ಸೋಣಂಗೇರಿ : ಕಾಣೆಯಾದ ಬಸ್ ನಿಲ್ದಾಣ – ಇನ್ನೆಷ್ಟೂ ದಿನ ಪ್ರಯಾಣಿಕರು ಬಿಸಿಲು, ಮಳೆಯಲ್ಲಿ ನಿಲ್ಲಬೇಕು ಜನಪ್ರತಿನಿಧಿಗಳೇ ?

ಜಾಲ್ಸೂರು ಪಂಚಾಯಿತ್ ವತಿಯಿಂದ ಸೋಣಂಗೇರಿಯಲ್ಲಿ ನಿರ್ಮಿಸಿದ್ದ ಬಸ್ ನಿಲ್ದಾಣವನ್ನು ರಸ್ತೆ ಅಗಲೀಕರಣ ವೇಳೆ ತೆರವುಗೊಳಿಸಲಾಗಿತ್ತು. ರಸ್ತೆ ಕಾಮಗಾರಿ ಸಂಪೂರ್ಣ ಮುಗಿದರೂ ಬಸ್ ನಿಲ್ದಾಣಕ್ಕೆ ಮಾತ್ರ ನೆಲೆ ಸಿಕ್ಕಿಲ್ಲ. ಈ ರಸ್ತೆ ಪ್ರಮುಖವಾಗಿ ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ, ಜಾಲ್ಸೂರು ಮುಂತಾದ ಗ್ರಾಮ ಮತ್ತು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ವಿದ್ಯಾರ್ಥಿಗಳು,ಪ್ರಯಾಣಿಕರು ಸಂಚರಿಸುವ ಸ್ಥಳ ಇದಾಗಿದ್ದು, ಬಸ್...

ಐವರ್ನಾಡಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ,ಮಧುಮೇಹ ತಪಾಸಣೆ,ಸಿ.ಪಿ.ಆ‌ರ್ ತರಬೇತಿ ಶಿಬಿರ

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಗ್ರಾಮ ಪಂಚಾಯತ್ ಐವರ್ನಾಡು, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಮಿತ್ರವೃಂದ ಬಾಂಜಿಕೋಡಿ, ಗೆಳೆಯರ ಬಳಗ ದೇರಾಜೆ, ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ, ಸ್ಪೋರ್ಟ್ಸ್ ಕ್ಲಬ್ ಮಾಡತ್ತಕಾನ, ಯುವಶಕ್ತಿ ಸಂಘ ಐವರ್ನಾಡು, ವಾಹನ ಚಾಲಕ-ಮಾಲಕರ ಸಂಘ ಐವರ್ನಾಡು, ವರ್ತಕ ಸಂಘ ಐವರ್ನಾಡು ಇವರ...
Ad Widget

ದೇವಚಳ್ಳ ಯುವಕ ಮಂಡಲ (ರಿ.) ಕಂದ್ರಪ್ಪಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಉದಯಕುಮಾರ್ ಮುಂಡೋಡಿ, ಕಾರ್ಯದರ್ಶಿಯಾಗಿ ಪ್ರೀತಮ್ ಮುಂಡೋಡಿ, ಕೋಶಾಧಿಕಾರಿ ಪುನೀತ್ ರವಿ ಹಿರಿಯಡ್ಕ

ದೇವಚಳ್ಳ ಯುವಕ ಮಂಡಲ (ರಿ.)ಕಂದ್ರಪ್ಪಾಡಿ ಇದರ ಮಹಾಸಭೆಯು ವಿನಯಕುಮಾರ್ ಮುಳುಗಾಡು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಸೆ.29 ರಂದು ಕಂದ್ರಪ್ಪಾಡಿ ಶಾಲೆಯಲ್ಲಿ ನಡೆಯಿತು. ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಉದಯಕುಮಾರ್ ಮುಂಡೋಡಿ, ಕಾರ್ಯದರ್ಶಿಯಾಗಿ ಪ್ರೀತಮ್ ಮುಂಡೋಡಿ, ಗೌರವಾಧ್ಯಕ್ಷರಾಗಿ ವಿನಯಕುಮಾರ್ ಮುಳುಗಾಡು ಉಪಾಧ್ಯಕ್ಷರಾಗಿ ಓಂ ಪ್ರಕಾಶ್ ಮುಂಡೋಡಿ, ಜತೆ ಕಾರ್ಯದರ್ಶಿಯಾಗಿ ವಿಜಯ್...

