Ad Widget

ಅಪಪ್ರಚಾರಕ್ಕೆ ಕಿವಿಗೊಡದೆ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ – ವಿನಯಕುಮಾರ್ ಕಂದಡ್ಕ

ಸುಳ್ಯ ನಗರ ಪಂಚಾಯತ್ ನ ಹತ್ತನೇ ವಾರ್ಡ್ ನ ರಸ್ತೆಯ ದುರವಸ್ಥೆ ಕುರಿತು ಅನಗತ್ಯ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಸುಳ್ಯದ ಕೋರ್ಟ್ ಮುಂಭಾಗದಿಂದ ಕುರುಂಜಿ ಗುಡ್ಡೆಗೆ ಹೋಗುವ ರಸ್ತೆ ವರ್ಷಗಳಿಂದ ಅಭಿವೃದ್ಧಿಗೆ ಬಾಕಿ ಇದ್ದು ಇದೀಗ ಶಾಸಕರ ವಿಶೇಷ ಪ್ರಯತ್ನದಿಂದ ಈ ರಸ್ತೆಗೆ ಈಗಾಗಲೇ 20ಲಕ್ಷರೂ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆಯು ಮುಗಿದಿರುತ್ತದೆ. ಮಳೆಯು ಕಡಿಮೆಯಾದ ಕೂಡಲೇ ಸದ್ರಿ...

ಸುಳ್ಯ : ಬಿಜೆಪಿ ಮಹಿಳಾ ಮೋರ್ಚಾ ವಿಶೇಷ ಕಾರ್ಯಕಾರಿಣಿ

ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ವಿಶೇಷ ಕಾರ್ಯಕಾರಿಣಿ ಸಭೆಯು ಸುಳ್ಯದ ಅಂಬಟೆಡ್ಕದ ಶ್ರೀ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ ಇಂದು ಜರುಗಿತು.ವಿಶೇಷ ಕಾರ್ಯಕಾರಿಣಿ ಸಭೆಯನ್ನು ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಪೂಜಾ ಪೈ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಮೂರು ತಿಂಗಳಿಗೊಮ್ಮೆ ನಡೆಯುವ ವಿಶೇಷ...
Ad Widget

ಯಡಿಯೂರಪ್ಪ ರಾಜೀನಾಮೆಗೆ ದಿನಗಣನೆ – ಅಂಗಾರರ ಸಚಿವಗಿರಿಗೂ ಕುತ್ತು ?!!

ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಜೋರಾಗಿದ್ದು ಹಾಗೇನಾದರೂ ರಾಜೀನಾಮೆ ನೀಡುವುದು ನಿಜವೇ ಆದರೆ ಸಂಪುಟ ಪುನರ್ ರಚನೆಯೂ ಆಗುತ್ತದೆ ಎಂಬ ವಿಶ್ಲೇಷಣೆ ಪಕ್ಷದಲ್ಲಿ ಕೇಳಿಬರುತ್ತಿದೆ. ಮೊದಲ ಬಾರಿ ರಾಜ್ಯದ ಸಚಿವ ಸ್ಥಾನ ಅಲಂಕರಿಸಿಕೊಂಡಿರುವ ಎಸ್.ಅಂಗಾರರ ಸಚಿವಗಿರಿಯೂ ತಪ್ಪಬಹುದು ಎಂದು ಅಂದಾಜಿಸಲಾಗುತ್ತಿದೆ. ಈಗಾಗಲೇ ಹಲವಾರು ಆಕಾಂಕ್ಷಿಗಳು ಸಂಪುಟ ಪುನರಚನೆಗಾಗಿ ಪಟ್ಟು ಹಿಡಿಯುತ್ತಿದ್ದಾರೆ.

