- Saturday
- June 27th, 2026
“ದ.ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತರು, ಮುಚ್ಚಿ ಹೋಗಿದ್ದ ಶಾಲೆಯನ್ನು ಮತ್ತೆ ತೆರೆಸಿ ಮುನ್ನಡೆಸಿದ ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ ಕುಮಾರಿ ಬೆಂಡೋಡಿ ರವರು ಇಂದು(ಜ.31) ನಿವೃತ್ತಿ ಹೊಂದಲಿದ್ದಾರೆ.ಕಳೆದ 31 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮೂಲತಃ ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ...
ದೇವಚಳ್ಳ ಗ್ರಾಮಪಂಚಾಯತ್ ವ್ಯಾಪ್ತಿಯ ಮೆದು ರಸ್ತೆ ಯನ್ನು ಶ್ರೀಮತಿ ಅನಿತಾ ಪಾರೆಪ್ಪಾಡಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ನಾಗೇಶ್ ಪಾರೆಪ್ಪಾಡಿ ರಿಬ್ಬನ್ ಎಳೆದು ರಸ್ತೆಗೆ ಚಾಲನೆ ನೀಡಿ, ಅರುಣ ಮೆದು ತೆಂಗಿನಕಾಯಿ ಒಡೆದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸದಸ್ಯರಾದ ಪ್ರಶಾಂತ್ ಮೆದು, ಹಾಗೂ ದುರ್ಗಾದಾಸ್ ಮೆತ್ತಡ್ಕ ಅಲ್ಲದೇ ಪ್ರಸನ್ನ ಮೆದು, ವೆಂಕಟ್ರಮಣ...
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ.) ಮಂಗಳೂರು ಇದರ ವತಿಯಿಂದ ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯ ನಂತೂರು ಮಂಗಳೂರು ಇಲ್ಲಿ ದಿನಾಂಕ ೨೯/೦೧/೨೦೨೬ ಗುರುವಾರ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಡಾ| ಮುರಲೀ ಮೋಹನ ಚೂಂತಾರು ಇವರು ಮಕ್ಕಳಿಗೆ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಟೂತ್ಬ್ರಷ್, ಟೂತ್ ಪೇಸ್ಟಗಳ ಬಗ್ಗೆ...
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಇದರ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಫೆ.14 ಮತ್ತು 15 ರಂದು ಎರಡು ದಿನಗಳ ಕಾಲ ಸಂಜೆ 5:45 ರಿಂದ ರಾತ್ರಿ 9:15 ರವರೆಗೆ “ರಂಗಸಂಭ್ರಮ 2026” ವೈವಿಧ್ಯಮಯ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಲಾಗಿದೆ. ಮಾಜಿ ಸಚಿವರಾದ ಎಸ್.ಅಂಗಾರ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಭರತನಾಟ್ಯ ಕಲಾವಿದೆಯಾಗಿರುವ...
ಸುಬ್ರಹ್ಮಣ್ಯ ಜನವರಿ 29 : ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆಯು ಗುರುವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಭೆಯನ್ನು ಉದ್ದೇಶಿಸಿ ಕಾರ್ಪೊರೇಟ್ ಕಚೇರಿಯ ಮೆಸ್ಕಾಂ ಅಧೀಕ್ಷಕರಾದ ಇಂಜಿನಿಯರ್ ಕೃಷ್ಣರಾಜ್ ಅವರು ಮಾತನಾಡುತ್ತಾ “ಗ್ರಾಮೀಣ ಮಟ್ಟದ ಮೆಸ್ಕಾಂ ಗ್ರಾಹಕರ ವಿದ್ಯುತ್...
ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಸುಳ್ಯ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ "ಕಾನೂನು ಅರಿವು" ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಕುಮಾರ್ ಕೊಡ್ತುಗುಳಿ ಅಧ್ಯಕ್ಷರು ವಕೀಲರ ಸಂಘ ಸುಳ್ಯ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೀನ್ ವ್ಯೂ ವಿದ್ಯಾ ಸಂಸ್ಥೆ ಅಧ್ಯಕ್ಷ...
