Ad Widget

ನೆಲ್ಲೂರುಕೆಮ್ರಾಜೆ ಸೊಸೈಟಿ ಮ್ಯಾನೇಜರ್ ನಿತ್ಯಾನಂದ ಮಾಪಲಕಜೆ ಯವರಿಗೆ ಬೀಳ್ಕೊಡುಗೆ

ನೆಲ್ಲೂರುಕೆಮ್ರಾಜೆ ಪ್ರಾ.ಕೃ.ಪ.ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿತ್ಯಾನಂದ ಮಾಪಲಕಜೆಯವರು ಇಂದು ಸೇವೆಯಿಂದ ನಿವೃತ್ತ ರಾಗಿರುತ್ತಾರೆ.ಸಂಘದ ಮೊಳಹಳ್ಳಿ ಶಿವರಾವ್ ಸಭಾಂಗಣದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಸಂಘದ ಅಧ್ಯಕ್ಷ ವಿಷ್ಣು ಭಟ್ ರವರು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಘದಲ್ಲಿ ನಿತ್ಯಾನಂದ ನಾಯಕ್ ರವರ ಸೇವೆಯನ್ನು ಶ್ಲಾಘಿಸಿ ನಿವೃತ್ತ ಜೀವನಕ್ಕೆ ಶುಭಹಾರೈಸಿದರು.


ನಿತ್ಯಾನಂದ ನಾಯಕ್ ರ ಹಿರಿಯ ಸಹೋದ್ಯೋಗಿ ಗಳಾಗಿದ್ದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಳಾದ ಎ.ವಿ.ಶ್ರೀನಿವಾಸ ರಾವ್ ಮತ್ತು ಸುಬ್ರಹ್ಮಣ್ಯ ಭಟ್ ಮಾತನಾಡಿ ತಮ್ಮ ಸೇವಾವಧಿಯ ನೆನಪುಗಳನ್ನು ಮೆಲುಕು ಹಾಕಿ ನಿವೃತ್ತ ಜೀವನಕ್ಕೆಶುಭ ಹಾರೈಸಿದರು.ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಉಮೇಶ ಪ್ರಭುರವರು ನಿತ್ಯಾನಂದ ನಾಯಕ್ ರವರು ಸಂಘದಲ್ಲಿ ಸಲ್ಲಿಸಿದ ಸೇವೆ ಯನ್ನು ಶ್ಲಾಘಿಸಿದರು. ಸೇವಾನಿವೃತ್ತ ನಿತ್ಯಾನಂದ ನಾಯಕ್ ರವರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲ ರನ್ನೂ ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.
ಸಂಘದ ನಿಯೋಜಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಜಗನ್ನಾಥ ಶೆಟ್ಟಿ ಯವರು ಕಾರ್ಯ ಕ್ರಮ ನಿರೂಪಿಸಿ ಮುಂದಿನ ತಮ್ಮ ಕಾರ್ಯಾವಧಿಯ ದಿನಗಳಲ್ಲಿ ಎಲ್ಲರ ಸಹಕಾರ ಕೋರಿದರು. ಸಂಘದ ಉಪಾಧ್ಯಕ್ಷ ಮಹೇಶ್ ಗಟ್ಟಿಗಾರು ನಿವೃತ್ತರಿಗೆ ಶುಭಹಾರೈಸಿ ವಂದನಾರ್ಪಣೆಗೈದರು.ಸಂಘದ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ‌ಹಾಗೂ ಸದಸ್ಯರು ಈ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!