ ಗೋಳ್ತಾಜೆ, ಸಂಘದ ಉಪಾಧ್ಯಕ್ಷ ಪವನ್ ಮೂಲೆಮನೆ, ಜತೆ ಕಾರ್ಯದರ್ಶಿ ಜಯಂತ್ ಕಡಂಬುಕಾನ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕಲ್ಮಡ್ಕದ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ 6ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಆಚರಿಸಿದರು. ಜಯರಾಜ್ ಕಡಂಬುಕಾನ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!