ಬೆಳ್ಳಾರೆ ಗ್ರಾಮ ಪಂಚಾಯತಿನ ಅಧೀನಕ್ಕೆ ಒಳಪಟ್ಟ ಹಸಿಮೀನು ಮಾರುಕಟ್ಟೆಯ ಬಹಿರಂಗ ಹರಾಜು ಜ.29 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಈ ಬಾರಿ ಈ ಬಹಿರಂಗ ಹರಾಜಿನಲ್ಲಿ ಹಸಿಮೀನು ಮಾರುಕಟ್ಟೆಯನ್ನು ಒಂದು ವರ್ಷದ ಅವಧಿಗೆ 8.69 ಲಕ್ಷಕ್ಕೆ ಅಯ್ಯೂಬ್ ತಂಬಿನಮಕ್ಕಿ ಎಂಬವರು ಪಡೆದುಕೊಂಡರು.ಈ ಬಹಿರಂಗ ಹರಾಜಿನ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್.ರೈ, ಸದಸ್ಯರಾದ ಎನ್.ಎಸ್.ಡಿ ವಿಠಲ್ದಾಸ್,...
ದೇವಚಳ್ಳ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಆಶ್ರಯ ಕಾಲೋನಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಲಾಯಿತು.ಲೋಹಿತ್ ಶ್ರೀ ಕಟೀಲ್ ದೀಪ ಬೆಳಗಿಸಿದರು. ಅಂಗನವಾಡಿ ಸಹಾಯಕಿ ಪುಷ್ಪಾವತಿ ಪುರುಷೋತ್ತಮ ರಿಬ್ಬನ್ ತುಂಡರಿಸಿ, ಶಶಿಧರ್ ಮಾವಿನಕಟ್ಟೆ ತೆಂಗಿನಕಾಯಿ ಒಡೆದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸದಸ್ಯರಾದ ರಾಜೇಶ್ವರಿ ಮಾವಿನಕಟ್ಟೆ, ದುರ್ಗಾದಾಸ್ ಮೆತ್ತಡ್ಕ, ಅಲ್ಲದೇ ರಸ್ತೆಯ ಪಲಾನುಭವಿಗಳು ಉಪಸ್ಥಿತರಿದ್ದರು
ಕೊಡಗು ಸಂಪಾಜೆ ಪೆಟ್ರೋಲ್ ಬಂಕಿನ ಸಮೀಪದಲ್ಲಿ ರಿಕ್ಷಾದ ಹಿಂದಕ್ಕೆ ಕಾರು ಗುದ್ದಿದ ಪರಿಣಾಮ ರಿಕ್ಷಾ ಪಲ್ಟಿಯಾಗಿದ್ದು, ಇದೇ ಸಂದರ್ಭದಲ್ಲಿ ಎದುರಿನಿಂದ ಬಂದ ಟಿಪ್ಪರ್ ಲಾರಿ ಹತ್ತಿ ರಿಕ್ಷಾ ಸವಾರ ಮೃತಪಟ್ಟ ಘಟನೆ ಇಂದು ನಡೆದಿದೆ. ರಿಕ್ಷಾದಲ್ಲಿದ್ದ ಪ್ರಯಾಣಿಕ ಮಹಿಳೆ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರು ನಿಲ್ಲಿಸದೇ ಪರಾರಿಯಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ರಿಕ್ಷಾ ಚಾಲಕ...
ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯಲ್ಲಿ ವಾರ್ಷಿಕ ದ್ಸಿಕ್ರ್ ಹಲ್ಕಾ ಕಾರ್ಯಕ್ರಮ ಜ 28 ರಂದು ರಾತ್ರಿ ನಡೆಯಿತು.ಆರಂಭದಲ್ಲಿ ಮಂಕೂಸ್ ಮೌಲೀದ್ ಪಾರಾಯಣ ನಡೆಯಿತು.ನಂತರ ದ್ಸಿಕ್ರ್ ಹಲ್ಕಾ ನಡೆಯಿತು.ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯ ಖತೀಬ್ ಮುಹಮ್ಮದ್ ರಫೀಖ್ ಬಾಹಸನಿ ಸಾಂದರ್ಭಿಕ ಭಾಷಣಗೈದರು.ಪಳ್ಳಿಮಜಲು ಮಸೀದಿಯ ಗೌರವಾಧ್ಯಕ್ಷರಾದ ಬಹು ಹಸನ್ ಸಖಾಫಿ ಬೆಳ್ಳಾರೆ ದು:ಆ ನೆರವೇರಿಸಿದರು.ಕರಿಂಬಿಲ ಮದರಸದ...
Loading posts...
All posts loaded
No more posts
