- Wednesday
- July 22nd, 2026
ಸುಳ್ಯ ಪರಿವಾರಕಾನದಲ್ಲಿ ರಸ್ತೆ ಬದಿ ಕೆಟ್ಟು ನಿಲ್ಲಿಸಲ್ಪಟ್ಟಿದ್ದ ಓಮಿನಿ ಕಾರಿನಲ್ಲಿ ಇಂದು ಸಂಜೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಶವದ ಗುರುತು ಪತ್ತೆಯಾಗಿದೆ. ಶವವಾಗಿ ಪತ್ತೆಯಾದವನನ್ನು ಮನೋಹರ್ ಎಂದುಗುರುತಿಸಲಾಗಿದ್ದು ಈತನು ಮದ್ಯ ವ್ಯಸನಿಯಾಗಿದ್ದ ಎಂದು ಹೇಳಲಾಗುತ್ತಿದ್ದು ಸದ್ಯ ಈತನ ಸಾವಿಗೆ ಕಾರಣವೇನೆಂಬುದು ತಿಳಿಯದೇ ಇದ್ದು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.22 ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಸಭೆಯ ಅಧ್ಯಕ್ಷತೆ ವಹಿಸಿದ್ದರು.2023-24ನೇ ಸಾಲಿನಲ್ಲಿ ಸಂಘವು 111.28 ಕೋಟಿ ರೂ. ವ್ಯವಹರಿಸಿದ್ದು, ಪ್ರಸಕ್ತ ಸಾಲಿನಲ್ಲಿ 32.31 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ.ವಾರ್ಷಿಕ ಮಹಾಸಭೆಯ ವರದಿಯನ್ನು ಸಂಘದ ಮುಖ್ಯ...
ಸುಳ್ಯದ ಪೈಚಾರಿನಿಂದ ಕರೆತಂದು ಸುಳ್ಯ ಬಸ್ಸು ನಿಲ್ದಾಣದ ಬಳಿಯಲ್ಲಿ ಮುಸ್ಲಿಂ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಇಬ್ಬರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ. ಬಂಧಿತರು ಹಿಂದು ಪರ ಸಂಘಟನೆಗಳ ಕಾರ್ಯಕರ್ತರಾದ ವರ್ಷಿತ್, ಮಿಥುನ್ ಎಂದು ತಿಳಿದು ಬಂದಿದೆ. ಸದ್ಯ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಅವರಿಗೆ ನ್ಯಾಯಾಧೀಶರು 14 ದಿನಗಳ ವರೆಗೆ ನ್ಯಾಯಾಂಗ...
ಸುಳ್ಯ:ಅಮರ ಶ್ರೀ ಹಾಲ್ ಹತ್ತಿರದ ಸ್ನೇಹ ಶಾಲೆಯ ರಸ್ತೆ ಬಳಿ ಕೆಲ ದಿನಗಳಿಂದ ಓಮಿನಿ ಕಾರು ನಿಲುಗಡೆ ಮಾಡಲಾಗಿದ್ದು ಇದೀಗ ಓಮಿನಿ ಕಾರಿನಲ್ಲಿ ಕೊಳೆತ ಮಾದರಿಯಲ್ಲಿ ಶವವೊಂದು ಪತ್ತೆಯಾಗಿದೆ.
ಏನೆಕಲ್ಲು ಗ್ರಾಮದ ಪೂಜಾರಿಮನೆ ದಿ. ಕುಮಾರ ಗೌಡರ ಪುತ್ರ ಪುಂಡರೀಕ ಗೌಡ ಪೂಜಾರಿಮನೆಯವರು ಶಂಕಿತ ಇಲಿಜ್ವರದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.23 ರಂದು ನಿಧನರಾದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಚೂಡಾಮಣಿ, ಪತ್ನಿ ವಿಶಾಲಾಕ್ಷಿ, ಪುತ್ರರಾದ ಧನುಶ್, ಪ್ರತೀಕ್, ವಿನುತ್, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.
ಗ್ರಾಮ ಆಡಳಿತಾಧಿಕಾರಿಗಳ ರಾಜ್ಯ ಸಂಘದ ಸಭೆಯ ನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಡೆಸುವ ಬಗ್ಗೆ ಗ್ರಾಮ ಆಡಳಿತಾಧಿಕಾರಿಗಳು ತೀರ್ಮಾನಿಸಿದ್ದು, ಈ ಬಗ್ಗೆ ಮನವಿ ಪತ್ರವನ್ನು ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಸಲ್ಲಿಸಿದರು.ತಮ್ಮ ಮನವಿ ಪತ್ರದಲ್ಲಿ ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿರಿಸಿದ್ದು ಈ ಬೇಡಿಕೆಗಳು ಈಡೇರುವವರೆಗೆ ಸೆ.26 ರಿಂದ ಎಲ್ಲಾ ಬಗೆಯ ಮೊಬೈಲ್ ಆಪ್ ಹಾಗೂ...
