Ad Widget

ಕೃಷ್ಣ ಮಣಿಯಾಣಿ ಮಾವಿನಕಟ್ಟೆ ನಿಧನ

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಕೃಷ್ಣ ಮಣಿಯಾಣಿ ಯವರು ಇಂದು ನಿಧನರಾದರು. ಅವರಿಗೆ ಸುಮಾರು 83 ವಯಸ್ಸಾಗಿತ್ತು.ಕೆಲ ದಿನದ ಹಿಂದೆ ಅಸೌಖ್ಯಕ್ಕೊಳಗಾಗಿ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಪತ್ನಿ ಜಾನಕಿ, ಪುತ್ರಿಯರಾದ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಯಶೋದಾ ಬಾಳೆಗುಡ್ಡೆ, ಉಮಾವತಿ, ಪುತ್ರರಾದ ನಿವೃತ್ತ ಕ್ಯಾಪ್ಟನ್ ಸುದಾನಂದ , ಯೋಧ ರಾಜೇಶ್ , ರೋಹಿತ್ ಹಾಗೂ ಗುರುಪ್ರಸಾದ್...

ಮರ್ಕಂಜ : ಸ್ವ-ಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.16 ರಂದು ಮರ್ಕಂಜ ಒಕ್ಕೂಟದ ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ...
Ad Widget

ಚೊಕ್ಕಾಡಿ : ಸ್ವಸಹಾಯ ಸಂಘಗಳ ಲಾಭಾಂಶ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ).ಸುಳ್ಯ ದೊಡ್ಡತೋಟ ವಲಯದ ಅಮರ ಪಡ್ನೂರು ಕಾರ್ಯಕ್ಷೇತ್ರದ ಚೊಕ್ಕಾಡಿ ಸೇವಾ ಕೇಂದ್ರದಲ್ಲಿ ಲಾಭಾಂಶ ವಿತರಣಾ ಕಾರ್ಯಕ್ರಮ ನಡೆಯಿತು. ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಅನಿಲ್ ಪೂಜಾರಿ ಮನೆ ಹಾಗೂ ಒಕ್ಕೂಟದ ಅಧ್ಯಕ್ಷ ಪ್ರಸಾದ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಲಾಭಾಂಶ ಹಸ್ತಾಂತರ ಮಾಡಿದರು. ವಲಯದ ಮೇಲ್ವಿಚಾರಕರಾದ ನವೀನ್...

ಅಡ್ತಲೆ : ನಾಗರಿಕ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ – ಮೂಲಭೂತ ಸೌಕರ್ಯಗಳ ಒದಗಿಸದಿದ್ದರೇ ಚುನಾವಣೆ ಬಹಿಷ್ಕರಿಸಿ ಹೋರಾಟಕ್ಕೆ ತೀರ್ಮಾನ

ಅರಂತೋಡು ಗ್ರಾಮದ ಅಡ್ತಲೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ರಸ್ತೆ ಮತ್ತು ಮೊಬೈಲ್ ನೆಟ್ವರ್ಕ್ ಸಮರ್ಪಕವಾಗಿಲ್ಲ. ಜನಪ್ರತಿನಿಧಿಗಳು ಚುನಾವಣೆಯ ವೇಳೆಯಲ್ಲಿ ಮಾತ್ರವೇ ಭರವಸೆ ನೀಡಿ ಮತ್ತೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅಡ್ತಲೆ ಮುಖ್ಯ ರಸ್ತೆ ಅಗಲೀಕರಣಗೊಳ್ಳದೇ ಹಲವಾರು ಅಪಘಾತಗಳು ಸಂಭವಿಸುತ್ತಿದೆ. ಇದರಿಂದ ಬೇಸತ್ತ ಜನ ಈ ಬಾರಿ ತಾ.ಪಂ.ಹಾಗೂ ಜಿ.ಪಂ. ಚುನಾವಣೆ ಬಹಿಷ್ಕರಿಸಿ, ಬೇಡಿಕೆ ಈಡೇರುವವರೆಗೆ ಹೋರಾಟಕ್ಕೆ ಸಜ್ಜಾಗಿದ್ದಾರೆ....

ದೊಡ್ಡತೋಟ : ಶ್ರೀ. ಕ್ಷೇ. ಗ್ರಾ.ಯೋಜನೆಯ ವಲಯ ಕಛೇರಿ ಉದ್ಘಾಟನೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೊಡ್ಡತೋಟ ವಲಯದ ನೂತನ ಕಚೇರಿ ಹಾಗೂ ಗ್ರಾಹಕ ಸೇವಾ ಕೇಂದ್ರದ ಉದ್ಘಾಟನೆ ಜು.14 ರಂದು ಬಾಲಾಜಿ ಟ್ರೇಡರ್ಸ್ ಕಟ್ಟಡದಲ್ಲಿ ನೆರವೇರಿತು. ಕೇಂದ್ರ ಒಕ್ಕೂಟದ ಅಧ್ಯಕ್ಷ ಯತೀಶ್ ರೈ, ಅಮರಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಶಿಕಲ, ಕಟ್ಟಡ ಮಾಲಕ ಕೃಷ್ಣಕುಮಾರ್ ಭಟ್, ವಲಯ ಅಧ್ಯಕ್ಷ ಭಾಸ್ಕರ್ ರಾವ್ ನೂತನ ಕಚೇರಿಯನ್ನು...