ಎನ್ನೆಂಸಿ : ಯುವ ರೆಡ್ ಕ್ರಾಸ್ ಘಟಕದಿಂದ “ಹಸಿರು-ಉಸಿರು” ವನಮಹೋತ್ಸವ ಕಾರ್ಯಕ್ರಮ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಮತ್ತು ಗ್ರಾಮ ಪಂಚಾಯತ್, ಅಜ್ಜಾವರಇವುಗಳ ಜಂಟಿ ಆಶ್ರಯದಲ್ಲಿ ಅರಣ್ಯ ಇಲಾಖೆ ಸುಳ್ಯ ಇವರ ಸಹಯೋಗದೊಂದಿಗೆ ಸಮುದಾಯ ಕಾರ್ಯಕ್ರಮದ ಅಂಗವಾಗಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ "ಹಸಿರು-ಉಸಿರು" ವನಮಹೋತ್ಸವ ಕಾರ್ಯಕ್ರಮವನ್ನು ಅಜ್ಜಾವರದ ತುದಿಯಡ್ಕ ಎಂಬಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಅಜ್ಜಾವರ...

ಜು.24 : ಮುಕ್ಕೂರಿನಲ್ಲಿ ಬೆಳೆ ಸಮೀಕ್ಷೆ ಅಭಿಯಾನ

ಮುಕ್ಕೂರು : ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಕಾಪು ಕೃಷಿ ಕ್ಷೇತ್ರದ ಆಶ್ರಯದಲ್ಲಿ ರೈತರೇ ಮೊಬೈಲ್ ಆಧರಿಸಿ ಬೆಳೆ ಸಮೀಕ್ಷೆ ನಡೆಸುವ ಕುರಿತ ಅಭಿಯಾನವು ಜು.24 ರಂದು ಬೆಳಗ್ಗೆ 10 ಕ್ಕೆ ಕಾಪು ಕೃಷಿ ತೋಟದಲ್ಲಿ ನಡೆಯಲಿದೆ. ಕೃಷಿ ಕ್ಷೇತ್ರದ ಸಂತೋಷ್ ಕುಮಾರ್ ರೈ ಕಾಪು ಉದ್ಘಾಟಿಸಲಿದ್ದಾರೆ. ಪೆರುವಾಜೆ...

ಒಬ್ಬಂಟಿ

ನೀನು ನನ್ನವನಲ್ಲ, ನಾನು ನಿನ್ನವನಲ್ಲ…ಎಲ್ಲರೂ ಒಬ್ಬಂಟಿಗಳೇ ಈ ಜಗದಲ್ಲಿ…ಹುಟ್ಟಿನಲ್ಲೂ ಒಬ್ಬಂಟಿ, ಸಾವಿನಲ್ಲೂ ಒಬ್ಬಂಟಿ…ನೀನು ನೋವಿನಲ್ಲೂ ಒಬ್ಬಂಟಿ,ಕಷ್ಟದಲ್ಲೂ ಒಬ್ಬಂಟಿ…ಹೇಗಿದ್ದರೂ ಬದುಕಲೆಬೇಕು ಈ ಬದುಕಿನಲಿ…ನೀನು ಎದ್ದು ನಿಲ್ಲಲೆಬೇಕು ಈ ಬದುಕಿನಲಿ… ಗೆದ್ದಾಗ ಬರುವರು ನೀನು ನಮ್ಮವನು ಎಂದು…ಸೋತಾಗ ಹೋಗುವರು ತಿರುಗಿಯು ನೋಡದೇ…ನಿನ್ನ ಕನಸಿಗೆ ಕೊಳ್ಳಿ ಇಟ್ಟು, ಮನಸ್ಸಿಗೆ ಬೆಂಕಿ ಇಟ್ಟು ನೋಡುವರು ಇಲ್ಲಿ ಹಲವರು,ನಿಂತು ನೋಡುವರು ಇಲ್ಲಿ ಹಲವರು…ಯೋಚಿಸು...

ವಳಲಂಬೆ : ಚರಂಡಿಗೆ ಉರುಳಿದ ಪಿಕಪ್

ವಳಲಂಬೆ - ಅಡ್ಡನಪಾರೆ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ಚರಂಡಿಗೆ ಉರುಳಿದ ಘಟನೆ ಇಂದು ನಡೆದಿದೆ. ಪಿಕಪ್ ನಲ್ಲಿ ಬೀಡಿ ಹಾಗೂ ಎಲೆ ಸಾಗಿಸಲಾಗುತ್ತಿತ್ತು. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕ್ರೇನ್ ಸಹಾಯದಿಂದ ಪಿಕಪ್ ಮೇಲಕ್ಕೆತ್ತಲಾಯಿತು.