ದೊಡ್ಡೇರಿ ಶಾಲೆಯಲ್ಲಿ ಇಂದು ಊರವರು ಹಾಗೂ ಎಸ್ ಡಿ ಎಂ ಸಿ ಸಭೆ ನಡೆಯಿತು.ಶಾಲಾ ಮೈದಾನದಲ್ಲಿ ತೆಂಗಿನ ಸಸಿ ನೆಡಲು ತೆಗೆದ ಗುಂಡಿಗಳನ್ನು ಮುಚ್ಚಿ ಶಾಲಾ ಹಿಂಬದಿಯಲ್ಲಿ ಇರುವ ಜಾಗವನ್ನು ಸ್ವಚ್ಛಗೊಳಿಸಿ ಸಸಿಗಳನ್ನು ನೆಡುವ ಬಗ್ಗೆ ನಿರ್ಣಯಿಸಲಾಗಿದ್ದು, ಸಭೆ ಸೌಹಾರ್ದಯುತವಾಗಿ ಅಂತ್ಯವಾಯಿತು. ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾ ಪ್ರೇಮಿಗಳ ಸಂಘವನ್ನು ರಚಿಸುವುದೆಂದು ತೀರ್ಮಾನಿಸಲಾಯಿತು.
ದ ಕ ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕೊಲ್ಲಮೊಗ್ರು ಗ್ರಾಮದ ವಿವಿಧ ಬಾಗಗಳಲ್ಲಿ ಹುಚ್ಚು ನಾಯಿ ನಿರೋಧಕ ಲಸಿಕೆಯನ್ನು ಉಚಿತವಾಗಿ ನೀಡಲಾಯಿತು. ಮುಳ್ಳುಬಾಗಿಲು ಕಾಣಿಕೆ ಹುಂಡಿ ಬಳಿ, ಅಂಬೇಡ್ಕರ್ ಸಭಾಭವನ ಕಟ್ಟ, ಕೊಲ್ಲಮೊಗ್ರು ಪೇಟೆ, ಮಯೂರ ಸರ್ಕಲ್ ಮಲ್ಲಾಜೆ, ಅಗಲಡ್ಕ,...
ಸುಬ್ರಹ್ಮಣ್ಯ ಸೆ. 23: ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಇರುವ ಮೋಂಟಿ ಕಂಫರ್ಟ್ಸ್ ನ ನೆಲ ಮಹಡಿಯಲ್ಲಿ ಇಂದು ನೂತನವಾಗಿ ಕಾರ್ತಿಕ್ ಸಸ್ಯಹಾರಿ ಉಪಹಾರ ಕೇಂದ್ರವು ಉದ್ಘಾಟನೆಗೊಂಡಿತು.ಸುಬ್ರಹ್ಮಣ್ಯದ ಸಮಾಜ ಸೇವಕ ಡಾ.ರವಿ ಕಕ್ಕೆಪದವು ಅವರ ಮಾಲಕತ್ವದ ಈ ಉಪಹಾರ ಕೇಂದ್ರವನ್ನು ಸುಬ್ರಹ್ಮಣ್ಯ ರಾಘವೇಂದ್ರ ಹೋಟೆಲ್ ಮಾಲಕ ಯಜ್ಞೇಶ್ ಆಚಾರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಉಪಹಾರ...
ಸುಳ್ಯದ ಪೈಚಾರಿನಲ್ಲಿ ಅನ್ಯ ಕೋಮಿನ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಹಲವರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಿಂದು ಪರ ಸಂಘಟನೆಗಳ ಕಾರ್ಯಕರ್ತರಾದ ವರ್ಷಿತ್ , ಮಿಥುನ್, ಕಿರಣ್ ಸೇರಿದಂತೆ ಕೆಲ ಯುವಕರನ್ನು ಠಾಣೆಗೆ ಬರಹೇಳಿ ಪೋಲಿಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಹಲ್ಲೆಗೊಳಗಾದ ವ್ಯಕ್ತಿ ಮತ್ತು...
Loading posts...
All posts loaded
No more posts