ಸೇತುವೆ ಕಾಮಗಾರಿ ಪೂರ್ಣಗೊಳ್ಳದೇ ಪಡಿತರ ಪಡೆಯಲು ಸಂಕಟ ಪಡುತ್ತಿರುವ ಸೇವಾಜೆ ಜನ – ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಮನವಿಗೆ ಸ್ಪಂದಿಸಿದ ತಹಶೀಲ್ದಾರ್

ಸೇವಾಜೆ ಸೇತುವೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸೇವಾಜೆ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ದೇವಚಳ್ಳ ಗ್ರಾಮ ಪಂಚಾಯಿತ್ ವ್ಯಾಪ್ತಿಗೆ ಒಳಪಟ್ಟ ಸೇವಾಜೆಯ 8 ಬಡ ಕುಟುಂಬಗಳಿಗೆ ತಳೂರು ಪಡಿತರ ಕೇಂದ್ರಕ್ಕೆ ಬಂದು ಪಡಿತರ ಪಡೆಯಲು ಸುತ್ತು ಬಳಸಿ ಬರಬೇಕಾಗಿತ್ತು. ಇಲ್ಲಿಗೆ ಬರುವುದು ಬಡವರಿಗೆ ಹೊರೆಯಾಗುವುದನ್ನು ಮನಗಂಡು ಮಳೆ ಸಂಪೂರ್ಣ ಮುಗಿಯುವ ತನಕ ಮರ್ಕಂಜ ಪ್ರಾ. ಕೃ. ಪ....

ಸಂಪಾಜೆ : ಆನೆ ದಾಳಿ – ಕೃಷಿ ಹಾನಿ

ಸಂಪಾಜೆ ಗ್ರಾಮದ ಪೆಲ್ತಡ್ಕ ಪದ್ಮನಾಭ ಹಾಗೂ ಶೇಷಪ್ಪ ಅವರ ತೋಟಕ್ಕೆ ನಿನ್ನೆ ರಾತ್ರಿ ಆನೆ ದಾಳಿ ಮಾಡಿ ತೆಂಗು ಅಡಿಕೆ, ಬಾಳೆ ಗಿಡಗಳ ನಾಶ ಮಾಡಿ ಅಪಾರ ನಷ್ಟ ಉಂಟು ಮಾಡಿದೆ. ಸ್ಥಳಕ್ಕೆ ಅರಣ್ಯ ಪಾಲಕ ಚಂದ್ರು, ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್, ಹನೀಫ್ ಎಸ್. ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು....

ಲೀಲಾಕುಮಾರಿ ತೊಡಿಕಾನ ನಿರ್ದೇಶನದ ಪ್ರೇಮಯಾನ ಆಲ್ಬಂ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆ

ಇಬ್ಬನಿ ಕ್ರಿಯೇಷನ್ ಯುಟ್ಯೂಬ್ ಚಾನೆಲ್ ನಲ್ಲಿ "ಪ್ರೇಮಯಾನ" ಆಲ್ಬಂ ಹಾಡು ಇಂದು ಬಿಡುಗಡೆಯಾಗಿದೆ. ಲೀಲಾಕುಮಾರಿ ತೊಡಿಕಾನರವರ ಸಾಹಿತ್ಯವನ್ನು ಮಹಾಲಿಂಗ ಮೈಸೂರುರವರು ಹಾಡಿದ್ದಾರೆ‌. ಸುಳ್ಯದ ಪ್ರತಿಭೆಗಳಾದ ಶರತ್ ಮಾಸ್ತಿ ಮತ್ತು ಸಾಯಿಶೃತಿ ನಟಿಸಿದ್ದಾರೆ.ಹಾಡನ್ನು ಕೇಳಲು ಈ ಕೆಳಗಿನ ಲಿಂಕ್ ಬಳಸಿ.https://youtu.be/JNfyOzLZZM0 https://youtu.be/JNfyOzLZZM0

ದೇವಚಳ್ಳ : ಮನೆ ಮೇಲೆ ಮರ ಬಿದ್ದು ಹಾನಿ

ದೇವಚಳ್ಳ ಗ್ರಾಮದ ಮಂಜೋಳುಕಜೆ ಪವನ ಕುಮಾರ್ ರವರ ಮನೆ ಮೇಲೆ ಜು.14 ರಂದು ದೊಡ್ಡ ಗಾತ್ರದ ಮರವೊಂದು ಬಿದ್ದು ಮನೆಯ ಚಾವಣಿ ಸಂಪೂರ್ಣ ಹಾನಿಯಾಗಿದೆ. ಸುದ್ದಿ ತಿಳಿದು ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಪ್ರಶಾಂತ್ ಮೆದು, ದುರ್ಗದಾಸ್ ಮೆತ್ತಡ್ಕ ಸ್ಥಳಕ್ಕೆ ಭೇಟಿ ನೀಡಿರುತ್ತಾರೆ. ಹಾಗೂ ಶ್ರೀ ವಿಷ್ಣು ವಿಶ್ವ ಹಿಂದೂ ಪರಿಷತ್...

ಉಬರಡ್ಕ : ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆಯು ಜು.15 ರಂದು ನಡೆಯಿತು. ಅರ್ಚಕ ವೆಂಕಟ್ರಾಮ್ ಭಟ್ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ, ಮಿತ್ತೂರು ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ವೆಂಕಟ್ರಮಣ ಕೆದಂಬಾಡಿ, ಕಟ್ಟಡ ಸಲಹಾ ಸಮಿತಿ ಸದಸ್ಯರು, ಆಡಳಿತ ಮಂಡಳಿ ನಿರ್ದೇಶಕರು,...
Loading posts...

All posts loaded

No more posts

error: Content is protected !!