ಬೈಕ್ ಮೇಲೆ ಹಾರಿದ ಕಡವೆ – ಸವಾರರಿಗೆ ಗಾಯ

ಕೂತ್ಕುಂಜ ಗ್ರಾಮದ ಬೇರ್ಯ ತಿರುಮಲೇಶ್ವರ ಎಂಬವರು ಮನೆಯಿಂದ ಪಂಜ ಕಡೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಡವೆಯೊಂದು ಜಿಗಿದ ಪರಿಣಾಮ ಬಿದ್ದು ಗಾಯಗೊಂಡ ಘಟನೆ ಕಳೆದ ರಾತ್ರಿ ನಡೆದಿದೆ. ಗುತ್ತಿಗಾರು - ಪಂಜ ರಸ್ತೆಯ ಜಳಕದಹೊಳೆ ಎಂಬಲ್ಲಿ ಘಟನೆ ನಡೆದಿದ್ದು ಅವರ ಕೈ,ಕಾಲು, ಭುಜದ ಭಾಗಕ್ಕೆ ತೀವ್ರ ಗಾಯವಾಗಿದ್ದು ಕಡಬದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪಂಜ ಅರಣ್ಯ...

ದೇವ ಬೂತ್ ಸಮಿತಿಯಿಂದ ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ವೀಕ್ಷಣೆ ಹಾಗೂ ಸದಸ್ಯತ್ವ ಅಭಿಯಾನ

ಬಿಜೆಪಿ ದೇವ ಬೂತ್ ಸಮಿತಿ ವತಿಯಿಂದ ಅಡ್ಡನಪಾರೆ ನಿವಾಸಿ ವಸಂತ ಬೊಳ್ಳಾಜೆ ಅವರ ಮನೆಯಲ್ಲಿ  ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ವೀಕ್ಷಣೆ ಹಾಗೂ ಸದಸ್ಯತ್ವ ಅಭಿಯಾನ, ಗಿಡ ನೆಡುವ ಕಾರ್ಯಕ್ರಮ ಸೆ.29 ರಂದು  ನಡೆಯಿತು.ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ಲಕ್ಷ್ಮೀಶ ಅಡ್ಡನಪಾರೆ, ಕಾರ್ಯದರ್ಶಿ ಮುಕುಂದ ಹಿರಿಯಡ್ಕ, ಗ್ರಾ.ಪಂ.ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ,  ಗ್ರಾ.ಪಂ.ಸದಸ್ಯ ರಮೇಶ್...

ಹರಿಪ್ರಸಾದ್ ಕೆದ್ಕಾರ್ ವಿದೇಶ ಪ್ರಯಾಣ

ಅಜ್ಜಾವರ ಗ್ರಾಮದ ಮೇನಾಲ ಕೆದ್ಕಾರ್ ದಿ.ಪದ್ಮಾವತಿ ಮತ್ತು ದಿ.ಲಿಂಗಪ್ಪ ಗೌಡ ಇವರ ಪುತ್ರ ಹರಿಪ್ರಸಾದ್ ಕೆದ್ಕಾರ್ ಇವರು ಸೆಪ್ಟೆಂಬರ್ 30ರಂದು ಉದ್ಯೋಗ ನಿಮಿತ್ತ ಜಪಾನ್ ಗೆ ವಿದೇಶ ಪ್ರಯಾಣ ಕೈಗೊಳ್ಳಲಿದ್ದಾರೆ. ಇವರ ಪತ್ನಿ ಶ್ರೀಮತಿ ವಿದ್ಯಾ ಗೃಹಿಣಿ ಯಾಗಿದ್ದು ಪುತ್ರ ಮಾ|ಅಥರ್ವ 1ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.

