- Tuesday
- August 11th, 2026
ಸುಳ್ಯದ ಅಂಬಟೆಡ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ತಾಲೂಕು ಅಂಬೇಡ್ಕರ್ ಭವನದ ಕಾಮಗಾರಿ ಭರದಿಂದ ನಡೆಯುತ್ತಿದ್ದು ಸಚಿವರಾದ ಎಸ್.ಅಂಗಾರರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಸುಳ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಮುರುಳ್ಯ, ಗುತ್ತಿಗೆದಾರ ಯೋಗೀಶ್ ಪೂಜಾರಿ ಉಪಸ್ಥಿತರಿದ್ದರು.ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಸಚಿವರು ಗುತ್ತಿಗೆದಾರರಿಗೆ...
ಗುತ್ತಿಗಾರಿನ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಹೇರ್ ಪಾಯಿಂಟ್ ಆ.24 ರಂದು ಶುಭಾರಂಭಗೊಂಡಿದೆ. ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ ದೇವಿ ಸಿಟಿ ಕಾಂಪ್ಲೆಕ್ಸ್ ನ ಮಾಲಕ ದೇವಿಪ್ರಸಾದ್ ಚಿಕ್ಮುಳಿ, ಪ್ರಮೋದ್ ಮೆಟ್ಟಿನಡ್ಕ, ನವ್ಯ ಮೆಡಿಕಲ್ಸ್ ನ ಅರವಿಂದ, ವಿಕ್ರಂ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಎಡಮಂಗಲ ಗ್ರಾಮದ ಕಲ್ಲೆಂಬಿ ಶ್ರೀ ಉಳ್ಳಾಕ್ಲು ಪುರುಷ ದೈವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸೆ. 01 ರಂದು ಬೆಳಿಗ್ಗೆ ಗಂಟೆ 10.00ಕ್ಕೆ ನಡೆಯಲಿರುವುದು. ಭಗವದ್ಭಕ್ತರೆಲ್ಲರೂ ಆಗಮಿಸಿ, ಶ್ರೀ ಸತ್ಯನಾರಾಯಣ ದೇವರ ಪೂಜೆಯಲ್ಲಿ ಭಾಗವಹಿಸಿ, ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ದೇವರ ಕೃಪೆಗೆ ಪಾತ್ರರಾಗಬೇಕಾಗಬೇಕೆಂದು ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು ಹಾಗೂ ಕಲ್ಲೆಂಬಿ ಗ್ರಾಮದ ಕೂಡುಕಟ್ಟಿನ ಸಮಸ್ತರು...
ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಒಡಿಯೂರು ಶ್ರೀ ನವದುರ್ಗಾ ವಿಕಾಸವಾಹಿನಿ ಸ್ವ-ಸಹಾಯ ಸಂಘವನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ಗ್ರಾಮ ಸೇವಾಧೀಕ್ಷಿತೆ ಪವಿತ್ರಾ ಹಾಗೂ ತಂಡದ ಸದಸ್ಯರಾದ ಉಮೇಶ್, ರಮೇಶ್, ಸುನೀಲ್, ರವಿಚಂದ್ರ, ಧನಂಜಯ, ಸುದೀಪ್ ರವರು ಉಪಸ್ಥಿತರಿದ್ದರು.
ಸೆ.03 ಶನಿವಾರದಂದು ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಸೋಣ ಶನಿವಾರ ಆಚರಣೆ ನಡೆಯಲಿದೆ. ವರದಿ :- ಉಲ್ಲಾಸ್ ಕಜ್ಜೋಡಿ
ಐವರ್ನಾಡಿನ ನವೀನ್ ಎಂಬವರು ಕಳೆದ ವಾರದ ಹಿಂದೆ ಅಮೂಲ್ಯವಾದ ದಾಖಲೆ ಹಾಗೂ ನಗದು ಹೊಂದಿದ್ದ ಪರ್ಸ್ ಕಳೆದು ಹೋಗಿದ್ದರು. ಆ.೨೬ರಂದು ಶರಣವನ್ರವರಿಗೆ ಪರ್ಸ್ ಸಿಕ್ಕಿದ್ದು, ಅವರು ನವೀನ್ರವರನ್ನು ಸಂಪರ್ಕಿಸಿ ಪರ್ಸ್ ಅನ್ನು ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಆ.28 ರಂದು ಐವರ್ನಾಡಿನ ಗೆಳೆಯರ ಬಳಗ ದೇರಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೆಸರ್ ಡಿ ಒಂಜಿ ದಿನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯ.ಸ.ಸದಸ್ಯರಾದ ಅರ್ಚಕ ಪದ್ಮನಾಭ ಭಟ್ಕೂಟದ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ನಂದಕುಮಾರ...
ಮರ್ಕಂಜದ ಗೋಳಿಯಡ್ಕ ವಠಾರದಲ್ಲಿ ಆ.31ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಗೋಳಿಯಡ್ಕ ಮರ್ಕಂಜ ಇದರ ವತಿಯಿಂದ 6ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ. ಬೆಳಿಗ್ಗೆ ಶಿವಶಂಕರ ಭಟ್ ಸುಳ್ಯ ಇವರ ನೇತೃತ್ವದಲ್ಲಿ ಗಣಪತಿ ಹವನ, ಗಣಪತಿ ವಿಗ್ರಹದ ಆಗಮನ, ವಿಗ್ರಹ ಪ್ರತಿಷ್ಠಾಪನೆ ನಂತರ ಬೆಳಗ್ಗಿನ ಪೂಜೆ ನಡೆಯಿತು. ಬಳಿಕ ಸ್ಫೂರ್ತಿ ಮಹಿಳಾ ಮಂಡಳಿ,...
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆ.31 ಮತ್ತು ಸೆ.01 ರಂದು ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ, ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ 51 ವರ್ಷದ ಗಣೇಶೋತ್ಸವವು ನಡೆಯಲಿದೆ. ಬೆಳಿಗ್ಗೆ ಗಂಟೆ 8.00ಕ್ಕೆ ಶ್ರೀ ಗಣಪತಿ ಪ್ರತಿಷ್ಠೆ, ವಿವಿಧ ಸ್ಪರ್ಧೆಗಳು, ಗಣಪತಿ ಹವನ ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ಸಮಾರಂಭ.ಸಂಜೆ ವೈಯಕ್ತಿಕ ರಂಗಪೂಜೆ...
ಜಾಲ್ಲೂರು ಗ್ರಾಮದ ಅಡ್ಕಾರು ವಿನೋಬನಗರದಲ್ಲಿ ಕಳೆದ 49 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕೆ. ಸುಬ್ರಾಯ ಅನಂತ ಕಾಮತ್ & ಸನ್ಸ್ ಸಂಸ್ಥೆಯು ಐವತ್ತನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಪ್ರಯುಕ್ತ ಗ್ರಾಹಕರ ಬೇಡಿಕೆಯ ಮೇರೆಗೆ ಗೋಡಂಬಿಯ ನೂರು ಗ್ರಾಂನ ಪೌಚನ್ನು ಗೌರಿ - ಗಣೇಶ ಹಬ್ಬದ ದಿನವಾದ ಆ.30ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಸಂಸ್ಥೆಯ ಮಾಲಕರಾದ ಕೆ. ಸುಧಾಕರ ಕಾಮತ್...
Loading posts...
All posts loaded
No more posts
