- Saturday
- May 17th, 2025

ಅಮರಪಡ್ನೂರು ಗ್ರಾಮದ ಶೇಣಿ ಹೊಸಮಜಲು ರಸ್ತೆ ಕಾಂಕ್ರೀಟಿಕರಣದ ಸಲುವಾಗಿ ಫೆ.7 ರಂದು ಗುದ್ದಲಿ ಪೂಜೆಯು ನೆರವೇರಿತು. ಮೀನುಗಾರಿಕಾ ಮತ್ತು ಬಂದರು ಸಚಿವರಾದ ಎಸ್. ಅಂಗಾರ ರವರು ಗುದ್ದಲಿಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ.ಸದಸ್ಯ ರಾಧಾಕೃಷ್ಣ ಬೊಳ್ಳೂರು, ಪಂ.ಸದಸ್ಯರಾದ ಸೀತಾ ಹೆಚ್., ರತಿನ್ ಚೂಂತಾರು, ಮಾಜಿ ಗ್ರಾಂ.ಪಂ.ಸದಸ್ಯ ನಾರಾಯಣ ಆಚಾರ್ಯ ಶೇಣಿ, ಧರ್ಮಪಾಲ ಶೇಣಿ,...

ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಿರಿಯೂರು ಚಿತ್ರದುರ್ಗ ಹಾಗೂ ಬೆಳಕು ಟಿವಿ ಸಹಯೋಗದಲ್ಲಿ ನೀಡುತ್ತಿರುವ ರಾಜ್ಯ ಮಟ್ಟದ ಜಾನ್ಸಿರಾಣಿ ಲಕ್ಷ್ಮೀ ಬಾಯಿ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರಿಗೆ ಫೆ.7 ರಂದು ಬೆಂಗಳೂರಿನ ಕನ್ಯಾಕುಮಾರಿ ವಿದ್ಯಾಲಯದಲ್ಲಿ ಗಣ್ಯರ ಸಮ್ಮುಖದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗುತ್ತಿಗಾರು ಗ್ರಾಮದ ಪೈಕ ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ಹಾಗೂ ಅಜ್ಜಿ ದೈವಗಳ ದೈವಸ್ಥಾನದಲ್ಲಿ ನೇಮೋತ್ಸವ ನಡೆಯಿತು. ಫೆ. 06 ರಾತ್ರಿ ಭಂಡಾರ ಹಿಡಿದು. ಫೆ.7 ರಂದು ಪ್ರಾತಃಕಾಲ ಶ್ರೀ ಉಳ್ಳಾಕುಲು ದೈವದ ನೇಮ, ಬೆಳಿಗ್ಗೆ ನಾಗನ ಚಾಮುಂಡಿ ದೈವ, ಪುರುಷ ದೈವದ ನೇಮ ನಂತರ ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ ವಲ್ಪಾರೆ ಚಾಮುಂಡಿ...