ಅಜ್ಜಾವರ : ಚೈತ್ರ ಯುವತಿ ಮಂಡಲದ ಅಧ್ಯಕ್ಷರಾಗಿ ಶಶ್ಮಿ ಭಟ್ ಪುನರಾಯ್ಕೆ – ಕಾರ್ಯದರ್ಶಿಯಾಗಿ ಹರ್ಷಿತಾ ಅಜ್ಜಾವರ – ಖಜಾಂಜಿಯಾಗಿ ಲಕ್ಷ್ಮೀ ಪಲ್ಲತಡ್ಕ

ಚೈತ್ರ ಯುವತಿ ಮಂಡಲ ಅಜ್ಜಾವರ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಶಶ್ಮಿ ಭಟ್ ಹಂಚಿನ ಮನೆ ಮುಂದಿನ 2 ವರ್ಷ ಗಳ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಶ್ರೀಮತಿ ಮಾಲತಿ ಸೂರ್ಯ,ಶ್ರೀಮತಿ ಗೀತಾoಜಲಿ ಗುರುರಾಜ್,ಕಾರ್ಯದರ್ಶಿಯಾಗಿ ಕು. ಹರ್ಷಿತಾ ಅಜ್ಜಾವರ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಉಷಾ ನವೀನ್, ಖಜಾಂಜಿಯಾಗಿ ಕು.ಲಕ್ಷ್ಮೀ ಪಲ್ಲತಡ್ಕ,ಗೌರವ ಸಲಹೆಗಾರರಾಗಿ ಶ್ರೀಮತಿ ಜಯಲಕ್ಷ್ಮೀ...

ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸ್ವಚ್ಛತಾ ಹೈ ಸೇವಾ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸೆ 28  ರಂದು ಬೃಹತ್ ಸ್ವಚ್ಛತಾ ಅಭಿಯಾನವನ್ನು ಸ್ವಚ್ಛತಾ ಸೇವಾ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ.ಟಿ, ಐ ಕ್ಯೂ ಎ ಸಿ ಸಂಯೋಜಕಿ ಶ್ರೀಮತಿ ಲತಾ ಬಿ.ಟಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಆರತಿ ಕೆ ಹಾಗೂ ಸುಮಿತ್ರಕುಮಾರಿ...

ವಳಲಂಬೆ : ಪುರಾಳಬದಿ ಶ್ರೀ ಶಂಖಚೂಡ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ರಚನೆ ; ಅಧ್ಯಕ್ಷರಾಗಿ ಮಣಿಯಾನ ಸುಬ್ಬಣ್ಣ ಗೌಡ – ಪ್ರಧಾನ ಕಾರ್ಯದರ್ಶಿ ಡಿ.ಆ‌ರ್. ಲೋಕೇಶ್ವರ – ಕೋಶಾಧಿಕಾರಿಯಾಗಿ ಮಾಧವ ಮಾಸ್ತರ್‌ ಮೂಕಮಲೆ

ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ಪೈಕ- ವಳಲಂಬೆ ಇದರ ಜೀರ್ಣೋದ್ದಾರ ಸಮಿತಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ಮಣಿಯಾನ ಸುಬ್ಬಣ್ಣ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಆರ್ ಲೋಕೇಶ್ವರ ಹಾಗೂ ಕೋಶಾಧಿಕಾರಿಯಾಗಿ ಮಾಧವ ಮಾಸ್ತರ್‌ ಮೂಕಮಲೆ ಇವರುಗಳನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ವೆಂಕಟ್ ದಂಬೆಕೋಡಿ ಹಾಗೂ ವೆಂಕಟ್ ವಳಲಂಬೆ, ಜತೆ ಕಾರ್ಯದರ್ಶಿ ಚಿನ್ನಪ್ಪ ಗೌಡ ಮುಚ್ಚಾರ ಹಾಗೂ...

ಅ. 02 ರಿಂದ ಮೆಟ್ಟಿನಡ್ಕ, ಕಂದ್ರಪ್ಪಾಡಿ ರಸ್ತೆ ಕಾಮಗಾರಿ ಆರಂಭ – ಬದಲಿ ರಸ್ತೆ ಬಳಸಲು ಇಲಾಖೆ ಸೂಚನೆ

ಮೆಟ್ಟಿನಡ್ಕ, ಕಂದ್ರಪ್ಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಅಕ್ಟೋಬರ್ 2 ರಿಂದ ನಡೆಯಲಿರುವುದರಿಂದ ರಸ್ತೆ ಬಂದ್ ಆಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬದಲಿ ರಸ್ತೆಯನ್ನು ಬಳಸಿ ಸಹಕರಿಸುವಂತೆ ಲೋಕೋಪಯೋಗಿ ಇಲಾಖೆ ಪ್ರಕಟಣೆ ತಿಳಿಸಿದೆ.
Loading posts...

All posts loaded

No more posts

error: Content is protected !!