Ad Widget

ಕಾಡುಸೊರಂಜ ರಸ್ತೆ ದುರಸ್ತಿ

ಮಂಡೆಕೋಲು ಗ್ರಾಮದ ಕಾಡುಸೊರಂಜ - ಅಮೈ ರಸ್ತೆಯು ತೀರಾ ಹದಗೆಟ್ಟಿದ್ದು ಊರಿನ ಯುವಕರು ಸೇರಿ ದುರಸ್ತಿಪಡಿಸಿದರು. ಶ್ರಮದಾನದಲ್ಲಿ ಮಹೇಶ್, ಪ್ರಶಾಂತ್, ಮಿತೇಶ್, ದಯಾನಂದ ಪಿ.ಕೆ.,ಕೃತೇಶ್, ಕಿಶನ್ ಭಾಗವಹಿಸಿದ್ದರು.‌

ಜು.21 : ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ – ಸನ್ಮಾನ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಸನ್ಮಾನ ಹಾಗೂ ಉಪನ್ಯಾಸ ಜುಲೈ 21 ರಂದು ಪೂ ಪೂ.ಗಂಟೆ 10ಕ್ಕೆ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಉದ್ಘಾಟನೆಯನ್ನು ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೆರವೇರಿಸಲಿದ್ದಾರೆ. ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಕಣಕಾರರು ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ...
Ad Widget

ಜುಲೈ 22ರಂದು ಯುವ ರೆಡ್ ಕ್ರಾಸ್ ಘಟಕದಿಂದ ವನಮಹೋತ್ಸವ ಕಾರ್ಯಕ್ರಮ

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಗ್ರಾಮ ಪಂಚಾಯತ್ ಅಜ್ಜಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದ ಪ್ರಯುಕ್ತ "ಹಸಿರು-ಉಸಿರು" ವನಮಹೋತ್ಸವ ಕಾರ್ಯಕ್ರಮ ಜು. 22ರಂದು ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ನಡೆಯಲಿದೆ. ಸುಳ್ಯದ ವಲಯ...

ಬೇಕಾಗಿದ್ದಾರೆ

ಪತ್ರಿಕೆ ಹಾಗೂ ವೆಬ್ಸೈಟ್ ನಲ್ಲಿ ಕೆಲಸ ಮಾಡಲು ಆಸಕ್ತ ಅಭ್ಯರ್ಥಿಗಳು ಬೇಕಾಗಿದ್ದಾರೆ. ಪಾರ್ಟ್ ಟೈಮ್ ಆಗಿಯೂ ಕೆಲಸ ಮಾಡಬಹುದು. ತಮ್ಮ ಊರಿನಲ್ಲಿದ್ದುಕೊಂಡು ಕೆಲಸ ಮಾಡಬಹುದು. ಒಂದು ವಾರ ತರಬೇತಿ ನೀಡಲಾಗುವುದು. ಉತ್ತಮ ವೇತನ ಹಾಗೂ ಕಮಿಷನ್ , ಐ.ಡಿ ಕಾರ್ಡ್ ಕೊಡಲಾಗುವುದು. ಆಸಕ್ತರು ತಮ್ಮ ಬಯೊಡೇಟಾ ವಾಟ್ಸಾಪ್ ಮಾಡಿ 9449387044
error: Content is protected !!