ಸುಳ್ಯದಲ್ಲಿಂದು 40 ಕೊರೊನಾ ಪಾಸಿಟಿವ್

ಸುಳ್ಯ ತಾಲ್ಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 40 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಮರ್ಕಂಜದಲ್ಲಿ 1, ಅಮರಮುಡ್ನೂರುನಲ್ಲಿ 1, ಬೆಳ್ಳಾರೆಯಲ್ಲಿ 2, ಸುಳ್ಯದಲ್ಲಿ 15, ಉಬರಡ್ಕ ಮಿತ್ತೂರುನಲ್ಲಿ 2, ಕನಕಮಜಲಿನಲ್ಲಿ 2, ಆಲೆಟ್ಟಿನಲ್ಲಿ 1, ಪಂಜದಲ್ಲಿ 1, ಎಡಮಂಗಲದಲ್ಲಿ 2, ಮಂಡೆಕೋಲಿನಲ್ಲಿ 1, ದುಗ್ಗಲಡ್ಕದಲ್ಲಿ 1, ಜಾಲ್ಸೂರಿನಲ್ಲಿ 2, ಅಜ್ಜಾವರದಲ್ಲಿ 2, ಗುತ್ತಿಗಾರಿನಲ್ಲಿ 1,...

ಸರಕಾರಿ ಆಸ್ಪತ್ರೆಯಲ್ಲಿ ಊಟ ನೀಡಿ ಬಕ್ರೀದ್ ಆಚರಿಸಿದ ನಾವೂರು ಬೀಜಕೊಚ್ಚಿ ಫ್ರೆಂಡ್ಸ್

ಸುಳ್ಯ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳ ಮನೆಯವರಿಗೆ ಮಧ್ಯಾಹ್ನದ ಊಟವನ್ನು ನೀಡುವ ಮೂಲಕ ನಾವೂರು ಬೀಜಕೊಚ್ಚಿ ಫ್ರೆಂಡ್ಸ್ ಬಕ್ರೀದ್ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸುಮಾರು 70 ಮಂದಿಗೆ ಮಧ್ಯಾಹ್ನದ ಊಟವನ್ನು ವಿತರಿಸಿ ಹಬ್ಬದ ಸಂತೋಷವನ್ನು ಇತರರಿಗೂ ಹಂಚಿದ್ದಾರೆ. ಈ ತಂಡದಲ್ಲಿ ಹಲವಾರು ಮಂದಿ ಯುವಕರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಳೆದ ಲಾಕ್ ಡೌನ್ ದಿನಗಳಲ್ಲಿ ಪರಿಸರದ...

ಗುತ್ತಿಗಾರು : ಚೂಡಾಮಣಿ ಪ್ರಗತಿ ಬಂಧು ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಗುತ್ತಿಗಾರು ವಲಯದ ಗುತ್ತಿಗಾರು ಗ್ರಾಮದಲ್ಲಿ ಚೂಡಾಮಣಿ ಹೆಸರಿನ ಪ್ರಗತಿ ಬಂಧು ಸಂಘವನ್ನು ಮಾಜಿ ತಾ.ಪಂ. ಅಧ್ಯಕ್ಷ ಮುಳಿಯ ಕೇಶವ ಭಟ್ ರವರು ಚೂಡಾಮಣಿ ಎಂಬ ಸಂಘವನ್ನು ದೀಪ ಬೆಳಗಿ ಉದ್ಘಾಟಿಸಿ ಐದು ಮಂದಿಯೂ ಏಕ ಮನಸ್ಸಿನಿಂದ ಕೂಡಿ ಮಾಡಿದ ಸಂಘವು ನಿಮ್ಮ...
Loading posts...

All posts loaded

No more posts

error: Content is protected !!